ಟ್ವಿಟರ್ನಲ್ಲಿ ತಮ್ಮ ಮನದಾಳ ಹಂಚಿಕೊಂಡಿರುವ ಶಿವಪಾಲ್, ಅಖಿಲೇಶ್ ಅವರ ಹೆಸರು ಹೇಳದೇ ಟೀಕಿಸಿದ್ದಾರೆ. ‘ನಾನು ಆತನನ್ನು ತೃಪ್ತಿಪಡಿಸಲು ಆತ್ಮಗೌರವ ಬದಿಗಿಟ್ಟು ಅತ್ಯಂತ ಕೆಳಮಟ್ಟಕ್ಕೆ ಇಳಿದೆ. ನಾನು ಇನ್ನೂ ಆತನ ಮೇಲೆ ಕೋಪಗೊಂಡಿದ್ದೇನೆ ಅಂದಮೇಲೆ, ನನ್ನನ್ನು ಆತ ಎಷ್ಟು ನೋಯಿಸಿದ್ದಾನೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ನಾನು ಆತನಿಗೆ ನಡೆಯಲು ಕಲಿಸಿದ್ದೆ, ಆದರೆ ಆತ ನನ್ನನ್ನು ತುಳಿಯುತ್ತಿದ್ದಾನೆ. ಮರುಸಂಘಟನೆಯ ವಿಶ್ವಾಸದೊಂದಿಗೆ, ಎಲ್ಲರ ಸಹಕಾರಕ್ಕಾಗಿ ಆಶಿಸುತ್ತಾ ಈದ್ ಮುಬಾರಕ್’ ಎಂದು ಶಿವಪಾಲ್ ಯಾದವ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.