<p><strong>ನವದೆಹಲಿ</strong>: ಕೊರೊನಾ ಸೋಂಕು ತಡೆಗೆ ‘ಲಾಕ್ಡೌನ್’ ಘೋಷಿಸಿದ ನಂತರ ಸಂಕಷ್ಟ ಎದುರಿಸುವ ಸಾರ್ವಜನಿಕರ ನೆರವಿಗಾಗಿ ‘ವಿಶೇಷ ಪ್ಯಾಕೇಜ್’ ಘೋಷಿಸುವಂತೆ ಸಂಸತ್ನ ವಿಪತ್ತು ನಿರ್ವಹಣೆ ಸಮಿತಿಯುಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.</p>.<p>ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಸೇವೆಯೂ ಒಳಗೊಂಡಂತೆ ಜನಜೀವನ ನಿರ್ವಹಣೆಗೆ ನೆರವಾಗುವಂತೆ ದೊಡ್ಡ ಮಟ್ಟದ ಪ್ಯಾಕೇಜ್ ನೀಡುವಂತೆ ಸಂಸದ ಜಯಂತ್ ಸಿನ್ಹಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಸಲಹೆ ನೀಡಿದ್ದು, ಸರ್ಕಾರವು ಈ ವರದಿ ಆಧರಿಸಿ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.</p>.<p>ಸೋಂಕು ತಡೆ ನಿಟ್ಟಿನಲ್ಲಿ ಮನೆಗಳಿಂದ ಹೊರಬರದಂತೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದಲ್ಲಿ, ಕೃಷಿ ಕೂಲಿ, ಗೂಡಂಗಡಿ ವ್ಯಾಪಾರ, ಚಿಕ್ಕಪುಟ್ಟ ಉದ್ಯೋಗ ಅವಲಂಬಿಸಿರುವ ಬಡ ಕಾರ್ಮಿಕರಿಗೆ ಅಗತ್ಯ ಆಹಾರ ಸಾಮಗ್ರಿಯನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಮಿತಿ ನೀಡಿರುವ ಪ್ರಮುಖ ಸಲಹೆಯಾಗಿದೆ.</p>.<p>ರಾಜ್ಯದ ಹಿರಿಯ ಸಂಸದರೊಬ್ಬರು ಸೇರಿದಂತೆ ಒಟ್ಟು 8 ಜನರ ಈ ಸಮಿತಿಯು ಕಳೆದ ಬುಧವಾರದಿಂದ ನಾಲ್ಕೈದು ಬಾರಿ ಸಭೆ ಸೇರಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶನಿವಾರವೇ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಮೂಲಕ ಈ ಸಲಹೆಗಳನ್ನು ನೀಡಿದೆ. ಕೊರೊನಾ ತಡೆಗೆ ಸಮರೋಪಾದಿಯ ಕ್ರಮ ಕೈಗೊಳ್ಳಲು ಆಯಾ ರಾಜ್ಯಗಳಿಗೆ ಕೂಡಲೇ ಹೆಚ್ಚುವರಿ ಅನುದಾನ ಘೋಷಿಸ<br />ಬೇಕು. ಈ ವರ್ಷ ಬಾಕಿ ಉಳಿಸಿಕೊಳ್ಳಲಾದ ಜಿಎಸ್ಟಿ ನಷ್ಟ ಪರಿಹಾರ ಬಿಡುಗಡೆಗೂ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ತಿಳಿಸಿದೆ.</p>.<p>130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಾದ್ಯಂತ ಕೊರೊನಾ ಹರಡಿದರೆ ನಿಯಂತ್ರಣ ಕಷ್ಟಸಾಧ್ಯ. ಹಾಗಾಗಿ, ಚೀನಾ, ಇರಾನ್, ಸ್ಪೇನ್, ಇಟಲಿ ಮಾದರಿಯಲ್ಲಿ ಜನರನ್ನು ಮನೆಯಲ್ಲೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಮನೆಯಲ್ಲೇ ಇರುವ ಜನತೆಗೆ ಅಗತ್ಯ ಸೌಲಭ್ಯ ಒದಗಿಸಲು ನೆರವಾಗುವಂತೆ ₹ 6ರಿಂದ ₹ 8 ಲಕ್ಷ ಕೋಟಿ ಹಣವನ್ನು ಮೀಸಲಿರಿಸಬೇಕು ಎಂದೂ ಸಮಿತಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೊರೊನಾ ಸೋಂಕು ತಡೆಗೆ ‘ಲಾಕ್ಡೌನ್’ ಘೋಷಿಸಿದ ನಂತರ ಸಂಕಷ್ಟ ಎದುರಿಸುವ ಸಾರ್ವಜನಿಕರ ನೆರವಿಗಾಗಿ ‘ವಿಶೇಷ ಪ್ಯಾಕೇಜ್’ ಘೋಷಿಸುವಂತೆ ಸಂಸತ್ನ ವಿಪತ್ತು ನಿರ್ವಹಣೆ ಸಮಿತಿಯುಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.