<p><strong>ಶಬರಿಮಲೆ</strong>: ಸಾಂಪ್ರದಾಯಿಕ ಕಾಡುದಾರಿಯಲ್ಲಿ ಪುಲ್ಲುಮೇಡು ಮತ್ತು ಎರುಮೇಲಿ ಮೂಲಕ ಪಾದಯಾತ್ರೆಯಲ್ಲಿ ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಶೀಘ್ರದಲ್ಲೇ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ತಿರುವಾಂಕೂರ್ ದೇವಸಂ ಮಂಡಳಿ ಅಧ್ಯಕ್ಷರಾದ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.</p><p>ಅರಣ್ಯ ಇಲಾಖೆ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಯಾತ್ರಾರ್ಥಿಗಳಿಗೆ ವಿಶೇಷ ಟ್ಯಾಗ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಟ್ಯಾಗ್ ನೀಡುವ ಹೊಣೆ ಅರಣ್ಯ ಅಧಿಕಾರಿಗಳದ್ದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.</p><p>ಪಂಪಾದಿಂದ ಸ್ವಾಮಿ ಅಯ್ಯಪ್ಪನ್ ಮಾರ್ಗವಾಗಿ ಅವರು ಸನ್ನಿಧಾನಕ್ಕೆ ತೆರಳಬಹುದು. ನೀಲಿಮಲೆ ಮಾರ್ಗವಾಗಿ ಬರುವ ಭಕ್ತರಿಗೂ ವಿಶೇಷ ದರ್ಶನ ಸಿಗಲಿದೆ ಎಂದು ಅವರು ಹೇಳಿದ್ದಾರೆ.</p><p>‘ಮರಕ್ಕೂಟಂನಲ್ಲಿ ಈ ವಿಶೇಷ ಟ್ಯಾಗ್ಗಳನ್ನು ಹೊಂದಿರುವ ಯಾತ್ರಾರ್ಥಿಗಳು ಶರಣ್ಕುತಿ ಮಾರ್ಗವನ್ನು ತಪ್ಪಿಸಿ ಚಂದ್ರನಂದನ್ ರಸ್ತೆಯ ಮೂಲಕ ಸನ್ನಿಧಾನವನ್ನು ಪ್ರವೇಶಿಸಬಹುದು. ಪುಲ್ಲುಮೇಡು ಮತ್ತು ಎರುಮೇಲಿಯಿಂದ ಈ ಗೊತ್ತುಪಡಿಸಿದ ಅರಣ್ಯ ಮಾರ್ಗಗಳ ಮೂಲಕ ಬರುವವರು ವಿಶೇಷ ಟ್ಯಾಗ್ಗಳನ್ನು ಸ್ವೀಕರಿಸುತ್ತಾರೆ. ದರ್ಶನಕ್ಕಾಗಿ ದೇವಾಲಯದಲ್ಲಿ ಮೀಸಲಾದ ಸರದಿಯನ್ನು ಬಳಸಬಹುದು’ಎಂದು ಅವರು ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಬರಿಮಲೆ</strong>: ಸಾಂಪ್ರದಾಯಿಕ ಕಾಡುದಾರಿಯಲ್ಲಿ ಪುಲ್ಲುಮೇಡು ಮತ್ತು ಎರುಮೇಲಿ ಮೂಲಕ ಪಾದಯಾತ್ರೆಯಲ್ಲಿ ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಶೀಘ್ರದಲ್ಲೇ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ತಿರುವಾಂಕೂರ್ ದೇವಸಂ ಮಂಡಳಿ ಅಧ್ಯಕ್ಷರಾದ ಪಿ.ಎಸ್. ಪ್ರಶಾಂತ್ ತಿಳಿಸಿದ್ದಾರೆ.</p><p>ಅರಣ್ಯ ಇಲಾಖೆ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಯಾತ್ರಾರ್ಥಿಗಳಿಗೆ ವಿಶೇಷ ಟ್ಯಾಗ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಟ್ಯಾಗ್ ನೀಡುವ ಹೊಣೆ ಅರಣ್ಯ ಅಧಿಕಾರಿಗಳದ್ದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.</p><p>ಪಂಪಾದಿಂದ ಸ್ವಾಮಿ ಅಯ್ಯಪ್ಪನ್ ಮಾರ್ಗವಾಗಿ ಅವರು ಸನ್ನಿಧಾನಕ್ಕೆ ತೆರಳಬಹುದು. ನೀಲಿಮಲೆ ಮಾರ್ಗವಾಗಿ ಬರುವ ಭಕ್ತರಿಗೂ ವಿಶೇಷ ದರ್ಶನ ಸಿಗಲಿದೆ ಎಂದು ಅವರು ಹೇಳಿದ್ದಾರೆ.</p><p>‘ಮರಕ್ಕೂಟಂನಲ್ಲಿ ಈ ವಿಶೇಷ ಟ್ಯಾಗ್ಗಳನ್ನು ಹೊಂದಿರುವ ಯಾತ್ರಾರ್ಥಿಗಳು ಶರಣ್ಕುತಿ ಮಾರ್ಗವನ್ನು ತಪ್ಪಿಸಿ ಚಂದ್ರನಂದನ್ ರಸ್ತೆಯ ಮೂಲಕ ಸನ್ನಿಧಾನವನ್ನು ಪ್ರವೇಶಿಸಬಹುದು. ಪುಲ್ಲುಮೇಡು ಮತ್ತು ಎರುಮೇಲಿಯಿಂದ ಈ ಗೊತ್ತುಪಡಿಸಿದ ಅರಣ್ಯ ಮಾರ್ಗಗಳ ಮೂಲಕ ಬರುವವರು ವಿಶೇಷ ಟ್ಯಾಗ್ಗಳನ್ನು ಸ್ವೀಕರಿಸುತ್ತಾರೆ. ದರ್ಶನಕ್ಕಾಗಿ ದೇವಾಲಯದಲ್ಲಿ ಮೀಸಲಾದ ಸರದಿಯನ್ನು ಬಳಸಬಹುದು’ಎಂದು ಅವರು ಹೇಳಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>