‘ಈ ರೈತರ ಹೋರಾಟ ಕೇವಲ ಮೂರು ಕರಾಳ ಕೃಷಿ ಕಾಯ್ದೆಗಳ ರದ್ದತಿಗಷ್ಟೇ ಸೀಮಿತವಾಗಿಲ್ಲ. ಬದಲಿಗೆ ಕೃಷಿ ಉತ್ಪನ್ನಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಿನ ವ್ಯಾಪ್ತಿಗೆ ತರುವ ಕುರಿತ ಬೇಡಿಕೆಯ ಈಡೇರಿಕೆಗೂ ಸೇರುತ್ತದೆ. ಇದು ರೈತರ ಬಹು ಮುಖ್ಯ ಬೇಡಿಕೆ. ಈಗಲೂ ಇತ್ಯರ್ಥ ಆಗಿಲ್ಲ’ ಎಂದು ಎಸ್ಕೆಎಂ ಹೇಳಿದೆ.