ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಮಸ್ಕಾರ ಅರುಣ್ ಯೋಗಿರಾಜ್. ನೀವು ನಿಜವಾಗಿಯೂ ಭಗವಾನ್ ವಿಶ್ವಕರ್ಮರಿಂದ ಆಶೀರ್ವದಿಸಲ್ಪಟ್ಟಿದ್ದೀರಿ. ನೀವು ಕೆತ್ತಿರುವ ಭಗವಾನ್ ರಾಮ ಲಲ್ಲಾ ಶಿಲ್ಪವು ಕಲಾವಿದನಾಗಿ ನನಗೆ ಹೃದಯಸ್ಪರ್ಶಿಯಾಗಿದೆ. ಪ್ರಭು ಶ್ರೀ ರಾಮ ಅವರ ಆಶೀರ್ವಾದ ಯಾವಾಗಲೂ ನಿಮ್ಮ ಮೇಲಿರಲಿ. ಜೈ ಶ್ರೀ ರಾಮ್' ಎಂದು ಪಟ್ನಾಯಕ್ ಹೇಳಿದ್ದಾರೆ.
ಪಟ್ನಾಯಕ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ಯೋಗಿರಾಜ್, 'ನಿಮ್ಮ ಪ್ರಶಂಸೆ ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರೇಪಿಸುತ್ತದೆ' ಎಂದಿದ್ದಾರೆ.