<p><strong>ಇಟಾವಾ/ಸೀತಾಪುರ</strong>: ಭಾರತವು ಮುಂದಿನ ಸಾವಿರ ವರ್ಷಗಳ ಕಾಲ ಶಕ್ತಿಶಾಲಿ ರಾಷ್ಟ್ರವಾಗಿ ಉಳಿಯಲು ಅಡಿಪಾಯ ಹಾಕುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.</p>.<p>‘ಮೋದಿ ಇದನ್ನು ಏಕೆ ಮಾಡುತ್ತಿದ್ದಾರೆಂದರೆ, ಮೋದಿ ಇರಲಿ, ಇಲ್ಲದಿರಲಿ, ದೇಶ ಎಂದಿಗೂ ಇರುತ್ತದೆ’ ಎಂದ ಅವರು, ‘ಎಸ್ಪಿ–ಕಾಂಗ್ರೆಸ್ ಮಂದಿ ಏನು ಮಾಡುತ್ತಿದ್ದಾರೆ? ಅವರ ಭವಿಷ್ಯ ಮತ್ತು ಅವರ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆ ಎದುರಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.</p>.<p>ಮುಲಾಯಂ ಸಿಂಗ್ ಯಾದವ್ ಅವರ ತವರು ಜಿಲ್ಲೆ ಇಟಾವಾದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣದಲ್ಲಿ ತೊಡಗಿವೆ ಎಂದು ಟೀಕಿಸಿದರು. </p>.<p>‘ಕುಟುಂಬ ರಾಜಕಾರಣದ ಮೂಲಕ ಇವರು ಸೃಷ್ಟಿಸಿರುವ ಪರಂಪರೆ ಎಂತಹದ್ದು? ಕೆಲವರು ಮೈನ್ಪುರಿ, ಕನೌಜ್ ಮತ್ತು ಇಟಾವಾ ಅನ್ನು ತಮ್ಮ ಜಹಗೀರು ಎಂದು ಪರಿಗಣಿಸಿದರೆ, ಕೆಲವರು ಅಮೇಠಿ ಮತ್ತು ರಾಯ್ಬರೇಲಿಯನ್ನು ತಮ್ಮ ಜಹಗೀರು ಎಂದು ಪರಿಗಣಿಸಿದ್ದಾರೆ’ ಎಂದು ದೂರಿದರು.</p>.<p>‘ಮೋದಿ ನಿರ್ಮಿಸಿದ ಪರಂಪರೆ ಎಲ್ಲರಿಗೂ ಸೇರಿದ್ದು. 2047ರ ವೇಳೆಗೆ ನಿಮ್ಮ ಮಗ ಮತ್ತು ಮಗಳು ಕೂಡ ಪ್ರಧಾನಿ, ಮುಖ್ಯಮಂತ್ರಿ ಆಗಬೇಕು ಎಂದು ನಾನು ಬಯಸುತ್ತೇನೆ. ಪ್ರತಿಷ್ಠಿತ ಕುಟುಂಬಗಳ ಉತ್ತರಾಧಿಕಾರಿಗಳು ಮಾತ್ರ ಪ್ರಧಾನಿ, ಮುಖ್ಯಮಂತ್ರಿ ಆಗಬಹುದೆನ್ನುವ ಅನಿಷ್ಟ ಪರಂಪರೆಯನ್ನು ಈ ‘ಚಾಯ್ವಾಲಾ’ ಮುರಿದಿದ್ದಾರೆ’ ಎಂದು ಹೇಳಿದರು.</p>.<p>‘ಮೋದಿ ಮತ್ತು ಯೋಗಿ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಮಗೆ ಸ್ವಂತ ಮಕ್ಕಳಿಲ್ಲ’ ಎಂದು ಹೇಳಿದರು. </p>.<p>ಉತ್ತರ ಪ್ರದೇಶದ ಧೌರಹರಾದಲ್ಲಿ ಬಿಜೆಪಿ ಪರ ರ್ಯಾಲಿ ನಡೆಸಿದ ಅವರು, ‘ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟ ತಮ್ಮನ್ನು ದಾಳವಾಗಿ ಬಳಸುತ್ತಿವೆ ಎಂದು ಮುಸ್ಲಿಮರಿಗೆ ಈಗ ಅರ್ಥವಾಗಿದೆ. ಬಿಜೆಪಿ ಮಾಡಿದ ಅಭಿವೃದ್ಧಿ ನೋಡಿ ಮುಸ್ಲಿಂ ಸಮುದಾಯವೂ ಈಗ ಬಿಜೆಪಿಯತ್ತ ಬರುತ್ತಿದೆ’ ಎಂದು ಪ್ರತಿಪಾದಿಸಿದರು.</p>.