<p><strong>ಹೈದರಾಬಾದ್</strong>: ಹೈದರಾಬಾದ್ನಲ್ಲಿ ನಿರ್ಮಾಣವಾಗಿರುವ ಫ್ರಾನ್ಸ್ನ ಸಫ್ರಾನ್ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಬುಧವಾರ ಚಾಲನೆ ನೀಡಿದರು.</p>.<p>ಬಳಿಕ ಮಾತನಾಡಿದ ಅವರು, ‘ಹೂಡಿಕೆದಾರರಿಗೆ ಭಾರತವು ನಂಬಿಕಸ್ಥ ಪಾಲುದಾರ. ಹೂಡಿಕೆದಾರರೆಂದರೆ ಸಹ ಸೃಷ್ಟಿಕರ್ತರಿದ್ದಂತೆ’ ಎಂದು ಅವರು ಬಣ್ಣಿಸಿದರು.</p>.<p>‘ಈ ಘಟಕವು ವಾಣಿಜ್ಯ ವಿಮಾನಗಳಲ್ಲಿ ಬಳಸುವ ಲೀಪ್ ಎಂಜಿನ್ಗಳನ್ನು ತಯಾರಿಸಲಿದೆ ಮತ್ತು ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಿದೆ’ ಎಂದು ಅವರು ಹೇಳಿದರು.</p>.<p>‘ದೇಶದ ನಾಗರಿಕ ವಿಮಾನಯಾನ ವಲಯವು ವೇಗಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಈ ನಿಟ್ಟಿನಲ್ಲಿ ಸಫ್ರಾನ್ ಘಟಕವು ವಿಮಾನಗಳ ಎಂಜಿನ್, ಬಿಡಿಭಾಗಗಳು ಮತ್ತು ಪ್ರೊಪಲ್ಷನ್ ವ್ಯವಸ್ಥೆಯಲ್ಲಿ ಹೊಸ ಹೊಸ ವಿನ್ಯಾಸಗಳನ್ನು ಆವಿಷ್ಕರಿಸಬೇಕು’ ಎಂದರು.</p>.<p>ಸಫ್ರಾನ್ ಏರ್ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾ (ಎಸ್ಎಇಎಸ್ಐ) ಲೀಪ್ ಎಂಜಿನ್ಗಳ ಜಗತ್ತಿನ ಅತಿ ದೊಡ್ಡ ಎಂಆರ್ಒ (ಎಂಜಿನ್ಗಳ ನಿರ್ವಹಣೆ, ದುರಸ್ತಿ) ಘಟಕವಾಗಿದೆ. ಇದು 2026ರಿಂದ ಕಾರ್ಯಾರಂಭಿಸಲಿದ್ದು, ವಿಮಾನಯಾನ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವನ್ನು ಬಲಪಡಿಸಲಿದೆ ಎಂದು ಹೇಳಲಾಗಿದೆ.</p>.<p>ನೂತನ ಘಟಕವು ವಾರ್ಷಿಕ ಗರಿಷ್ಠ 300 ಲೀಪ್ (ಎಲ್ಇಎಪಿ) ಎಂಜಿನ್ಗಳ ಸರ್ವೀಸ್ ಮಾಡುವಂತೆ ವಿನ್ಯಾಸಗೊಳಿಸಲಿದೆ. 1,000ಕ್ಕೂ ಹೆಚ್ಚು ತಂತ್ರಜ್ಞರು ಮತ್ತು ಎಂಜಿನಿಯರ್ಗಳಿಗೆ ಉದ್ಯೋಗ ನೀಡಲಿದೆ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯವು ತಿಳಿಸಿದೆ.</p>.<p><strong>ಬೆಂಗಳೂರು–ಹೈದರಾಬಾದ್ ಡಿಫೆನ್ಸ್ ಕಾರಿಡಾರ್ಗೆ ಒತ್ತಾಯ</strong></p><p><strong>ಹೈದರಾಬಾದ್:</strong> ಬೆಂಗಳೂರು–ಹೈದರಾಬಾದ್ ಪ್ರದೇಶವನ್ನು ‘ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್’ ಎಂದು ಘೋಷಿಸುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.