<p class="title"><strong>ನವದೆಹಲಿ</strong>:ಸಾರ್ವಜನಿಕರಿಂದ ಬೃಹತ್ ಪ್ರಮಾಣದ ಕಾಣಿಕೆ ಸ್ವೀಕರಿಸುವ ಕೆಲ ಪ್ರಮುಖ ದೇವಾಲಯಗಳನ್ನು ನಿಯಮಗಳಿಂದ ಹೊರಗಿಡಬೇಕೇ ಎಂದು ಅಚ್ಚರಿ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್,ಸರ್ಕಾರಿ ನಿಯಂತ್ರಣದ ಮಂದಿರಗಳ ಅಸಮರ್ಪಕ ನಿರ್ವಹಣೆ ಅಥವಾ ಹಣದ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಪುರಾವೆಗಳನ್ನು ನೀಡಬೇಕಾಗುತ್ತದೆ ಎಂದು ಹೇಳಿದೆ.</p>.<p class="title">ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಂತೆಯೇ ಹಿಂದೂಗಳು, ಜೈನರು ಮತ್ತು ಸಿಖ್ಖರು ತಮ್ಮ ದೇಗುಲಗಳನ್ನು ನಿರ್ವಹಿಸುವ ಹಕ್ಕು ನೀಡಬೇಕೆಂದು ಕೋರಿ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೋರ್ಟ್ ನಡೆಸಿತು.</p>.<p class="title">‘ನಮಗೆ 150 ವರ್ಷಗಳ ಇತಿಹಾಸವಿದೆ. ಈ ಪೂಜಾ ಸ್ಥಳಗಳು ಸಮಾಜದ ದೊಡ್ಡ ಅಗತ್ಯಗಳನ್ನು ಪೂರೈಸಿವೆಯೇ ಹೊರತು ತಮ್ಮ ಉದ್ದೇಶಕ್ಕಾಗಿ ಅಲ್ಲ. ಕೆಲ ದೇವಾಲಯಗಳು ಸಾರ್ವಜನಿಕ ಉದ್ದೇಶಗಳಿಗೆ ತಮ್ಮ ಭೂಮಿಯನ್ನು ನೀಡಿವೆ’ ಎಂದು ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ತಿಳಿಸಿದೆ.</p>.<p class="title">ಉಪಾಧ್ಯಾಯ ಪರ ಹಾಜರಾದ ಹಿರಿಯ ವಕೀಲ ಅರವಿಂದ್ ದಾತಾರ್ ಮತ್ತು ಗೋಪಾಲ್ ಶಂಕರನಾರಾಯಣನ್ ಅವರಿಗೆ ಹೆಚ್ಚುವರಿ ಮಾಹಿತಿ ಸಲ್ಲಿಸಲು ನ್ಯಾಯಾಲಯವು ಎರಡು ವಾರಗಳ ಕಾಲಾವಕಾಶವನ್ನು ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>:ಸಾರ್ವಜನಿಕರಿಂದ ಬೃಹತ್ ಪ್ರಮಾಣದ ಕಾಣಿಕೆ ಸ್ವೀಕರಿಸುವ ಕೆಲ ಪ್ರಮುಖ ದೇವಾಲಯಗಳನ್ನು ನಿಯಮಗಳಿಂದ ಹೊರಗಿಡಬೇಕೇ ಎಂದು ಅಚ್ಚರಿ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್,ಸರ್ಕಾರಿ ನಿಯಂತ್ರಣದ ಮಂದಿರಗಳ ಅಸಮರ್ಪಕ ನಿರ್ವಹಣೆ ಅಥವಾ ಹಣದ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಪುರಾವೆಗಳನ್ನು ನೀಡಬೇಕಾಗುತ್ತದೆ ಎಂದು ಹೇಳಿದೆ.</p>.<p class="title">ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಂತೆಯೇ ಹಿಂದೂಗಳು, ಜೈನರು ಮತ್ತು ಸಿಖ್ಖರು ತಮ್ಮ ದೇಗುಲಗಳನ್ನು ನಿರ್ವಹಿಸುವ ಹಕ್ಕು ನೀಡಬೇಕೆಂದು ಕೋರಿ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೋರ್ಟ್ ನಡೆಸಿತು.</p>.<p class="title">‘ನಮಗೆ 150 ವರ್ಷಗಳ ಇತಿಹಾಸವಿದೆ. ಈ ಪೂಜಾ ಸ್ಥಳಗಳು ಸಮಾಜದ ದೊಡ್ಡ ಅಗತ್ಯಗಳನ್ನು ಪೂರೈಸಿವೆಯೇ ಹೊರತು ತಮ್ಮ ಉದ್ದೇಶಕ್ಕಾಗಿ ಅಲ್ಲ. ಕೆಲ ದೇವಾಲಯಗಳು ಸಾರ್ವಜನಿಕ ಉದ್ದೇಶಗಳಿಗೆ ತಮ್ಮ ಭೂಮಿಯನ್ನು ನೀಡಿವೆ’ ಎಂದು ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ತಿಳಿಸಿದೆ.</p>.<p class="title">ಉಪಾಧ್ಯಾಯ ಪರ ಹಾಜರಾದ ಹಿರಿಯ ವಕೀಲ ಅರವಿಂದ್ ದಾತಾರ್ ಮತ್ತು ಗೋಪಾಲ್ ಶಂಕರನಾರಾಯಣನ್ ಅವರಿಗೆ ಹೆಚ್ಚುವರಿ ಮಾಹಿತಿ ಸಲ್ಲಿಸಲು ನ್ಯಾಯಾಲಯವು ಎರಡು ವಾರಗಳ ಕಾಲಾವಕಾಶವನ್ನು ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>