<p>‘ಬಡವರು ಮತ್ತು ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ಸೇರಿದವರು ಕಾಂಗ್ರೆಸ್ ಮತ್ತು ವಿರೋಧಿ ಒಕ್ಕೂಟದಿಂದ ಅಂತರ ಕಾಯ್ದುಕೊಂಡಿದ್ದು, ಬಿಜೆಪಿಯತ್ತ ಬಂದಿದ್ದಾರೆ’ ಎಂದು ಹೇಳಿದರು.</p>.<p><strong>ಬಾಲರಾಮನ ದರ್ಶನದ ನಂತರ ರೋಡ್ ಶೋ </strong></p><p><strong>ಅಯೋಧ್ಯೆ</strong>: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಯೋಧ್ಯೆಯಲ್ಲಿ ರೋಡ್ ಶೋ ಆರಂಭಕ್ಕೂ ಮುನ್ನ ರಾಮಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. </p><p>ಜನವರಿ 22ರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ನಂತರ ರಾಮ ಮಂದಿರಕ್ಕೆ ಪ್ರಧಾನಿ ನೀಡಿದ ಮೊದಲ ಭೇಟಿ ಇದು ಎಂದು ವಿಶ್ವ ಹಿಂದೂ ಪರಿಷತ್ ಮಾಧ್ಯಮ ಉಸ್ತುವಾರಿ ಶರತ್ ಶರ್ಮಾ ತಿಳಿಸಿದರು. </p><p>ಭಾನುವಾರ ರಾಮ ಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಜೆಪಿಯ ಫೈಸಲಾಬಾದ್ ಅಭ್ಯರ್ಥಿ ಲಲ್ಲು ಸಿಂಗ್ ರೋಡ್ ಶೋನಲ್ಲಿ ಭಾಗವಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಟಾವಾ/ಸೀತಾಪುರ</strong>: ಭಾರತವು ಮುಂದಿನ ಸಾವಿರ ವರ್ಷಗಳ ಕಾಲ ಶಕ್ತಿಶಾಲಿ ರಾಷ್ಟ್ರವಾಗಿ ಉಳಿಯಲು ಅಡಿಪಾಯ ಹಾಕುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.</p>.<p>‘ಮೋದಿ ಇದನ್ನು ಏಕೆ ಮಾಡುತ್ತಿದ್ದಾರೆಂದರೆ, ಮೋದಿ ಇರಲಿ, ಇಲ್ಲದಿರಲಿ, ದೇಶ ಎಂದಿಗೂ ಇರುತ್ತದೆ’ ಎಂದ ಅವರು, ‘ಎಸ್ಪಿ–ಕಾಂಗ್ರೆಸ್ ಮಂದಿ ಏನು ಮಾಡುತ್ತಿದ್ದಾರೆ? ಅವರ ಭವಿಷ್ಯ ಮತ್ತು ಅವರ ಮಕ್ಕಳ ಭವಿಷ್ಯಕ್ಕಾಗಿ ಚುನಾವಣೆ ಎದುರಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.</p>.<p>ಮುಲಾಯಂ ಸಿಂಗ್ ಯಾದವ್ ಅವರ ತವರು ಜಿಲ್ಲೆ ಇಟಾವಾದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣದಲ್ಲಿ ತೊಡಗಿವೆ ಎಂದು ಟೀಕಿಸಿದರು. </p>.<p>‘ಕುಟುಂಬ ರಾಜಕಾರಣದ ಮೂಲಕ ಇವರು ಸೃಷ್ಟಿಸಿರುವ ಪರಂಪರೆ ಎಂತಹದ್ದು? ಕೆಲವರು ಮೈನ್ಪುರಿ, ಕನೌಜ್ ಮತ್ತು ಇಟಾವಾ ಅನ್ನು ತಮ್ಮ ಜಹಗೀರು ಎಂದು ಪರಿಗಣಿಸಿದರೆ, ಕೆಲವರು ಅಮೇಠಿ ಮತ್ತು ರಾಯ್ಬರೇಲಿಯನ್ನು ತಮ್ಮ ಜಹಗೀರು ಎಂದು ಪರಿಗಣಿಸಿದ್ದಾರೆ’ ಎಂದು ದೂರಿದರು.