ಶಿಂದೆ ಸೇರಿದಂತೆ ಅವರ ಬಣದ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಮನವಿಯನ್ನು ಸ್ಪೀಕರ್ ನಾರ್ವೇಕರ್ ಅವರು ತಳ್ಳಿಹಾಕಿದ್ದರು. ಅದೇ ರೀತಿ, ಠಾಕ್ರೆ ಬಣದ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಶಿಂದೆ ಬಣ ಇರಿಸಿದ್ದ ಕೋರಿಕೆಯನ್ನು ಕೂಡಾ ಅವರು ಪುರಸ್ಕರಿಸಿರಲಿಲ್ಲ. ಇದರಿಂದ ಎರಡೂ ಬಣಗಳು ಕೋರ್ಟ್ ಮೆಟ್ಟಿಲೇರಿದ್ದವು.