<p><strong>ಲಖನೌ: </strong>ಕಾಂಗ್ರೆಸ್ ಸೇರುವ ವದಂತಿಗಳನ್ನು ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಅವರು ಶುಕ್ರವಾರ ನಿರಾಕರಿಸಿದ್ದಾರೆ. ಇದೆಲ್ಲವೂ ಸುಳ್ಳು ಸುದ್ದಿ ಎಂದು ಅವರು ತಿಳಿಸಿದ್ದಾರೆ.</p>.<p>ಶಿವಪಾಲ್ ಸಿಂಗ್ ಯಾದವ್ ಅವರು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ತಮ್ಮ. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ.</p>.<p>ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಒಂದಾಗಿದ್ದ ಶಿವಪಾಲ್ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಕೆಲ ತಿಂಗಳ ನಂತರ ಬೇರ್ಪಟ್ಟಿದ್ದರು.</p>.<p>ಕೃಷ್ಣ ಜನ್ಮಾಷ್ಟಮಿಯಂದು ಸಂದೇಶ ಹಂಚಿಕೊಂಡಿದ್ದ ಶಿವಪಾಲ್ ಯಾದವ್, ‘ಕಂಸನಂಥವರು ಸಮಾಜದಲ್ಲಿ ತಂದೆಯನ್ನೇ ಅವಮಾನಿಸಿ, ಮೋಸದಿಂದ ಗೆದ್ದಾಗ ಶ್ರೀ ಕೃಷ್ಣ ಖಂಡಿತವಾಗಿಯೂ ಅವತಾರವೆತ್ತಿ ಬಂದು ಧರ್ಮವನ್ನು ಸ್ಥಾಪಿಸುತ್ತಾನೆ’ ಎಂದು ಮಾರ್ಮಿಕವಾಗಿ ಹೇಳಿದ್ದರು.</p>.<p>ಶಿವಪಾಲ್ ಯಾದವ್ ಅವರ ಈ ಮಾತುಗಳನ್ನು ರಾಜಕೀಯ ವಿಶ್ಲೇಷಕರು ಚಿಕ್ಕಪ್ಪ ಮತ್ತು ಮಗನ ನಡುವಿನ ಜಗಳಕ್ಕೆ ಸಂಬಂಧ ಕಲ್ಪಿಸಿದ್ದಾರೆ. ಆದರೆ ಶಿವಪಾಲ್ ಯಾದವ್ ಅವರು ತನ್ನ ಅಣ್ಣನ ಮಗನ ಹೆಸರನ್ನು ಎಲ್ಲಿಯೂ ಎತ್ತದೇ ಟೀಕೆ ಮಾಡಿದ್ದಾರೆ.</p>.<p>ಈ ಮಧ್ಯೆ, ಶಿವಪಾಲ್ ಯಾದವ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಉತ್ತರ ಪ್ರದೇಶದ ರಾಜಕೀಯದಲ್ಲಿ ಬಲವಾಗಿ ಕೇಳಿ ಬರುತ್ತಿದ್ದು, ಸ್ವತಃ ಶಿವಪಾಲ್ ಯಾದವ್ ಅವರೇ ಅದನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, ಇದೆಲ್ಲವೂ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.</p>.<p>ಆದರೆ, 2024ರ ಸಾರ್ವತ್ರಿಕ ಚುನಾವಣೆಗೆ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವುದಾಗಿ ಶಿವಪಾಲ್ ಯಾದವ್ ಹೇಳಿದ್ದಾರೆ.</p>.<p>‘ಅಖಿಲೇಶ್ ಯಾದವ್ ಅವರ ರಾಜಕೀಯ ಅಪ್ರಬುದ್ಧತೆಯಿಂದಾಗಿಯೇ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೋಲು ಎದುರಾಯಿತು’ ಎಂದು ಶಿವಪಾಲ್ ಸಿಂಗ್ ಯಾದವ್ ಇತ್ತೀಚೆಗೆ ಟೀಕಿಸಿದ್ದರು.</p>.<p>ಶಿವಪಾಲ್ ಯಾದವ್ ಅವರು ಬಿಜೆಪಿ ಸೇರುವುದಾಗಿ ಈ ಹಿಂದೆ ಸುದ್ದಿಯಾಗಿತ್ತು.</p>.<p><strong>ಇವುಗಳನ್ನೂ ಓದಿ...</strong></p>.<p><a href="https://www.prajavani.net/india-news/shivpal-yadav-declares-support-for-nda-presidential-nominee-murmu-952835.html" itemprop="url">ರಾಷ್ಟ್ರಪತಿ ಚುನಾವಣೆ: ಮುರ್ಮುಗೆ ಬೆಂಬಲ ಘೋಷಿಸಿದ ಶಿವಪಾಲ್ ಯಾದವ್ </a></p>.<p><a href="https://www.prajavani.net/india-news/shivpals-tweet-declares-war-against-akhilesh-on-eid-933708.html" itemprop="url">ನಾನು ನಡೆಯುವುದು ಕಲಿಸಿದೆ, ಆತ ತುಳಿದ: ಮುಲಾಯಂ ತಮ್ಮ ಶಿವಪಾಲ್ ಬಹಿರಂಗ ಆಕ್ರೋಶ </a></p>.<p><a href="https://www.prajavani.net/technology/viral/mithai-lal-farmer-of-ambedkar-nagar-named-his-children-mulayam-singh-manmohan-singh-bal-thackery-and-916460.html" itemprop="url">ಬಿಜೆಪಿ ಬೆಂಬಲಿಸಿದ ಮನಮೋಹನ್ ಸಿಂಗ್, ಮುಲಾಯಂ ಸಿಂಗ್... ಆದರೆ! </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ: </strong>ಕಾಂಗ್ರೆಸ್ ಸೇರುವ ವದಂತಿಗಳನ್ನು ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ) ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಅವರು ಶುಕ್ರವಾರ ನಿರಾಕರಿಸಿದ್ದಾರೆ. ಇದೆಲ್ಲವೂ ಸುಳ್ಳು ಸುದ್ದಿ ಎಂದು ಅವರು ತಿಳಿಸಿದ್ದಾರೆ.