<p><strong>ನವದೆಹಲಿ</strong>: ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಿಂದಾಗಿ (ಎಸ್ಐಆರ್) ತೊಂದರೆಗೀಡಾಗಿರುವ ಕಟುಂಬಗಳಿಗೆ ದೆಹಲಿಯ ಬಂಗ ಭವನದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.</p>.<p>ಇದೇ ವಿಚಾರವಾಗಿ ದೆಹಲಿ ಪೊಲೀಸರು ಮತ್ತು ಮಮತಾ ಅವರ ನಡುವೆ ಸೋಮವಾರ ವಾಗ್ವಾದ ನಡೆದಿದ್ದು, ಚಾಣಕ್ಯಪುರಿ ಹಾಗೂ ಮಂಡಿ ಹೌಸ್ಗಳಲ್ಲಿನ ಬಂಗ ಭವನದ ಸುತ್ತ ನಿಯೋಜಿಸಲಾದ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. </p>.<p>ಎಸ್ಐಆರ್ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದೊಂದಿಗಿನ ಸಭೆ ನಿಮಿತ್ತ ಮಮತಾ ದೆಹಲಿಗೆ ಬಂದಿದ್ದಾರೆ. ಈ ವೇಳೆ ಬಂಗ ಭವನಕ್ಕೂ ಭೇಟಿ ನೀಡಿದ್ದಾರೆ. ಭವನದ ಸುತ್ತ ಪೊಲೀಸರನ್ನು ನಿಯೋಜಿಸಿರುವುದರ ಬಗ್ಗೆ ಪ್ರಶ್ನಿಸಿದ ಅವರು, ‘ನಾನು ಇಲ್ಲಿ ಆಂದೋಲನ ಮಾಡುವುದಕ್ಕಾಗಿ ಬಂದಿಲ್ಲ. ಆಂದೋಲನಕ್ಕಾಗಿಯೇ ಬಂದಿದ್ದರೆ ನೀವು ಹುಚ್ಚರಾಗಿಬಿಡುತ್ತಿದ್ದಿರಿ’ ಎಂದು ಭದ್ರತಾ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದ್ದಾರೆ. </p>.<p>ಬಳಿಕ ಮಾಧ್ಯಮಗಳೊಂದಿಗೂ ಈ ಬಗ್ಗೆ ಮಾತನಾಡಿದ ಅವರು, ‘ಎಸ್ಐಆರ್ನಿಂದ ತೊಂದರೆಗೀಡಾದ ಹಲವು ಮಂದಿ ಬಂಗ ಭವನದಲ್ಲಿ ಇದ್ದಾರೆ. ಅವರನ್ನು ಬೆದರಿಸಲಾಗುತ್ತಿದೆ. ಈ ಕುಟುಂಬಗಳು ವಾಸಿಸುವ ಎಲ್ಲೆಡೆಯೂ ಏಕೆ ದೆಹಲಿ ಪೊಲೀಸರನ್ನು ನಿಯೋಜಿಸಲಾಗಿದೆ. ದೆಹಲಿಯಲ್ಲಿ ಬಾಂಬ್ ಸ್ಫೋಟವಾದಾಗ ಈ ಪೊಲೀಸರೆಲ್ಲಾ ಎಲ್ಲಿ ಹೋಗಿದ್ದರು’ ಎಂದು ಪ್ರಶ್ನಿಸಿದ್ದಾರೆ. </p>.<p>‘ನಾನು ಇಲ್ಲಿಗೆ ಬಂದಾಗ ಅವರು (ಪೊಲೀಸರು) ಭಯಭೀತರಾಗಿದ್ದರು. ನಾನು ಬೇಕಿದ್ದರೆ ನನ್ನೊಂದಿಗೆ ಲಕ್ಷಾಂತರ ಮಂದಿಯನ್ನು ಕರೆತರಬಹುದಿತ್ತು. ಆದರೆ, ನಾನಿಲ್ಲಿ ಆಂದೋಲನ ಮಾಡಲು ಬಂದಿಲ್ಲ. ನ್ಯಾಯ ಕೇಳಲು ಬಂದಿದ್ದೇನೆ. ಪೊಲೀಸರು ಈ ಕುಟುಂಬಗಳಿಗೆ ತೊಂದರೆ ನೀಡಬಾರದು’ ಎಂದೂ ಆಗ್ರಹಿಸಿದ್ದಾರೆ. </p>.