ಮುಂಬೈ: ಹಿರಿಯ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಅವರು ಕಾಂಗ್ರೆಸ್ ತೊರೆಯಲಿದ್ದಾರೆ ಎನ್ನುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನಾದ (ಯುಟಿಬಿ) ನಾಯಕ ಸಂಜಯ್ ರಾವುತ್, ‘ನಮ್ಮ ಶಿವಸೇನಾದಿಂದ ಹಾಗೂ ಎನ್ಸಿಪಿಯಿಂದ ಅಜಿತ್ ಪವಾರ್ ಅವರೇ ಬಿಟ್ಟು ಹೋದರು. ಏನಾಯಿತು’ ಎಂದು ಪ್ರಶ್ನಿಸಿದ್ದಾರೆ.
‘ಇವರಿಗೆಲ್ಲಾ ನಿಷ್ಠೆ ಇಲ್ಲ, ಹೇಡಿಗಳು. ಇ.ಡಿ. ಭಯದಿಂದ ಪಕ್ಷ ತೊರೆದಿದ್ದಾರೆ’ ಎಂದು ಹೇಳಿದ್ದಾರೆ.