ಶ್ರೀನಗರ: ನಗರದ ಹಬ್ಬಾ ಕದಲ್ ಪ್ರದೇಶದಲ್ಲಿ ಉಗ್ರರು ಬುಧವಾರ ನಡೆಸಿದ ದಾಳಿಯಲ್ಲಿ ಪಂಜಾಬ್ ಮೂಲದ ಕಾರ್ಮಿಕ ಹತನಾಗಿದ್ದು, ಮತ್ತೊಬ್ಬ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಮೃತಸರ ನಿವಾಸಿ ಅಮ್ರಿತ್ ಪಾಲ್ ಸಿಂಗ್ ಹತ್ಯೆಯಾದ ಕಾರ್ಮಿಕ. ರೋಹಿತ್ ಎಂಬ ಕಾರ್ಮಿಕ ಗಾಯಗೊಂಡಿದ್ದು, ಎಸ್ಎಂಎಚ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಸ್ಥಳೀಯರಲ್ಲದವರನ್ನು ಗುರಿಯಾಗಿಸಿ ಉಗ್ರರು ದಾಳಿ ಮಾಡಿ ನಡೆಸಿದ ಈ ವರ್ಷದ ಮೊದಲ ಹತ್ಯೆ ಇದಾಗಿದೆ. ಗುಂಡಿನ ದಾಳಿಯಿಂದಾಗಿ ಅಮ್ರಿತ್ ಪಾಲ್ ಸಿಂಗ್ ಸ್ಥಳದಲ್ಲಿಯೇ ಮೃತಪಟ್ಟ’ ಎಂದು ಪೊಲೀಸರು ಹೇಳಿದ್ದಾರೆ.