<p><strong>ಪತ್ತನಂತಿಟ್ಟ:</strong> ಶಬರಿಮಲೆ ಸಮೀಪದ ನಿಲಕ್ಕಲ್ನಲ್ಲಿ ₹ 6.12ಕೋಟಿ ವೆಚ್ಚದಲ್ಲಿ ಸುಧಾರಿತ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಕೇರಳ ಆರೋಗ್ಯ ಇಲಾಖೆ ಸೋಮವಾರ ಹೇಳಿದೆ. ಶಬರಿಮಲೆ ತೀರ್ಥಯಾತ್ರೆ ಋತು ಆರಂಭವಾಗುವ ಕೆಲವೇ ದಿನಗಳ ಮೊದಲು ಈ ಘೋಷಣೆ ಹೊರಬಿದ್ದಿದೆ.</p>.ಶಬರಿಮಲೆ ಚಿನ್ನ ಕಳವು ಪ್ರಕರಣ: ದೇಗುಲದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಬಂಧನ.<p>ಸ್ಥಳೀಯರಿಗೂ ಹಾಗೂ ಯಾತ್ರಾರ್ಥಿಗಳಿಗೂ ಲಾಭವಾಗುವಂತೆ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.</p><p>ನಿಲಕ್ಕಲ್ನಲ್ಲಿ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ನೀಡಿದ ಭೂಮಿಯಲ್ಲಿ ಸುಮಾರು ₹ 6.12 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ವೀಣಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.ಶಬರಿಮಲೆ ಚಿನ್ನ ಕಳವು: ದೇಗುಲ ನವೀಕರಣ ಯೋಜನೆ ಹಗರಣವಾಗಿ ಮಾರ್ಪಟ್ಟಿದ್ದು ಹೇಗೆ?.<p>‘ನಿಲಕ್ಕಲ್ಗೆ ಭೇಟಿ ನೀಡುವ ಯಾತ್ರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಬದ್ಧತೆಯ ಭಾಗವಾಗಿ ಶಬರಿಮಲೆ ಬೇಸ್ ಕ್ಯಾಂಪ್ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ’ ಎಂದು ಜಾರ್ಜ್ ಹೇಳಿದ್ದಾರೆ.</p><p>ಆಸ್ಪತ್ರೆಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p><p>ಒಟ್ಟು 10,700 ಚದರ ಅಡಿ ವಿಸ್ತೀರ್ಣದ ಈ ಕಟ್ಟಡದಲ್ಲಿ ಹೊರ ರೋಗಿಗಳಿಗೆ (ಒಪಿಡಿ) ಮೂರು ಕೊಠಡಿಗಳು, ತುರ್ತು ವಿಭಾಗ, ದಾದಿಯರ ಕೇಂದ್ರ, ಇಸಿಜಿ ಕೊಠಡಿ, ಐಸಿಯು ಮತ್ತು ಔಷಧಾಲಯದಂತಹ ಸೌಲಭ್ಯಗಳನ್ನು ಹೊಂದಿರುತ್ತದೆ.</p>.ಶಬರಿಮಲೆ | ಕಳುವಾದ ಚಿನ್ನ ಕೋಟ್ಯಧಿಪತಿ ಮನೆಯಲ್ಲಿ ಪತ್ತೆ: ವಿಪಕ್ಷ ನಾಯಕ ಸತೀಶನ್.<p>ಮೊದಲ ಮಹಡಿಯಲ್ಲಿ ಎಕ್ಸ್-ರೇ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ ಇರಲಿದೆ. ಉದ್ಘಾಟನಾ ಸಮಾರಂಭವು ನಿಲಕ್ಕಲ್ ದೇವಾಲಯದ ಬಳಿ ನಡೆಯಲಿದೆ ಎಂದು ಹೇಳಲಾಗಿದೆ.</p><p>ಈ ಕಾರ್ಯಕ್ರಮದಲ್ಲಿ ವೀಣಾ ಜಾರ್ಜ್, ರಾಣಿ ಕ್ಷೇತ್ರದ ಶಾಸಕ ಪ್ರಮೋದ್ ನಾರಾಯಣ್, ಸಂಸದ ಆಂಟೋ ಆ್ಯಂಟನಿ, ಉಪ ಸ್ಪೀಕರ್ ಚಿತ್ತಾಯಂ ಗೋಪಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಾರ್ಜ್ ಅಬ್ರಹಾಂ ಮತ್ತು ಟಿಡಿಬಿ ಅಧ್ಯಕ್ಷ ಪಿ ಎಸ್ ಪ್ರಶಾಂತ್ ಭಾಗವಹಿಸಲಿದ್ದಾರೆ.</p> .