<p><strong>ಲಖನೌ</strong>: ದೆಹಲಿ–ದೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ಮೇಲೆ ‘ಈ ರಸ್ತೆ ಮುಸ್ಲಿಮರಿಗಲ್ಲ’ ಎಂಬ ದ್ವೇಷಪೂರಿತ ಬರಹ ಬರೆದಿದ್ದ ಪ್ರಕರಣ ಸಂಬಂಧ ಬಲಪಂಥೀಯ ಸಂಘಟನೆಯೊಂದರ ಮೇಲೆ ಉತ್ತರ ಪ್ರದೇಶದ ಸಹಾರನಪುರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>‘ಕೋಮು ವೈಷಮ್ಯಕ್ಕೆ ಕಾರಣವಾಗುವ ಬರಹ ಇದ್ದ ಬಗ್ಗೆ ಶುಕ್ರವಾರ ಮಾಹಿತಿ ಲಭ್ಯವಾಗಿದ್ದು, ಸದ್ಯ ಇದನ್ನು ಅಳಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸ್ಪ್ರೇ ಪೇಯಿಂಟ್ ಬಳಸಿ ಇಬ್ಬರು ಮಹಿಳೆಯರು ಬರಹ ಬರೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಉತ್ತರಾಖಂಡ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ ಕಾರು ಹಾಗೂ ಮಹಿಳೆ ಸೇರಿದಂತೆ ಕೆಲವರು ‘ಜೈ ಶ್ರೀ ರಾಮ್’ ಎಂದು ಪಠಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.</p>.<p>ಬಿಎನ್ಎಸ್ನ ಸೆಕ್ಷನ್ 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಡಿಯೊದ ವಿಶ್ವಾಸಾರ್ಹತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಭದ್ರತೆ ಮತ್ತು ಗಸ್ತು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p>ಗಾಜಿಯಾಬಾದ್ನ ಹಿಂದೂ ರಕ್ಷಾ ದಳದ ನಾಯಕ ಭೂಪೇಂದ್ರ ಚೌದರಿ ಅಲಿಯಾಸ್ ಪಿಂಕಿ ಭಯ್ಯಾ ಅವರು ತಮ್ಮ ಸಂಘಟನೆಯ ಸದಸ್ಯರೇ ಈ ಬರಹ ಬರೆದಿದ್ದಾರೆ ಎಂದು ಖಚಿತಪಡಿಸಿದ್ದಾರೆ ಎನ್ನಲಾಗಿದೆ.</p>.<p>ಸಾಮಾಜಿಕ ಮಾಧ್ಯಮ ಪೋಸ್ಟ್ವೊಂದರಲ್ಲಿ ಅವರು, ‘ಹಿಂದೂಗಳ ತೆರಿಗೆ ಹಣದಿಂದ ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ ಅವರು ಬರೆದ ಬರಹ ಸರಿಯಾಗಿದೆ’ ಎಂದು ಹೇಳಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ</strong>: ದೆಹಲಿ–ದೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ಮೇಲೆ ‘ಈ ರಸ್ತೆ ಮುಸ್ಲಿಮರಿಗಲ್ಲ’ ಎಂಬ ದ್ವೇಷಪೂರಿತ ಬರಹ ಬರೆದಿದ್ದ ಪ್ರಕರಣ ಸಂಬಂಧ ಬಲಪಂಥೀಯ ಸಂಘಟನೆಯೊಂದರ ಮೇಲೆ ಉತ್ತರ ಪ್ರದೇಶದ ಸಹಾರನಪುರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.</p>.<p>‘ಕೋಮು ವೈಷಮ್ಯಕ್ಕೆ ಕಾರಣವಾಗುವ ಬರಹ ಇದ್ದ ಬಗ್ಗೆ ಶುಕ್ರವಾರ ಮಾಹಿತಿ ಲಭ್ಯವಾಗಿದ್ದು, ಸದ್ಯ ಇದನ್ನು ಅಳಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಸ್ಪ್ರೇ ಪೇಯಿಂಟ್ ಬಳಸಿ ಇಬ್ಬರು ಮಹಿಳೆಯರು ಬರಹ ಬರೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಉತ್ತರಾಖಂಡ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ ಕಾರು ಹಾಗೂ ಮಹಿಳೆ ಸೇರಿದಂತೆ ಕೆಲವರು ‘ಜೈ ಶ್ರೀ ರಾಮ್’ ಎಂದು ಪಠಿಸುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.</p>.<p>ಬಿಎನ್ಎಸ್ನ ಸೆಕ್ಷನ್ 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಡಿಯೊದ ವಿಶ್ವಾಸಾರ್ಹತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಭದ್ರತೆ ಮತ್ತು ಗಸ್ತು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p>ಗಾಜಿಯಾಬಾದ್ನ ಹಿಂದೂ ರಕ್ಷಾ ದಳದ ನಾಯಕ ಭೂಪೇಂದ್ರ ಚೌದರಿ ಅಲಿಯಾಸ್ ಪಿಂಕಿ ಭಯ್ಯಾ ಅವರು ತಮ್ಮ ಸಂಘಟನೆಯ ಸದಸ್ಯರೇ ಈ ಬರಹ ಬರೆದಿದ್ದಾರೆ ಎಂದು ಖಚಿತಪಡಿಸಿದ್ದಾರೆ ಎನ್ನಲಾಗಿದೆ.</p>.<p>ಸಾಮಾಜಿಕ ಮಾಧ್ಯಮ ಪೋಸ್ಟ್ವೊಂದರಲ್ಲಿ ಅವರು, ‘ಹಿಂದೂಗಳ ತೆರಿಗೆ ಹಣದಿಂದ ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ ಅವರು ಬರೆದ ಬರಹ ಸರಿಯಾಗಿದೆ’ ಎಂದು ಹೇಳಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>