<p><strong>ನವದೆಹಲಿ</strong>: ‘ಬಿಹಾರದಲ್ಲಿ 160 ಸ್ಥಾನಗಳನ್ನು ಎನ್ಡಿಎ ಮೈತ್ರಿಕೂಟವು ಗಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ, ಮತ ಕಳವು (ವಿಸಿ) ಹಾಗೂ ಮತಕ್ಕೆ ಗಾಳ(ವಿಆರ್)ದಂತಹ ಕುತಂತ್ರಗಳನ್ನು ಪ್ರಜ್ಞಾವಂತ ಮತದಾರರು ಸೋಲಿಸಲಿದ್ದಾರೆ’ ಎಂದು ಕಾಂಗ್ರೆಸ್ ಹೇಳಿದೆ.</p>.<p>‘ಬಿಹಾರದಲ್ಲಿ ಸೂತ್ರಧಾರ (ನಿರ್ದೇಶಕ) ‘ವಿಸಿ’ ಗುರಿಯನ್ನು ನಿಗದಿಪಡಿಸಿದ್ದಾರೆ. 243 ಸ್ಥಾನಗಳ ಪೈಕಿ 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಆತ್ಮವಿಶ್ವಾಸದಿಂದ ಘೋಷಿಸಿದ್ದಾರೆ. ವಿಸಿ ಹಾಗೂ ವಿಆರ್ ಈ ಫಲಿತಾಂಶವನ್ನು ತರುತ್ತದೆ ಎಂದು ಆಶಿಸುತ್ತಿದ್ದಾರೆ. ಆದರೆ, ಬಿಹಾರದಲ್ಲಿ ಮಹಾಘಟಬಂಧನ್ ಗೆದ್ದರೆ ಅದರ ಮೊದಲ ಕಂಪನ ನವದೆಹಲಿಯಲ್ಲಿ ಆಗಿರುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p>‘ಶಿಕ್ಷಣದಲ್ಲಿ ವಿಸಿ ಎಂದರೆ ವೈಸ್ ಛಾನ್ಸಲರ್, ನವೋದ್ಯಮ ಜಗತ್ತಿನಲ್ಲಿ ವಿಸಿ ಎಂದರೆ ವೆಂಚರ್ ಕ್ಯಾಪಿಟಲ್, ಸೇನೆಯಲ್ಲಿ ವಿಸಿ ಎಂದರೆ ವೀರಚಕ್ರ. ಆದರೆ, ಈಗ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮತ ಕಳವು ಎಂದರೆ ‘ವಿಸಿ’ ಎಂದು ವ್ಯಾಖ್ಯಾನಿಸುವಂತಾಗಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಬಿಹಾರದಲ್ಲಿ 160 ಸ್ಥಾನಗಳನ್ನು ಎನ್ಡಿಎ ಮೈತ್ರಿಕೂಟವು ಗಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ, ಮತ ಕಳವು (ವಿಸಿ) ಹಾಗೂ ಮತಕ್ಕೆ ಗಾಳ(ವಿಆರ್)ದಂತಹ ಕುತಂತ್ರಗಳನ್ನು ಪ್ರಜ್ಞಾವಂತ ಮತದಾರರು ಸೋಲಿಸಲಿದ್ದಾರೆ’ ಎಂದು ಕಾಂಗ್ರೆಸ್ ಹೇಳಿದೆ.</p>.<p>‘ಬಿಹಾರದಲ್ಲಿ ಸೂತ್ರಧಾರ (ನಿರ್ದೇಶಕ) ‘ವಿಸಿ’ ಗುರಿಯನ್ನು ನಿಗದಿಪಡಿಸಿದ್ದಾರೆ. 243 ಸ್ಥಾನಗಳ ಪೈಕಿ 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಆತ್ಮವಿಶ್ವಾಸದಿಂದ ಘೋಷಿಸಿದ್ದಾರೆ. ವಿಸಿ ಹಾಗೂ ವಿಆರ್ ಈ ಫಲಿತಾಂಶವನ್ನು ತರುತ್ತದೆ ಎಂದು ಆಶಿಸುತ್ತಿದ್ದಾರೆ. ಆದರೆ, ಬಿಹಾರದಲ್ಲಿ ಮಹಾಘಟಬಂಧನ್ ಗೆದ್ದರೆ ಅದರ ಮೊದಲ ಕಂಪನ ನವದೆಹಲಿಯಲ್ಲಿ ಆಗಿರುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p>‘ಶಿಕ್ಷಣದಲ್ಲಿ ವಿಸಿ ಎಂದರೆ ವೈಸ್ ಛಾನ್ಸಲರ್, ನವೋದ್ಯಮ ಜಗತ್ತಿನಲ್ಲಿ ವಿಸಿ ಎಂದರೆ ವೆಂಚರ್ ಕ್ಯಾಪಿಟಲ್, ಸೇನೆಯಲ್ಲಿ ವಿಸಿ ಎಂದರೆ ವೀರಚಕ್ರ. ಆದರೆ, ಈಗ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮತ ಕಳವು ಎಂದರೆ ‘ವಿಸಿ’ ಎಂದು ವ್ಯಾಖ್ಯಾನಿಸುವಂತಾಗಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>