</p><p>ಸಫ್ರಾನ್ ಘಟಕಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕಳೆದ ಕೆಲವು ವರ್ಷಗಳಲ್ಲಿ ತೆಲಂಗಾಣದ ಏರೊಸ್ಪೇಸ್ ಮತ್ತು ಡಿಫೆನ್ಸ್ ವಲಯದಿಂದ ರಫ್ತು ದ್ವಿಗುಣವಾಗಿದೆ. ಕಳೆದ 9 ತಿಂಗಳಲ್ಲಿ ಸುಮಾರು ₹30,000 ಕೋಟಿ ಔಷಧ ರಫ್ತಾಗಿದೆ’ ಎಂದು ತಿಳಿಸಿದರು.</p><p>‘ನಾಗರಿಕ ವಿಮಾನಯಾನ ಸಚಿವಾಲಯದಿಂದ ತೆಲಂಗಾಣವು ಏರೊಸ್ಪೇಸ್ ಪ್ರಶಸ್ತಿ ಪಡೆದಿದೆ. ಏರೊಸ್ಪೇಸ್ ವಲಯದಲ್ಲಿ ಹೂಡಿಕೆಗೆ ಕೌಶಲ ಅಭಿವೃದ್ಧಿ ಅಗತ್ಯ. ಹೀಗಾಗಿ ಬೆಂಗಳೂರು–ಹೈದರಾಬಾದ್ ಪ್ರದೇಶವನ್ನು ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್ ಎಂದು ಘೋಷಿಸಬೇಕು’ ಎಂದು ಮನವಿ ಮಾಡಿದರು.</p><p>ತೆಲಂಗಾಣದ ಏರೊಸ್ಪೇಸ್ ಮತ್ತು ರಕ್ಷಣಾ ವಲಯದ ಬೆಳವಣಿಗೆಯಲ್ಲಿ ಸಫ್ರಾನ್ ಘಟಕವು ಮಹತ್ವ ಮೈಲುಗಲ್ಲಾಗಲಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಹೈದರಾಬಾದ್ನಲ್ಲಿ ನಿರ್ಮಾಣವಾಗಿರುವ ಫ್ರಾನ್ಸ್ನ ಸಫ್ರಾನ್ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಬುಧವಾರ ಚಾಲನೆ ನೀಡಿದರು.</p>.<p>ಬಳಿಕ ಮಾತನಾಡಿದ ಅವರು, ‘ಹೂಡಿಕೆದಾರರಿಗೆ ಭಾರತವು ನಂಬಿಕಸ್ಥ ಪಾಲುದಾರ. ಹೂಡಿಕೆದಾರರೆಂದರೆ ಸಹ ಸೃಷ್ಟಿಕರ್ತರಿದ್ದಂತೆ’ ಎಂದು ಅವರು ಬಣ್ಣಿಸಿದರು.</p>.<p>‘ಈ ಘಟಕವು ವಾಣಿಜ್ಯ ವಿಮಾನಗಳಲ್ಲಿ ಬಳಸುವ ಲೀಪ್ ಎಂಜಿನ್ಗಳನ್ನು ತಯಾರಿಸಲಿದೆ ಮತ್ತು ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಿದೆ’ ಎಂದು ಅವರು ಹೇಳಿದರು.</p>.<p>‘ದೇಶದ ನಾಗರಿಕ ವಿಮಾನಯಾನ ವಲಯವು ವೇಗಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಈ ನಿಟ್ಟಿನಲ್ಲಿ ಸಫ್ರಾನ್ ಘಟಕವು ವಿಮಾನಗಳ ಎಂಜಿನ್, ಬಿಡಿಭಾಗಗಳು ಮತ್ತು ಪ್ರೊಪಲ್ಷನ್ ವ್ಯವಸ್ಥೆಯಲ್ಲಿ ಹೊಸ ಹೊಸ ವಿನ್ಯಾಸಗಳನ್ನು ಆವಿಷ್ಕರಿಸಬೇಕು’ ಎಂದರು.</p>.