''ಮಾತಾಜೀ ಅವರ ನಿರಂತರವಾಗಿ ಕರ್ತವ್ಯ ನಿಷ್ಠೆಯು ಅರ್ಥಪೂರ್ಣ ಬದುಕಿಗೆ ದೊಡ್ಡ ಉದಾಹರಣೆ. ಅವರು ಅತ್ಯಂತ ಕಷ್ಟಕರ ಸನ್ನಿವೇಶದಲ್ಲೂ ದೇವರ ಮೇಲೆ ಅಚಲ ನಂಬಿಕೆ ಇರಿಸಿಕೊಂಡಿದ್ದರು. ಭಕ್ತಿಯ ಮೌಲ್ಯಗಳನ್ನು ಹೆಚ್ಚಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕುಟುಂಬ ಸದಸ್ಯರಿಗೆ ಸಂಘವು ಸಂತಾಪವನ್ನು ಸೂಚಿಸುತ್ತದೆ. ಅಗಲಿದ ಮಾತಾಜೀ ಅವರ ಆತ್ಮಕ್ಕೆ ಸದ್ಗತಿಯನ್ನು ದೇವರಲ್ಲಿ ಆರೆಸ್ಸೆಸ್ ಪ್ರಾರ್ಥಿಸುತ್ತದೆ.'' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.