</p>.<p>‘ಮೋದಿ ನಿರ್ಮಿಸಿದ ಪರಂಪರೆ ಎಲ್ಲರಿಗೂ ಸೇರಿದ್ದು. 2047ರ ವೇಳೆಗೆ ನಿಮ್ಮ ಮಗ ಮತ್ತು ಮಗಳು ಕೂಡ ಪ್ರಧಾನಿ, ಮುಖ್ಯಮಂತ್ರಿ ಆಗಬೇಕು ಎಂದು ನಾನು ಬಯಸುತ್ತೇನೆ. ಪ್ರತಿಷ್ಠಿತ ಕುಟುಂಬಗಳ ಉತ್ತರಾಧಿಕಾರಿಗಳು ಮಾತ್ರ ಪ್ರಧಾನಿ, ಮುಖ್ಯಮಂತ್ರಿ ಆಗಬಹುದೆನ್ನುವ ಅನಿಷ್ಟ ಪರಂಪರೆಯನ್ನು ಈ ‘ಚಾಯ್ವಾಲಾ’ ಮುರಿದಿದ್ದಾರೆ’ ಎಂದು ಹೇಳಿದರು.</p>.<p>‘ಮೋದಿ ಮತ್ತು ಯೋಗಿ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಮಗೆ ಸ್ವಂತ ಮಕ್ಕಳಿಲ್ಲ’ ಎಂದು ಹೇಳಿದರು. </p>.<p>ಉತ್ತರ ಪ್ರದೇಶದ ಧೌರಹರಾದಲ್ಲಿ ಬಿಜೆಪಿ ಪರ ರ್ಯಾಲಿ ನಡೆಸಿದ ಅವರು, ‘ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟ ತಮ್ಮನ್ನು ದಾಳವಾಗಿ ಬಳಸುತ್ತಿವೆ ಎಂದು ಮುಸ್ಲಿಮರಿಗೆ ಈಗ ಅರ್ಥವಾಗಿದೆ. ಬಿಜೆಪಿ ಮಾಡಿದ ಅಭಿವೃದ್ಧಿ ನೋಡಿ ಮುಸ್ಲಿಂ ಸಮುದಾಯವೂ ಈಗ ಬಿಜೆಪಿಯತ್ತ ಬರುತ್ತಿದೆ’ ಎಂದು ಪ್ರತಿಪಾದಿಸಿದರು.</p>.<p>‘ಬಡವರು ಮತ್ತು ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ಸೇರಿದವರು ಕಾಂಗ್ರೆಸ್ ಮತ್ತು ವಿರೋಧಿ ಒಕ್ಕೂಟದಿಂದ ಅಂತರ ಕಾಯ್ದುಕೊಂಡಿದ್ದು, ಬಿಜೆಪಿಯತ್ತ ಬಂದಿದ್ದಾರೆ’ ಎಂದು ಹೇಳಿದರು.</p>.<p><strong>ಬಾಲರಾಮನ ದರ್ಶನದ ನಂತರ ರೋಡ್ ಶೋ </strong></p><p><strong>ಅಯೋಧ್ಯೆ</strong>: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಯೋಧ್ಯೆಯಲ್ಲಿ ರೋಡ್ ಶೋ ಆರಂಭಕ್ಕೂ ಮುನ್ನ ರಾಮಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. </p><p>ಜನವರಿ 22ರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ನಂತರ ರಾಮ ಮಂದಿರಕ್ಕೆ ಪ್ರಧಾನಿ ನೀಡಿದ ಮೊದಲ ಭೇಟಿ ಇದು ಎಂದು ವಿಶ್ವ ಹಿಂದೂ ಪರಿಷತ್ ಮಾಧ್ಯಮ ಉಸ್ತುವಾರಿ ಶರತ್ ಶರ್ಮಾ ತಿಳಿಸಿದರು. </p><p>ಭಾನುವಾರ ರಾಮ ಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಜೆಪಿಯ ಫೈಸಲಾಬಾದ್ ಅಭ್ಯರ್ಥಿ ಲಲ್ಲು ಸಿಂಗ್ ರೋಡ್ ಶೋನಲ್ಲಿ ಭಾಗವಹಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>