<p><strong>ನವದೆಹಲಿ:</strong> ‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್ಎಸ್ಎಸ್) ಬದಲಾಗಿಲ್ಲ. ಆದರೆ ಕಾಲಕ್ಕೆ ಅನುಗುಣವಾಗಿ ವಿಕಾಸಗೊಳ್ಳುತ್ತಿದೆ’ ಎಂದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಭಾನುವಾರ ಹೇಳಿದರು.</p>.<p>ಆರ್ಎಸ್ಎಸ್ನ 100 ವರ್ಷಗಳ ಪಯಣದ ಕಥಾಹಂದರವನ್ನು ಹೊಂದಿರುವ ‘ಶತಕ್’ ಸಿನಿಮಾದ ಹಾಡು ಬಿಡುಗಡೆಗಾಗಿ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಂಘವು ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅದು ವಿಕಾಸಗೊಳ್ಳುತ್ತಾ ಹೊಸ ರೂಪ ತಳೆಯುವುದನ್ನು ಜನರು ಬದಲಾವಣೆ ಎಂದುಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಸಂಘವು ಬದಲಾಗಿಲ್ಲ; ಹಂತಹಂತವಾಗಿ ಬೆಳೆಯುತ್ತಿದೆ’ ಎಂದರು.</p>.<p> ‘ಬೀಜವೊಂದು ಚಿಗುರಿ ಹೆಮ್ಮರವಾಗಿ ಬೆಳೆದು, ಹೂವು–ಹಣ್ಣುಗಳನ್ನು ನೀಡುವಂತೆ ಸಂಘವೂ ಬೆಳೆಯುತ್ತಿದೆ’ ಎಂದು ಹೇಳಿದರು.</p>.<p>‘ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರು ಹುಟ್ಟುತ್ತಲೇ ದೇಶಭಕ್ತ. ಅವರು ತಮ್ಮ ಇಡೀ ಜೀವನವನ್ನು ದೇಶಸೇವೆಗಾಗಿ ಮುಡಿಪಿಟ್ಟಿದ್ದರು. ಸಂಘ ಮತ್ತು ಹೆಡಗೇವಾರ್ ಎರಡೂ ಸಮನಾರ್ಥಕ ಪದಗಳು’ ಎಂದು ಪ್ರತಿಪಾದಿಸಿದರು.</p>.<p>‘ಪ್ಲೇಗ್ ರೋಗದಿಂದ ತಂದೆ–ತಾಯಿ ನಿಧನರಾದಾಗ ಹೆಡಗೇವಾರ್ ಅವರಿಗೆ ಕೇವಲ 11 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಂಥ ಆಘಾತ ಎದುರಾಗಿದ್ದರೂ ಅವರು ಎದೆಗುಂದಲಿಲ್ಲ’ ಎಂದರು.</p>.<p>ಗಾಯಕ ಸುಖ್ವಿಂದರ್ ಸಿಂಗ್, ನಿರ್ದೇಶಕ ಆಶಿಶ್ ಮಾಲ್, ಸಹ ನಿರ್ಮಾಪಕ ಆಶಿಶ್ ತಿವಾರಿ, ಆರ್ಎಸ್ಎಸ್ ಪದಾಧಿಕಾರಿ ಬೈಯಾಜಿ ಜೋಶಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>
<p><strong>ನವದೆಹಲಿ:</strong> ‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್ಎಸ್ಎಸ್) ಬದಲಾಗಿಲ್ಲ. ಆದರೆ ಕಾಲಕ್ಕೆ ಅನುಗುಣವಾಗಿ ವಿಕಾಸಗೊಳ್ಳುತ್ತಿದೆ’ ಎಂದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಭಾನುವಾರ ಹೇಳಿದರು.</p>.<p>ಆರ್ಎಸ್ಎಸ್ನ 100 ವರ್ಷಗಳ ಪಯಣದ ಕಥಾಹಂದರವನ್ನು ಹೊಂದಿರುವ ‘ಶತಕ್’ ಸಿನಿಮಾದ ಹಾಡು ಬಿಡುಗಡೆಗಾಗಿ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಂಘವು ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಅದು ವಿಕಾಸಗೊಳ್ಳುತ್ತಾ ಹೊಸ ರೂಪ ತಳೆಯುವುದನ್ನು ಜನರು ಬದಲಾವಣೆ ಎಂದುಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಸಂಘವು ಬದಲಾಗಿಲ್ಲ; ಹಂತಹಂತವಾಗಿ ಬೆಳೆಯುತ್ತಿದೆ’ ಎಂದರು.</p>.<p> ‘ಬೀಜವೊಂದು ಚಿಗುರಿ ಹೆಮ್ಮರವಾಗಿ ಬೆಳೆದು, ಹೂವು–ಹಣ್ಣುಗಳನ್ನು ನೀಡುವಂತೆ ಸಂಘವೂ ಬೆಳೆಯುತ್ತಿದೆ’ ಎಂದು ಹೇಳಿದರು.</p>.<p>‘ಆರ್ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್ ಅವರು ಹುಟ್ಟುತ್ತಲೇ ದೇಶಭಕ್ತ. ಅವರು ತಮ್ಮ ಇಡೀ ಜೀವನವನ್ನು ದೇಶಸೇವೆಗಾಗಿ ಮುಡಿಪಿಟ್ಟಿದ್ದರು. ಸಂಘ ಮತ್ತು ಹೆಡಗೇವಾರ್ ಎರಡೂ ಸಮನಾರ್ಥಕ ಪದಗಳು’ ಎಂದು ಪ್ರತಿಪಾದಿಸಿದರು.</p>.<p>‘ಪ್ಲೇಗ್ ರೋಗದಿಂದ ತಂದೆ–ತಾಯಿ ನಿಧನರಾದಾಗ ಹೆಡಗೇವಾರ್ ಅವರಿಗೆ ಕೇವಲ 11 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಂಥ ಆಘಾತ ಎದುರಾಗಿದ್ದರೂ ಅವರು ಎದೆಗುಂದಲಿಲ್ಲ’ ಎಂದರು.</p>.<p>ಗಾಯಕ ಸುಖ್ವಿಂದರ್ ಸಿಂಗ್, ನಿರ್ದೇಶಕ ಆಶಿಶ್ ಮಾಲ್, ಸಹ ನಿರ್ಮಾಪಕ ಆಶಿಶ್ ತಿವಾರಿ, ಆರ್ಎಸ್ಎಸ್ ಪದಾಧಿಕಾರಿ ಬೈಯಾಜಿ ಜೋಶಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.</p>