<p><strong>ನವದೆಹಲಿ</strong>: ‘ವಿಮಾನಯಾನ ದರಗಳು ಗಗನಮುಖಿ ಆಗಿವೆ’ ಎಂದು ತೀವ್ರವಾಗಿ ಆಕ್ಷೇಪಿಸಿರುವ ಹಲವು ಸಂಸದರು, ‘ಖಾಸಗಿ ವೈಮಾನಿಕ ಸಂಸ್ಥೆಗಳಿಗೆ ಉತ್ತರಾದಾಯಿತ್ವ ಇರಬೇಕು ಹಾಗೂ ಪ್ರಯಾಣಿಕರಿಗೆ ನಿರಾಳ ಎನ್ನಿಸುವ ಪರಿಹಾರಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.</p>.<p>ಬುಧವಾರ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಯಾಯಿತು. ‘ವಿಮಾನನಿಲ್ದಾಣ ಆರ್ಥಿಕತೆ ನಿಯಂತ್ರಣ ಪ್ರಾಧಿಕಾರವು (ಎಇಆರ್ಎ) ನಿಯಂತ್ರಣ ಸಂಸ್ಥೆಯಾಗಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ’ ಎಂದೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. </p>.<p>ವಿಮಾನಯಾನ ದರ ಸೇರಿದಂತೆ ಹಲವು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಬೇಕಾಗಿದೆ ಎಂದೂ ಸಂಸದರು ಪಟ್ಟುಹಿಡಿದರು. ಬಿರುಸಿನ, ವಿಸ್ತೃತ ಚರ್ಚೆಗೆ ವೇದಿಕೆಯಾದ ಈ ಸಭೆಯನ್ನು, ಸಮಿತಿಯ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಅವರು ‘ಅತ್ಯುತ್ತಮ ಸಭೆ’ ಎಂದು ಬಣ್ಣಿಸಿದ್ದಾರೆ. </p>.<p>ವೇಣುಗೋಪಾಲ್ ಅವರು, ‘ವಿಮಾನಯಾನ ದರಗಳು ಗಗನಮುಖಿ ಆಗಿವೆ. ನಾಗರಿಕ ವಿಮಾನಯಾನ ಇಲಖೆ ಮತ್ತು ವೈಮಾನಿಕ ಸೇವೆ ನಿರ್ದೇಶನಾಲಯ (ಡಿಜಿಸಿಎ) ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಹಲವು ಸದಸ್ಯರು ಕಳವಳ ವ್ಯಕ್ತಪಡಿಸಿದರು’ ಎಂದು ತಿಳಿಸಿದರು.</p>.<p>ವಿಮಾನಯಾನ ದರ ನಿಯಂತ್ರಿಸಲು ಎಇಆರ್ಎ ಕಾಯ್ದೆಗೆ ತಿದ್ದುಪಡಿತರಬೇಕು ಎಂದು ಒತ್ತಾಯಿಸಿದ ಸದಸ್ಯರು, ಬಳಕೆದಾರ ಅಭಿವೃದ್ಧಿ ಶುಲ್ಕ, ಇತರೆ ದರಗಳನ್ನು ಮನಸೋಇಚ್ಛೆ ಏರಿಸಲಾಗುತ್ತಿದೆ. ಉತ್ತರದಾಯಿತ್ವ ನಿಗದಿಪಡಿಸುವಲ್ಲಿ ಹಾಲಿ ಇರುವ ವ್ಯವಸ್ಥೆ ವಿಫಲವಾಗಿದೆ ಎಂದು ದೂರಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ವಿಮಾನಯಾನ ದರಗಳು ಗಗನಮುಖಿ ಆಗಿವೆ’ ಎಂದು ತೀವ್ರವಾಗಿ ಆಕ್ಷೇಪಿಸಿರುವ ಹಲವು ಸಂಸದರು, ‘ಖಾಸಗಿ ವೈಮಾನಿಕ ಸಂಸ್ಥೆಗಳಿಗೆ ಉತ್ತರಾದಾಯಿತ್ವ ಇರಬೇಕು ಹಾಗೂ ಪ್ರಯಾಣಿಕರಿಗೆ ನಿರಾಳ ಎನ್ನಿಸುವ ಪರಿಹಾರಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.</p>.<p>ಬುಧವಾರ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಯಾಯಿತು. ‘ವಿಮಾನನಿಲ್ದಾಣ ಆರ್ಥಿಕತೆ ನಿಯಂತ್ರಣ ಪ್ರಾಧಿಕಾರವು (ಎಇಆರ್ಎ) ನಿಯಂತ್ರಣ ಸಂಸ್ಥೆಯಾಗಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ’ ಎಂದೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. </p>.<p>ವಿಮಾನಯಾನ ದರ ಸೇರಿದಂತೆ ಹಲವು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಬೇಕಾಗಿದೆ ಎಂದೂ ಸಂಸದರು ಪಟ್ಟುಹಿಡಿದರು. ಬಿರುಸಿನ, ವಿಸ್ತೃತ ಚರ್ಚೆಗೆ ವೇದಿಕೆಯಾದ ಈ ಸಭೆಯನ್ನು, ಸಮಿತಿಯ ಅಧ್ಯಕ್ಷರೂ ಆದ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಅವರು ‘ಅತ್ಯುತ್ತಮ ಸಭೆ’ ಎಂದು ಬಣ್ಣಿಸಿದ್ದಾರೆ. </p>.<p>ವೇಣುಗೋಪಾಲ್ ಅವರು, ‘ವಿಮಾನಯಾನ ದರಗಳು ಗಗನಮುಖಿ ಆಗಿವೆ. ನಾಗರಿಕ ವಿಮಾನಯಾನ ಇಲಖೆ ಮತ್ತು ವೈಮಾನಿಕ ಸೇವೆ ನಿರ್ದೇಶನಾಲಯ (ಡಿಜಿಸಿಎ) ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಹಲವು ಸದಸ್ಯರು ಕಳವಳ ವ್ಯಕ್ತಪಡಿಸಿದರು’ ಎಂದು ತಿಳಿಸಿದರು.</p>.<p>ವಿಮಾನಯಾನ ದರ ನಿಯಂತ್ರಿಸಲು ಎಇಆರ್ಎ ಕಾಯ್ದೆಗೆ ತಿದ್ದುಪಡಿತರಬೇಕು ಎಂದು ಒತ್ತಾಯಿಸಿದ ಸದಸ್ಯರು, ಬಳಕೆದಾರ ಅಭಿವೃದ್ಧಿ ಶುಲ್ಕ, ಇತರೆ ದರಗಳನ್ನು ಮನಸೋಇಚ್ಛೆ ಏರಿಸಲಾಗುತ್ತಿದೆ. ಉತ್ತರದಾಯಿತ್ವ ನಿಗದಿಪಡಿಸುವಲ್ಲಿ ಹಾಲಿ ಇರುವ ವ್ಯವಸ್ಥೆ ವಿಫಲವಾಗಿದೆ ಎಂದು ದೂರಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>