<p>ಸಫ್ರಾನ್ ಏರ್ಕ್ರಾಫ್ಟ್ ಎಂಜಿನ್ ಸರ್ವೀಸಸ್ ಇಂಡಿಯಾ (ಎಸ್ಎಇಎಸ್ಐ) ಲೀಪ್ ಎಂಜಿನ್ಗಳ ಜಗತ್ತಿನ ಅತಿ ದೊಡ್ಡ ಎಂಆರ್ಒ (ಎಂಜಿನ್ಗಳ ನಿರ್ವಹಣೆ, ದುರಸ್ತಿ) ಘಟಕವಾಗಿದೆ. ಇದು 2026ರಿಂದ ಕಾರ್ಯಾರಂಭಿಸಲಿದ್ದು, ವಿಮಾನಯಾನ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವನ್ನು ಬಲಪಡಿಸಲಿದೆ ಎಂದು ಹೇಳಲಾಗಿದೆ.</p>.<p>ನೂತನ ಘಟಕವು ವಾರ್ಷಿಕ ಗರಿಷ್ಠ 300 ಲೀಪ್ (ಎಲ್ಇಎಪಿ) ಎಂಜಿನ್ಗಳ ಸರ್ವೀಸ್ ಮಾಡುವಂತೆ ವಿನ್ಯಾಸಗೊಳಿಸಲಿದೆ. 1,000ಕ್ಕೂ ಹೆಚ್ಚು ತಂತ್ರಜ್ಞರು ಮತ್ತು ಎಂಜಿನಿಯರ್ಗಳಿಗೆ ಉದ್ಯೋಗ ನೀಡಲಿದೆ ಎಂದು ಪ್ರಧಾನ ಮಂತ್ರಿಯವರ ಕಾರ್ಯಾಲಯವು ತಿಳಿಸಿದೆ.</p>.<p><strong>ಬೆಂಗಳೂರು–ಹೈದರಾಬಾದ್ ಡಿಫೆನ್ಸ್ ಕಾರಿಡಾರ್ಗೆ ಒತ್ತಾಯ</strong></p><p><strong>ಹೈದರಾಬಾದ್:</strong> ಬೆಂಗಳೂರು–ಹೈದರಾಬಾದ್ ಪ್ರದೇಶವನ್ನು ‘ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್’ ಎಂದು ಘೋಷಿಸುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.</p><p>ಸಫ್ರಾನ್ ಘಟಕಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕಳೆದ ಕೆಲವು ವರ್ಷಗಳಲ್ಲಿ ತೆಲಂಗಾಣದ ಏರೊಸ್ಪೇಸ್ ಮತ್ತು ಡಿಫೆನ್ಸ್ ವಲಯದಿಂದ ರಫ್ತು ದ್ವಿಗುಣವಾಗಿದೆ. ಕಳೆದ 9 ತಿಂಗಳಲ್ಲಿ ಸುಮಾರು ₹30,000 ಕೋಟಿ ಔಷಧ ರಫ್ತಾಗಿದೆ’ ಎಂದು ತಿಳಿಸಿದರು.</p><p>‘ನಾಗರಿಕ ವಿಮಾನಯಾನ ಸಚಿವಾಲಯದಿಂದ ತೆಲಂಗಾಣವು ಏರೊಸ್ಪೇಸ್ ಪ್ರಶಸ್ತಿ ಪಡೆದಿದೆ. ಏರೊಸ್ಪೇಸ್ ವಲಯದಲ್ಲಿ ಹೂಡಿಕೆಗೆ ಕೌಶಲ ಅಭಿವೃದ್ಧಿ ಅಗತ್ಯ. ಹೀಗಾಗಿ ಬೆಂಗಳೂರು–ಹೈದರಾಬಾದ್ ಪ್ರದೇಶವನ್ನು ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್ ಎಂದು ಘೋಷಿಸಬೇಕು’ ಎಂದು ಮನವಿ ಮಾಡಿದರು.</p><p>ತೆಲಂಗಾಣದ ಏರೊಸ್ಪೇಸ್ ಮತ್ತು ರಕ್ಷಣಾ ವಲಯದ ಬೆಳವಣಿಗೆಯಲ್ಲಿ ಸಫ್ರಾನ್ ಘಟಕವು ಮಹತ್ವ ಮೈಲುಗಲ್ಲಾಗಲಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>