</p>.<p>ಶಿವಪಾಲ್ ಸಿಂಗ್ ಯಾದವ್ ಅವರು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ತಮ್ಮ. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ.</p>.<p>ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಒಂದಾಗಿದ್ದ ಶಿವಪಾಲ್ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಕೆಲ ತಿಂಗಳ ನಂತರ ಬೇರ್ಪಟ್ಟಿದ್ದರು.</p>.<p>ಕೃಷ್ಣ ಜನ್ಮಾಷ್ಟಮಿಯಂದು ಸಂದೇಶ ಹಂಚಿಕೊಂಡಿದ್ದ ಶಿವಪಾಲ್ ಯಾದವ್, ‘ಕಂಸನಂಥವರು ಸಮಾಜದಲ್ಲಿ ತಂದೆಯನ್ನೇ ಅವಮಾನಿಸಿ, ಮೋಸದಿಂದ ಗೆದ್ದಾಗ ಶ್ರೀ ಕೃಷ್ಣ ಖಂಡಿತವಾಗಿಯೂ ಅವತಾರವೆತ್ತಿ ಬಂದು ಧರ್ಮವನ್ನು ಸ್ಥಾಪಿಸುತ್ತಾನೆ’ ಎಂದು ಮಾರ್ಮಿಕವಾಗಿ ಹೇಳಿದ್ದರು.</p>.<p>ಶಿವಪಾಲ್ ಯಾದವ್ ಅವರ ಈ ಮಾತುಗಳನ್ನು ರಾಜಕೀಯ ವಿಶ್ಲೇಷಕರು ಚಿಕ್ಕಪ್ಪ ಮತ್ತು ಮಗನ ನಡುವಿನ ಜಗಳಕ್ಕೆ ಸಂಬಂಧ ಕಲ್ಪಿಸಿದ್ದಾರೆ. ಆದರೆ ಶಿವಪಾಲ್ ಯಾದವ್ ಅವರು ತನ್ನ ಅಣ್ಣನ ಮಗನ ಹೆಸರನ್ನು ಎಲ್ಲಿಯೂ ಎತ್ತದೇ ಟೀಕೆ ಮಾಡಿದ್ದಾರೆ.</p>.<p>ಈ ಮಧ್ಯೆ, ಶಿವಪಾಲ್ ಯಾದವ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಉತ್ತರ ಪ್ರದೇಶದ ರಾಜಕೀಯದಲ್ಲಿ ಬಲವಾಗಿ ಕೇಳಿ ಬರುತ್ತಿದ್ದು, ಸ್ವತಃ ಶಿವಪಾಲ್ ಯಾದವ್ ಅವರೇ ಅದನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, ಇದೆಲ್ಲವೂ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.</p>.<p>ಆದರೆ, 2024ರ ಸಾರ್ವತ್ರಿಕ ಚುನಾವಣೆಗೆ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವುದಾಗಿ ಶಿವಪಾಲ್ ಯಾದವ್ ಹೇಳಿದ್ದಾರೆ.</p>.<p>‘ಅಖಿಲೇಶ್ ಯಾದವ್ ಅವರ ರಾಜಕೀಯ ಅಪ್ರಬುದ್ಧತೆಯಿಂದಾಗಿಯೇ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೋಲು ಎದುರಾಯಿತು’ ಎಂದು ಶಿವಪಾಲ್ ಸಿಂಗ್ ಯಾದವ್ ಇತ್ತೀಚೆಗೆ ಟೀಕಿಸಿದ್ದರು.</p>.<p>ಶಿವಪಾಲ್ ಯಾದವ್ ಅವರು ಬಿಜೆಪಿ ಸೇರುವುದಾಗಿ ಈ ಹಿಂದೆ ಸುದ್ದಿಯಾಗಿತ್ತು.</p>.<p><strong>ಇವುಗಳನ್ನೂ ಓದಿ...</strong></p>.<p><a href="https://www.prajavani.net/india-news/shivpal-yadav-declares-support-for-nda-presidential-nominee-murmu-952835.html" itemprop="url">ರಾಷ್ಟ್ರಪತಿ ಚುನಾವಣೆ: ಮುರ್ಮುಗೆ ಬೆಂಬಲ ಘೋಷಿಸಿದ ಶಿವಪಾಲ್ ಯಾದವ್ </a></p>.<p><a href="https://www.prajavani.net/india-news/shivpals-tweet-declares-war-against-akhilesh-on-eid-933708.html" itemprop="url">ನಾನು ನಡೆಯುವುದು ಕಲಿಸಿದೆ, ಆತ ತುಳಿದ: ಮುಲಾಯಂ ತಮ್ಮ ಶಿವಪಾಲ್ ಬಹಿರಂಗ ಆಕ್ರೋಶ </a></p>.<p><a href="https://www.prajavani.net/technology/viral/mithai-lal-farmer-of-ambedkar-nagar-named-his-children-mulayam-singh-manmohan-singh-bal-thackery-and-916460.html" itemprop="url">ಬಿಜೆಪಿ ಬೆಂಬಲಿಸಿದ ಮನಮೋಹನ್ ಸಿಂಗ್, ಮುಲಾಯಂ ಸಿಂಗ್... ಆದರೆ! </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>