ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿ ಪೂಜಾರಿ ವಿರುದ್ಧ ಜೆಎನ್‌ಯು ವಿದ್ಯಾರ್ಥಿನಿ ಶೆಹ್ಲಾ ರಶೀದ್‌ ದೂರು ದಾಖಲು

Last Updated 14 ಆಗಸ್ಟ್ 2018, 6:57 IST
ಅಕ್ಷರ ಗಾತ್ರ

ಶ್ರೀನಗರ: ಭೂಗತ ಪಾತಕಿ ರವಿ ಪೂಜಾರಿ ತಮಗೆ ಬೆದರಿಕೆ ಒಡ್ಡುತ್ತಿರುವುದಾಗಿ ಆರೋಪಿಸಿ ಜೆಎನ್‌ಯು ವಿದ್ಯಾರ್ಥಿನಿ ಶೆಹ್ಲಾ ರಶೀದ್‌ ಇಲ್ಲಿ ದೂರು ದಾಖಲಿಸಿದ್ದಾರೆ.

ಹೆಚ್ಚು ಮಾತನಾಡದೆ ಮೌನ ವಹಿಸುವಂತೆ ತಮಗೆ ಅಲ್ಲದೆ ಖಾಲಿದ್‌ ಮತ್ತು ದಲಿತ ನಾಯಕ ಜಿಗ್ನೇಶ್‌ ಮೆವಾನಿ ಅವರಿಗೆ ರವಿ ಪೂಜಾರಿ ಬೆದರಿಕೆ ಒಡ್ಡಿದ್ದ ಎಂದು ಶೆಹ್ಲಾ ಅವರು ಟ್ಟಿಟರ್‌ನಲ್ಲಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ರವಿ ಪೂಜಾರಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

'ಬಾಯಿ ಮುಚ್ಚಿಕೊಂಡು ಇರು, ಇಲ್ಲವಾದಲ್ಲಿ ನಿನ್ನ ಬಾಯಿಯನ್ನು ಶಾಶ್ವತವಾಗಿ ಮುಚ್ಚಿಸಬೇಕಾಗುತ್ತದೆ,ಇದನ್ನು ಖಾಲಿದ್‌ ಮತ್ತುಜಿಗ್ನೇಶ್‌ ಮೆವಾನಿ ಅವರಿಗೂ ಹೇಳು ಎಂದು ರವಿ ಪೂಜಾರಿ ಸಂದೇಶ ಕಳುಹಿಸಿರುವುದಾಗಿಶೆಹ್ಲಾ ರಶೀದ್‌ ತಿಳಿಸಿದ್ದಾರೆ.

ರವಿ ಪೂಜಾರಿ ಕಳುಹಿಸಿದ ಸಂದೇಶವನ್ನು ಶೆಹ್ಲಾ ರಶೀದ್‌ ಸ್ಕ್ರೀನ್ ಶಾಟ್‌ ಮಾಡಿ ಟ್ವಿಟರ್‌ನಲ್ಲಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT