ಆ. 28ರಂದು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿದ್ದ ಪುಣೆಯ ಪೊಲೀಸರು ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್, ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟಗಾರರಾದ ಅರುಣ್ ಫೆರೆರಾ, ವರ್ನಾನ್ ಗೋನ್ಸಾಲ್ವೆಸ್, ಸುಧಾ ಭಾರದ್ವಾಜ್ ಮತ್ತು ಗೌತಮ್ ನವ್ಲಾಖ್ ಅವರನ್ನು ಬಂಧಿಸಿದ್ದರು.
ಬಂಧನ ಪ್ರಶ್ನಿಸಿ ರೋಮಿಲಾ ಥಾಪರ್ ಹಾಗೂ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸೆ.5ರವರೆಗೆ ಐವರಿಗೂ ಗೃಹಬಂಧನ ವಿಧಿಸಿತ್ತು. ಸೆ.12ರವರೆಗೆ ಪುನಃ ಅವಧಿಯನ್ನು ವಿಸ್ತರಿಸಿತ್ತು.