ನವದೆಹಲಿ: ಕೋವಿಡ್–19 ಪಿಡುಗಿನ ಸಂದರ್ಭದಲ್ಲಿ ಅಲೋಪಥಿ ಚಿಕಿತ್ಸಾಪದ್ಧತಿ ಹಾಗೂ ಈ ಪದ್ಧತಿಯ ವೈದ್ಯರಿಗೆ ಅವಮಾನಿಸುವ ರೀತಿಯಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಯೋಗ ಗುರು ಬಾಬಾ ರಾಮದೇವ್ ಅವರನ್ನು ಸುಪ್ರೀಂಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.
‘ಅಲೋಪಥಿಯಂತಹ ಆಧುನಿಕ ಚಿಕಿತ್ಸಾಪದ್ಧತಿಯನ್ನು ಟೀಕಿಸುವ ವೇಳೆ ಸಂಯಮ ಇರಲಿ’ ಎಂದು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠ, ರಾಮದೇವ್ ಅವರಿಗೆ ಸೂಚಿಸಿತು.