ಮಧ್ಯಪ್ರದೇಶದಲ್ಲಿ ಏಪ್ರಿಲ್ 29ರಂದು ಮಾಡಿದ ಭಾಷಣದಲ್ಲಿ ಸಿಧು ಅವರು, ‘ರಫೇಲ್ ಜೆಟ್ ಖರೀದಿ ವಹಿವಾಟಿನಲ್ಲಿ ಮೋದಿ ಅವರು ಹಣ ಮಾಡುತ್ತಿದ್ದಾರೆ, ಬ್ಯಾಂಕ್ ಲೂಟಿ ಮಾಡಿ ಪರಾರಿಯಾಗಲು ಸಿರಿವಂತರಿಗೆ ಅವರು ನೆರವು ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಇದನ್ನು ವಿರೋಧಿಸಿ ಬಿಜೆಪಿಯವರು ಸಿಧು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.