ಶಬರಿಮಲೆ | ಕಳುವಾದ ಚಿನ್ನ ಕೋಟ್ಯಧಿಪತಿ ಮನೆಯಲ್ಲಿ ಪತ್ತೆ: ವಿಪಕ್ಷ ನಾಯಕ ಸತೀಶನ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪತ್ತನಂತಿಟ್ಟ:</strong> ಶಬರಿಮಲೆ ಸಮೀಪದ ನಿಲಕ್ಕಲ್ನಲ್ಲಿ ₹ 6.12ಕೋಟಿ ವೆಚ್ಚದಲ್ಲಿ ಸುಧಾರಿತ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಕೇರಳ ಆರೋಗ್ಯ ಇಲಾಖೆ ಸೋಮವಾರ ಹೇಳಿದೆ. ಶಬರಿಮಲೆ ತೀರ್ಥಯಾತ್ರೆ ಋತು ಆರಂಭವಾಗುವ ಕೆಲವೇ ದಿನಗಳ ಮೊದಲು ಈ ಘೋಷಣೆ ಹೊರಬಿದ್ದಿದೆ.</p>.ಶಬರಿಮಲೆ ಚಿನ್ನ ಕಳವು ಪ್ರಕರಣ: ದೇಗುಲದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಬಂಧನ.<p>ಸ್ಥಳೀಯರಿಗೂ ಹಾಗೂ ಯಾತ್ರಾರ್ಥಿಗಳಿಗೂ ಲಾಭವಾಗುವಂತೆ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.</p><p>ನಿಲಕ್ಕಲ್ನಲ್ಲಿ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ನೀಡಿದ ಭೂಮಿಯಲ್ಲಿ ಸುಮಾರು ₹ 6.12 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ವೀಣಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.ಶಬರಿಮಲೆ ಚಿನ್ನ ಕಳವು: ದೇಗುಲ ನವೀಕರಣ ಯೋಜನೆ ಹಗರಣವಾಗಿ ಮಾರ್ಪಟ್ಟಿದ್ದು ಹೇಗೆ?.<p>‘ನಿಲಕ್ಕಲ್ಗೆ ಭೇಟಿ ನೀಡುವ ಯಾತ್ರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಬದ್ಧತೆಯ ಭಾಗವಾಗಿ ಶಬರಿಮಲೆ ಬೇಸ್ ಕ್ಯಾಂಪ್ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ’ ಎಂದು ಜಾರ್ಜ್ ಹೇಳಿದ್ದಾರೆ.</p><p>ಆಸ್ಪತ್ರೆಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p><p>ಒಟ್ಟು 10,700 ಚದರ ಅಡಿ ವಿಸ್ತೀರ್ಣದ ಈ ಕಟ್ಟಡದಲ್ಲಿ ಹೊರ ರೋಗಿಗಳಿಗೆ (ಒಪಿಡಿ) ಮೂರು ಕೊಠಡಿಗಳು, ತುರ್ತು ವಿಭಾಗ, ದಾದಿಯರ ಕೇಂದ್ರ, ಇಸಿಜಿ ಕೊಠಡಿ, ಐಸಿಯು ಮತ್ತು ಔಷಧಾಲಯದಂತಹ ಸೌಲಭ್ಯಗಳನ್ನು ಹೊಂದಿರುತ್ತದೆ.</p>.ಶಬರಿಮಲೆ | ಕಳುವಾದ ಚಿನ್ನ ಕೋಟ್ಯಧಿಪತಿ ಮನೆಯಲ್ಲಿ ಪತ್ತೆ: ವಿಪಕ್ಷ ನಾಯಕ ಸತೀಶನ್.<p>ಮೊದಲ ಮಹಡಿಯಲ್ಲಿ ಎಕ್ಸ್-ರೇ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ ಇರಲಿದೆ. ಉದ್ಘಾಟನಾ ಸಮಾರಂಭವು ನಿಲಕ್ಕಲ್ ದೇವಾಲಯದ ಬಳಿ ನಡೆಯಲಿದೆ ಎಂದು ಹೇಳಲಾಗಿದೆ.</p><p>ಈ ಕಾರ್ಯಕ್ರಮದಲ್ಲಿ ವೀಣಾ ಜಾರ್ಜ್, ರಾಣಿ ಕ್ಷೇತ್ರದ ಶಾಸಕ ಪ್ರಮೋದ್ ನಾರಾಯಣ್, ಸಂಸದ ಆಂಟೋ ಆ್ಯಂಟನಿ, ಉಪ ಸ್ಪೀಕರ್ ಚಿತ್ತಾಯಂ ಗೋಪಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಾರ್ಜ್ ಅಬ್ರಹಾಂ ಮತ್ತು ಟಿಡಿಬಿ ಅಧ್ಯಕ್ಷ ಪಿ ಎಸ್ ಪ್ರಶಾಂತ್ ಭಾಗವಹಿಸಲಿದ್ದಾರೆ.</p> .ಶಬರಿಮಲೆ | ಕಳುವಾದ ಚಿನ್ನ ಕೋಟ್ಯಧಿಪತಿ ಮನೆಯಲ್ಲಿ ಪತ್ತೆ: ವಿಪಕ್ಷ ನಾಯಕ ಸತೀಶನ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>