ಶಿವಸೇನಾವು ಎನ್ಸಿಪಿ ಅಥವಾ ಕಾಂಗ್ರೆಸ್ನೊಂದಿಗೆ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾವುತ್, ರಾಜ್ಯದ ಜನರನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಗಾಗಿ ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಮಾತುಕತೆ ನಡೆಯುತ್ತಿದೆ.ಒಂದೇ ಪಕ್ಷದ ಅಥವಾ ಮೈತ್ರಿಯಾದರೂ ಸರ್ಕಾರಕ್ಕೆ ಆಡಳಿತದ ಕಾರ್ಯಸೂಚಿ ಅಗತ್ಯವಾಗಿರುತ್ತದೆ. ಬರ, ಅಕಾಲಿಕ ಮಳೆಗೆ ಸಂಬಂಧಿಸಿದಂತೆ ಮೂಲಸೌಕರ್ಯದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ನಮ್ಮೊಂದಿಗೆ ಬರುವವರು ಅನುಭವಿ ಆಡಳಿತಗಾರರು. ಅವರ ಅನುಭವದ ಲಾಭವನ್ನು ನಾವು ಪಡೆಯುತ್ತೇವೆ ಎಂದು ತಿಳಿಸಿದರು.