<p>‘ನಾನು ಪೊಲೀಸರನ್ನಲ್ಲ; ಅಧಿಕಾರದಲ್ಲಿರುವವರನ್ನು ದೂಷಿಸುತ್ತೇನೆ. ಅವರು ದೇಶವನ್ನು ರಕ್ಷಿಸಲಾಗದೆ ಬಂಗಾಳಿಗಳನ್ನು, ಸಾಮಾನ್ಯ ಜನರನ್ನು ಹಿಂಸಿಸುತ್ತಿದ್ದಾರೆ. ಎಸ್ಐಆರ್ ಹೆಸರಿನಲ್ಲಿ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದೂ ದೂರಿದ್ದಾರೆ.</p>.<p> <strong>ಸಿಇಸಿ ಭೇಟಿಯಾದ ಸಂತ್ರಸ್ತ ಕುಟುಂಬಗಳು</strong></p><p> ಎಸ್ಐಆರ್ನಿಂದ ತೊಂದರೆಗೀಡಾದ ಕುಟುಂಬಗಳ ಸದಸ್ಯರು ಹಾಗೂ ಟಿಎಂಸಿ ನಾಯಕರ ನಿಯೋಗದೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಿಇಸಿ ಅವರನ್ನು ಸೋಮವಾರ ಭೇಟಿಯಾಗುವುದಕ್ಕಾಗಿ ಕಳೆದ ವಾರವೇ ಮಮತಾ ಅವರ ನಿಯೋಗ ಅನುಮತಿ ಪಡೆದಿತ್ತು. ಅದರಂತೆ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಹಾಗೂ ಕಲ್ಯಾಣ್ ಬ್ಯಾನರ್ಜಿ ಅವರೊಂದಿಗೆ ಮಮತಾ ದೆಹಲಿಗೆ ಭೇಟಿ ನೀಡಿದ್ದರು. ತಮ್ಮೊಂದಿಗೆ 50 ಸಂತ್ರಸ್ತ ಕುಟುಂಬಗಳನ್ನೂ ಕರೆತಂದಿದ್ದರು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಿಂದಾಗಿ (ಎಸ್ಐಆರ್) ತೊಂದರೆಗೀಡಾಗಿರುವ ಕಟುಂಬಗಳಿಗೆ ದೆಹಲಿಯ ಬಂಗ ಭವನದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.</p>.<p>ಇದೇ ವಿಚಾರವಾಗಿ ದೆಹಲಿ ಪೊಲೀಸರು ಮತ್ತು ಮಮತಾ ಅವರ ನಡುವೆ ಸೋಮವಾರ ವಾಗ್ವಾದ ನಡೆದಿದ್ದು, ಚಾಣಕ್ಯಪುರಿ ಹಾಗೂ ಮಂಡಿ ಹೌಸ್ಗಳಲ್ಲಿನ ಬಂಗ ಭವನದ ಸುತ್ತ ನಿಯೋಜಿಸಲಾದ ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. </p>.<p>ಎಸ್ಐಆರ್ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದೊಂದಿಗಿನ ಸಭೆ ನಿಮಿತ್ತ ಮಮತಾ ದೆಹಲಿಗೆ ಬಂದಿದ್ದಾರೆ. ಈ ವೇಳೆ ಬಂಗ ಭವನಕ್ಕೂ ಭೇಟಿ ನೀಡಿದ್ದಾರೆ. ಭವನದ ಸುತ್ತ ಪೊಲೀಸರನ್ನು ನಿಯೋಜಿಸಿರುವುದರ ಬಗ್ಗೆ ಪ್ರಶ್ನಿಸಿದ ಅವರು, ‘ನಾನು ಇಲ್ಲಿ ಆಂದೋಲನ ಮಾಡುವುದಕ್ಕಾಗಿ ಬಂದಿಲ್ಲ. ಆಂದೋಲನಕ್ಕಾಗಿಯೇ ಬಂದಿದ್ದರೆ ನೀವು ಹುಚ್ಚರಾಗಿಬಿಡುತ್ತಿದ್ದಿರಿ’ ಎಂದು ಭದ್ರತಾ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದ್ದಾರೆ. </p>.