ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಒಬ್ಬ ಶಾಸಕ ಹಾಗೂ ಪುರಸಭೆಯ ಇಬ್ಬರು ಸದಸ್ಯರು ಸೇರಿದಂತೆ ತೃಣಮೂಲ ಕಾಂಗ್ರೆಸ್ನ ಹಲವು ಮುಖಂಡರ ಮನೆಗಳು ಮತ್ತು ಕಚೇರಿಗಳಲ್ಲಿ ಸಿಬಿಐ ಅಧಿಕಾರಿಗಳು ಗುರುವಾರ ಏಕಕಾಲದಲ್ಲಿ ಶೋಧ ನಡೆಸಿದರು.
‘ಶಾಸಕ ಜಫೀಕುಲ್ ಇಸ್ಲಾಂ, ಪುರಸಭೆ ಸದಸ್ಯರಾದ ಬಪ್ಪಾದಿತ್ಯ ದಾಸ್ಗುಪ್ತಾ ಮತ್ತು ದೇಬರಾಜ್ ಚಕ್ರವರ್ತಿ ಅವರ ಮನೆಗಳಲ್ಲಿ ಶೋಧ ನಡೆಸಿ, ಮಾಹಿತಿಯನ್ನು ಪಡೆಯಲಾಗಿದೆ’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.