<p><strong>ನವದೆಹಲಿ</strong>: 2020ರಲ್ಲಿ ಪ್ರವಾಯ, ಚಂಡಮಾರುತದಂತಹ ನೈಸರ್ಗಿಕ ವಿಕೋಪಕ್ಕೆ ಒಳಗಾಗಿರುವ ಒಂದು ಕೇಂದ್ರಾಡಳಿತ ಪ್ರದೇಶ ಮತ್ತು ನಾಲ್ಕು ರಾಜ್ಯಗಳಿಗೆ ₹3,113 ಕೋಟಿ ಪರಿಹಾರ ನೀಡಲು ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಶನಿವಾರ ಒಪ್ಪಿಗೆ ನೀಡಿದೆ.</p>.<p>ಆಂಧ್ರಪ್ರದೇಶ, ಬಿಹಾರ, ತಮಿಳುನಾಡು, ಪುದುಚೆರಿ ಮತ್ತು ಮಧ್ಯಪ್ರದೇಶ– ಇವು ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣಾ ನಿಧಿ(ಎನ್ಡಿಆರ್ಎಂಎಫ್)ಯಿಂದ ಹೆಚ್ಚುವರಿ ಕೇಂದ್ರದ ನೆರವು ಪಡೆಯುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.</p>.<p>2020ರಲ್ಲಿ ನಿವಾರ್ ಮತ್ತು ಬುರೆವಿ ಚಂಡಮಾರುತ, ಪ್ರವಾಹ ಮತ್ತು ಕೀಟಗಳ ದಾಳಿಯಿಂದ ಹಾನಿಗೊಳಗಾದ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಕೇಂದ್ರದ ನೆರವನ್ನು ನೀಡಲು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಮಿತಿಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.</p>.<p>ಪ್ರವಾಹದಿಂದ ಹಾನಿಗೊಳಗಾದ ಆಂಧ್ರಪ್ರದೇಶಕ್ಕೆ ₹280.78 ಕೋಟಿ ಮತ್ತು ಬಿಹಾರಕ್ಕೆ ₹1,255.27 ಕೋಟಿ ನೀಡಲಾಗಿದೆ. ನಿವಾರ್ ಹಾಗೂ ಬುರೆವಿ ಚಂಡಮಾರುತದಿಂದ ನಲುಗಿದ ತಮಿಳುನಾಡುಗೆ ಕ್ರಮವಾಗಿ ₹63.14 ಕೋಟಿ ಮತ್ತು ₹255.77 ಕೋಟಿ ನೀಡಲು ಅನುಮೋದಿಸಲಾಗಿದೆ.</p>.<p>ನಿವಾರ್ ಚಂಡಮಾರುತದ ದಾಳಿಯಿಂದ ಹಾನಿಗೊಳಗಾದ ಕೇಂದ್ರಾಳಿತ ಪ್ರದೇಶ ಪುದುಚೆರಿಗೆ ₹9.91 ಕೋಟಿ, ಕೀಟಬಾಧೆಯಿಂದ ಹಾನಿಗೊಳಗಾದ ಮಧ್ಯಪ್ರದೇಶಕ್ಕೆ ₹1,280 ಕೋಟಿ ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: 2020ರಲ್ಲಿ ಪ್ರವಾಯ, ಚಂಡಮಾರುತದಂತಹ ನೈಸರ್ಗಿಕ ವಿಕೋಪಕ್ಕೆ ಒಳಗಾಗಿರುವ ಒಂದು ಕೇಂದ್ರಾಡಳಿತ ಪ್ರದೇಶ ಮತ್ತು ನಾಲ್ಕು ರಾಜ್ಯಗಳಿಗೆ ₹3,113 ಕೋಟಿ ಪರಿಹಾರ ನೀಡಲು ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಶನಿವಾರ ಒಪ್ಪಿಗೆ ನೀಡಿದೆ.</p>.<p>ಆಂಧ್ರಪ್ರದೇಶ, ಬಿಹಾರ, ತಮಿಳುನಾಡು, ಪುದುಚೆರಿ ಮತ್ತು ಮಧ್ಯಪ್ರದೇಶ– ಇವು ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣಾ ನಿಧಿ(ಎನ್ಡಿಆರ್ಎಂಎಫ್)ಯಿಂದ ಹೆಚ್ಚುವರಿ ಕೇಂದ್ರದ ನೆರವು ಪಡೆಯುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.</p>.<p>2020ರಲ್ಲಿ ನಿವಾರ್ ಮತ್ತು ಬುರೆವಿ ಚಂಡಮಾರುತ, ಪ್ರವಾಹ ಮತ್ತು ಕೀಟಗಳ ದಾಳಿಯಿಂದ ಹಾನಿಗೊಳಗಾದ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಕೇಂದ್ರದ ನೆರವನ್ನು ನೀಡಲು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಮಿತಿಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.</p>.<p>ಪ್ರವಾಹದಿಂದ ಹಾನಿಗೊಳಗಾದ ಆಂಧ್ರಪ್ರದೇಶಕ್ಕೆ ₹280.78 ಕೋಟಿ ಮತ್ತು ಬಿಹಾರಕ್ಕೆ ₹1,255.27 ಕೋಟಿ ನೀಡಲಾಗಿದೆ. ನಿವಾರ್ ಹಾಗೂ ಬುರೆವಿ ಚಂಡಮಾರುತದಿಂದ ನಲುಗಿದ ತಮಿಳುನಾಡುಗೆ ಕ್ರಮವಾಗಿ ₹63.14 ಕೋಟಿ ಮತ್ತು ₹255.77 ಕೋಟಿ ನೀಡಲು ಅನುಮೋದಿಸಲಾಗಿದೆ.</p>.<p>ನಿವಾರ್ ಚಂಡಮಾರುತದ ದಾಳಿಯಿಂದ ಹಾನಿಗೊಳಗಾದ ಕೇಂದ್ರಾಳಿತ ಪ್ರದೇಶ ಪುದುಚೆರಿಗೆ ₹9.91 ಕೋಟಿ, ಕೀಟಬಾಧೆಯಿಂದ ಹಾನಿಗೊಳಗಾದ ಮಧ್ಯಪ್ರದೇಶಕ್ಕೆ ₹1,280 ಕೋಟಿ ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>