</p>.<p>ಸಾರ್ವಜನಿಕ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಸೇವೆಯೂ ಒಳಗೊಂಡಂತೆ ಜನಜೀವನ ನಿರ್ವಹಣೆಗೆ ನೆರವಾಗುವಂತೆ ದೊಡ್ಡ ಮಟ್ಟದ ಪ್ಯಾಕೇಜ್ ನೀಡುವಂತೆ ಸಂಸದ ಜಯಂತ್ ಸಿನ್ಹಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಸಲಹೆ ನೀಡಿದ್ದು, ಸರ್ಕಾರವು ಈ ವರದಿ ಆಧರಿಸಿ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.</p>.<p>ಸೋಂಕು ತಡೆ ನಿಟ್ಟಿನಲ್ಲಿ ಮನೆಗಳಿಂದ ಹೊರಬರದಂತೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದಲ್ಲಿ, ಕೃಷಿ ಕೂಲಿ, ಗೂಡಂಗಡಿ ವ್ಯಾಪಾರ, ಚಿಕ್ಕಪುಟ್ಟ ಉದ್ಯೋಗ ಅವಲಂಬಿಸಿರುವ ಬಡ ಕಾರ್ಮಿಕರಿಗೆ ಅಗತ್ಯ ಆಹಾರ ಸಾಮಗ್ರಿಯನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಮಿತಿ ನೀಡಿರುವ ಪ್ರಮುಖ ಸಲಹೆಯಾಗಿದೆ.</p>.<p>ರಾಜ್ಯದ ಹಿರಿಯ ಸಂಸದರೊಬ್ಬರು ಸೇರಿದಂತೆ ಒಟ್ಟು 8 ಜನರ ಈ ಸಮಿತಿಯು ಕಳೆದ ಬುಧವಾರದಿಂದ ನಾಲ್ಕೈದು ಬಾರಿ ಸಭೆ ಸೇರಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶನಿವಾರವೇ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಮೂಲಕ ಈ ಸಲಹೆಗಳನ್ನು ನೀಡಿದೆ. ಕೊರೊನಾ ತಡೆಗೆ ಸಮರೋಪಾದಿಯ ಕ್ರಮ ಕೈಗೊಳ್ಳಲು ಆಯಾ ರಾಜ್ಯಗಳಿಗೆ ಕೂಡಲೇ ಹೆಚ್ಚುವರಿ ಅನುದಾನ ಘೋಷಿಸ<br />ಬೇಕು. ಈ ವರ್ಷ ಬಾಕಿ ಉಳಿಸಿಕೊಳ್ಳಲಾದ ಜಿಎಸ್ಟಿ ನಷ್ಟ ಪರಿಹಾರ ಬಿಡುಗಡೆಗೂ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ತಿಳಿಸಿದೆ.</p>.<p>130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಾದ್ಯಂತ ಕೊರೊನಾ ಹರಡಿದರೆ ನಿಯಂತ್ರಣ ಕಷ್ಟಸಾಧ್ಯ. ಹಾಗಾಗಿ, ಚೀನಾ, ಇರಾನ್, ಸ್ಪೇನ್, ಇಟಲಿ ಮಾದರಿಯಲ್ಲಿ ಜನರನ್ನು ಮನೆಯಲ್ಲೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಮನೆಯಲ್ಲೇ ಇರುವ ಜನತೆಗೆ ಅಗತ್ಯ ಸೌಲಭ್ಯ ಒದಗಿಸಲು ನೆರವಾಗುವಂತೆ ₹ 6ರಿಂದ ₹ 8 ಲಕ್ಷ ಕೋಟಿ ಹಣವನ್ನು ಮೀಸಲಿರಿಸಬೇಕು ಎಂದೂ ಸಮಿತಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>