<p>ಬಳಿಕ ಮಾಧ್ಯಮಗಳೊಂದಿಗೂ ಈ ಬಗ್ಗೆ ಮಾತನಾಡಿದ ಅವರು, ‘ಎಸ್ಐಆರ್ನಿಂದ ತೊಂದರೆಗೀಡಾದ ಹಲವು ಮಂದಿ ಬಂಗ ಭವನದಲ್ಲಿ ಇದ್ದಾರೆ. ಅವರನ್ನು ಬೆದರಿಸಲಾಗುತ್ತಿದೆ. ಈ ಕುಟುಂಬಗಳು ವಾಸಿಸುವ ಎಲ್ಲೆಡೆಯೂ ಏಕೆ ದೆಹಲಿ ಪೊಲೀಸರನ್ನು ನಿಯೋಜಿಸಲಾಗಿದೆ. ದೆಹಲಿಯಲ್ಲಿ ಬಾಂಬ್ ಸ್ಫೋಟವಾದಾಗ ಈ ಪೊಲೀಸರೆಲ್ಲಾ ಎಲ್ಲಿ ಹೋಗಿದ್ದರು’ ಎಂದು ಪ್ರಶ್ನಿಸಿದ್ದಾರೆ. </p>.<p>‘ನಾನು ಇಲ್ಲಿಗೆ ಬಂದಾಗ ಅವರು (ಪೊಲೀಸರು) ಭಯಭೀತರಾಗಿದ್ದರು. ನಾನು ಬೇಕಿದ್ದರೆ ನನ್ನೊಂದಿಗೆ ಲಕ್ಷಾಂತರ ಮಂದಿಯನ್ನು ಕರೆತರಬಹುದಿತ್ತು. ಆದರೆ, ನಾನಿಲ್ಲಿ ಆಂದೋಲನ ಮಾಡಲು ಬಂದಿಲ್ಲ. ನ್ಯಾಯ ಕೇಳಲು ಬಂದಿದ್ದೇನೆ. ಪೊಲೀಸರು ಈ ಕುಟುಂಬಗಳಿಗೆ ತೊಂದರೆ ನೀಡಬಾರದು’ ಎಂದೂ ಆಗ್ರಹಿಸಿದ್ದಾರೆ. </p>.<p>‘ನಾನು ಪೊಲೀಸರನ್ನಲ್ಲ; ಅಧಿಕಾರದಲ್ಲಿರುವವರನ್ನು ದೂಷಿಸುತ್ತೇನೆ. ಅವರು ದೇಶವನ್ನು ರಕ್ಷಿಸಲಾಗದೆ ಬಂಗಾಳಿಗಳನ್ನು, ಸಾಮಾನ್ಯ ಜನರನ್ನು ಹಿಂಸಿಸುತ್ತಿದ್ದಾರೆ. ಎಸ್ಐಆರ್ ಹೆಸರಿನಲ್ಲಿ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದೂ ದೂರಿದ್ದಾರೆ.</p>.<p> <strong>ಸಿಇಸಿ ಭೇಟಿಯಾದ ಸಂತ್ರಸ್ತ ಕುಟುಂಬಗಳು</strong></p><p> ಎಸ್ಐಆರ್ನಿಂದ ತೊಂದರೆಗೀಡಾದ ಕುಟುಂಬಗಳ ಸದಸ್ಯರು ಹಾಗೂ ಟಿಎಂಸಿ ನಾಯಕರ ನಿಯೋಗದೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಿಇಸಿ ಅವರನ್ನು ಸೋಮವಾರ ಭೇಟಿಯಾಗುವುದಕ್ಕಾಗಿ ಕಳೆದ ವಾರವೇ ಮಮತಾ ಅವರ ನಿಯೋಗ ಅನುಮತಿ ಪಡೆದಿತ್ತು. ಅದರಂತೆ ಸಂಸದರಾದ ಅಭಿಷೇಕ್ ಬ್ಯಾನರ್ಜಿ ಹಾಗೂ ಕಲ್ಯಾಣ್ ಬ್ಯಾನರ್ಜಿ ಅವರೊಂದಿಗೆ ಮಮತಾ ದೆಹಲಿಗೆ ಭೇಟಿ ನೀಡಿದ್ದರು. ತಮ್ಮೊಂದಿಗೆ 50 ಸಂತ್ರಸ್ತ ಕುಟುಂಬಗಳನ್ನೂ ಕರೆತಂದಿದ್ದರು ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>