ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ದೇಗುಲ:ದರ್ಶನಕ್ಕೆ ತೆರೆದ ಬಾಗಿಲು

Last Updated 30 ಡಿಸೆಂಬರ್ 2018, 20:09 IST
ಅಕ್ಷರ ಗಾತ್ರ

ಶಬರಿಮಲೆ:ಇಲ್ಲಿ 21ನೇ ‘ಮಕರವಿಳಕ್ಕು’ ಹಬ್ಬಕ್ಕಾಗಿ ಭಾನುವಾರ ಸಂಜೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲನ್ನು ತೆರೆಯಲಾಗಿದೆ. ದೇಗುಲಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಮಹಿಳೆಯರ ಪ್ರವೇಶ ಕುರಿತಂತೆ ಭಕ್ತರಿಂದ ಪ್ರತಿಭಟನೆಗಳನ್ನು ಕಂಡ ಈ ದೇಗುಲವನ್ನು ಡಿಸೆಂಬರ್‌ 27ರಂದು ಮುಚ್ಚಲಾಗಿತ್ತು.ಭಾನುವಾರ ಸಂಜೆ ಬಾಗಿಲನ್ನು ತೆರೆದಾಗ ಭಕ್ತಾದಿಗಳ ನೂಕು ನುಗ್ಗಲು ಇತ್ತು. ಮುಖ್ಯ ಅರ್ಚಕ ವಿ.ಎನ್‌. ವಾಸುದೇವನ್‌ ನಂಬೂದರಿ ಅವರು ಪೂಜಾ ಕಾರ್ಯ ಪೂರ್ಣಗೊಳಿಸಿದ ಬಳಿಕ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಯಿತು.

ಜನವರಿ 14ರಂದು ‘ಮಕರವಿಳಕ್ಕು’ ನಡೆಯಲಿದೆ. ಜನವರಿ 20ರಂದು ಸಂಜೆ 7ಕ್ಕೆ ದೇವಾಲಯವನ್ನು ಮುಚ್ಚಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT