<p><strong>ಕೊಚ್ಚಿ:</strong>ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಬ್ಬರ ಪ್ರವೇಶ ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇಶ್ರೀಲಂಕಾ ಮಹಿಳೆ ಶಶಿಕಲಾ ಎಂಬುವವರು ಗುರುವಾರ ರಾತ್ರಿ ದೇಗುಲ ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ.</p>.<p>ಕೆಲವು ಮೂಲಗಳ ಪ್ರಕಾರ ಶಶಿಕಲಾ ದೇಗುಲ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿ ವಾಪಸಾಗಿದ್ದಾರೆ. ಆದರೆ ಇನ್ನು ಕೆಲವು ಮೂಲಗಳು, ಶಶಿಕಲಾ 18 ಮೆಟ್ಟಿಲುಗಳನ್ನೇರಿ ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ ಎಂದಿವೆ.</p>.<p>18 ಮೆಟ್ಟಿಲುಗಳನ್ನೇರಿ ರಾತ್ರಿ 9.30ರ ವೇಳೆಗೆ ದೇಗುಲ ಪ್ರವೇಶಿಸಿರುವ ಶಶಿಕಲಾ ಪ್ರಾರ್ಥನೆ ಸಲ್ಲಿಸಿ 11.30ಕ್ಕೆ ಸುರಕ್ಷಿತವಾಗಿ ಪಂಪಾಕ್ಕೆ ಹಿಂದಿರುಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ <a href="https://www.thehindu.com/news/national/kerala/46-year-old-sri-lankan-woman-climbs-18-steps-worships-at-sabarimala/article25903427.ece?fbclid=IwAR1B7nog5vxCUqK_WibNE7HS4RqNCfK2D7vd89eydu-Yc9P3vtnAiVKGWlQ" target="_blank"><strong>ದಿ ಹಿಂದೂ</strong></a>ವರದಿ ಮಾಡಿದೆ. ಅಶೋಕ್ ಕುಮಾರನ್ ಎಂಬುವವರ ಮಗಳಾಗಿರುವ ಶಶಿಕಲಾ ಶ್ರೀಲಂಕಾ ಪಾಸ್ಪೋರ್ಟ್ ಹೊಂದಿದ್ದು, 1972ರ ಡಿಸೆಂಬರ್ 3ರಂದು ಜನಿಸಿದವರಾಗಿದ್ದಾರೆ ಎಂದು ಈ ವರದಿ ಉಲ್ಲೇಖಿಸಿದೆ.</p>.<p>ಶಶಿಕಲಾ ಅವರು ಸಂಬಂಧಿಕರ ಜತೆ ದೇಗುಲ ಪ್ರವೇಶಿಸಿದ್ದಾರೆ. ಅವರಿಗೆ ಯಾವುದೇ ರೀತಿಯ ಅಡಚಣೆ ಎದುರಾಗಿಲ್ಲ.ಶಶಿಕಲಾ ಅವರು ದರ್ಶನದ ಸಮಯವನ್ನು ಮುಂಗಡ ಬುಕ್ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.</p>.<p>ಈ ಮಧ್ಯೆ, 46 ವರ್ಷ ವಯಸ್ಸಿನ ಶ್ರೀಲಂಕಾ ಮಹಿಳೆ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು <a href="https://english.manoramaonline.com/news/kerala/2019/01/04/sabarimala-temple-womens-entry-issue-kerala.html" target="_blank"><strong>ಮನೋರಮಾಆನ್ಲೈನ್</strong></a> ಸುದ್ದಿತಾಣದಲ್ಲಿ ವರದಿಯಾಗಿದೆ.</p>.<p>ಪತಿ ಮತ್ತು ಮಗುವಿನೊಂದಿಗೆ ಗುರುವಾರ ರಾತ್ರಿ ಪಂಪಾಗೆ ಬಂದ ಮಹಿಳೆಗೆ ಆರಂಭದಲ್ಲಿ ಪೊಲೀಸರು ಭದ್ರತೆ ಒದಗಿಸಿದರು. ಆದರೆ, ದೇಗುಲದ ಬಳಿ ತಲುಪಿದ ನಂತರ ಮುಂದುವರಿಯಲಾಗಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.</p>.<p>‘ನಾವು ಮಫ್ತಿಯಲ್ಲಿರುವ ಪೊಲೀಸರ ಭದ್ರತೆಯೊಂದಿಗೆ ದೇಗುಲದವರೆಗೆ ತೆರಳಿದೆವು. ಆದರೆ ಶಬರಿಪೀಠದಲ್ಲಿರುವ ಮಾಧ್ಯಮದವರನ್ನು ನೋಡಿದ ನಂತರ ಪೊಲೀಸರು ಹಿಂದೆಯೇ ಉಳಿದುಬಿಟ್ಟರು. ಹೀಗಾಗಿ ನಮಗೆ ಮುಂದುವರಿಯಲಾಗಲಿಲ್ಲ’ ಎಂಬ ಶಶಿಕಲಾ ಪತಿ ಸರವಣಮಾರನ್ ಹೇಳಿಕೆಯನ್ನು<strong>ಮನೋರಮಾಆನ್ಲೈನ್ </strong>ವರದಿ ಉಲ್ಲೇಖಿಸಿದೆ.</p>.<p>ಸರವಣಮಾರನ್ ಅವರನ್ನು ನಂತರ ಪಂಪಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಶಶಿಕಲಾ ಅವರನ್ನು ಬಿಗಿ ಭದ್ರತೆಯೊಂದಿಗೆ ವಾಪಸ್ ಕರೆದೊಯ್ಯಲಾಗಿದೆ. ಶಶಿಕಲಾ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ, ‘ಪ್ರಾರ್ಥನೆ ಸಲ್ಲಿಸಲು ಪೊಲೀಸರು ಅವಕಾಶ ನೀಡಲಿಲ್ಲ’ ಎಂದು ದೂರಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ:</strong>ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಬ್ಬರ ಪ್ರವೇಶ ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇಶ್ರೀಲಂಕಾ ಮಹಿಳೆ ಶಶಿಕಲಾ ಎಂಬುವವರು ಗುರುವಾರ ರಾತ್ರಿ ದೇಗುಲ ಪ್ರವೇಶಿಸಿದ್ದಾರೆ ಎಂದು ವರದಿಯಾಗಿದೆ.</p>.<p>ಕೆಲವು ಮೂಲಗಳ ಪ್ರಕಾರ ಶಶಿಕಲಾ ದೇಗುಲ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿ ವಾಪಸಾಗಿದ್ದಾರೆ. ಆದರೆ ಇನ್ನು ಕೆಲವು ಮೂಲಗಳು, ಶಶಿಕಲಾ 18 ಮೆಟ್ಟಿಲುಗಳನ್ನೇರಿ ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ ಎಂದಿವೆ.</p>.<p>18 ಮೆಟ್ಟಿಲುಗಳನ್ನೇರಿ ರಾತ್ರಿ 9.30ರ ವೇಳೆಗೆ ದೇಗುಲ ಪ್ರವೇಶಿಸಿರುವ ಶಶಿಕಲಾ ಪ್ರಾರ್ಥನೆ ಸಲ್ಲಿಸಿ 11.30ಕ್ಕೆ ಸುರಕ್ಷಿತವಾಗಿ ಪಂಪಾಕ್ಕೆ ಹಿಂದಿರುಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ <a href="https://www.thehindu.com/news/national/kerala/46-year-old-sri-lankan-woman-climbs-18-steps-worships-at-sabarimala/article25903427.ece?fbclid=IwAR1B7nog5vxCUqK_WibNE7HS4RqNCfK2D7vd89eydu-Yc9P3vtnAiVKGWlQ" target="_blank"><strong>ದಿ ಹಿಂದೂ</strong></a>ವರದಿ ಮಾಡಿದೆ. ಅಶೋಕ್ ಕುಮಾರನ್ ಎಂಬುವವರ ಮಗಳಾಗಿರುವ ಶಶಿಕಲಾ ಶ್ರೀಲಂಕಾ ಪಾಸ್ಪೋರ್ಟ್ ಹೊಂದಿದ್ದು, 1972ರ ಡಿಸೆಂಬರ್ 3ರಂದು ಜನಿಸಿದವರಾಗಿದ್ದಾರೆ ಎಂದು ಈ ವರದಿ ಉಲ್ಲೇಖಿಸಿದೆ.</p>.<p>ಶಶಿಕಲಾ ಅವರು ಸಂಬಂಧಿಕರ ಜತೆ ದೇಗುಲ ಪ್ರವೇಶಿಸಿದ್ದಾರೆ. ಅವರಿಗೆ ಯಾವುದೇ ರೀತಿಯ ಅಡಚಣೆ ಎದುರಾಗಿಲ್ಲ.ಶಶಿಕಲಾ ಅವರು ದರ್ಶನದ ಸಮಯವನ್ನು ಮುಂಗಡ ಬುಕ್ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.</p>.<p>ಈ ಮಧ್ಯೆ, 46 ವರ್ಷ ವಯಸ್ಸಿನ ಶ್ರೀಲಂಕಾ ಮಹಿಳೆ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು <a href="https://english.manoramaonline.com/news/kerala/2019/01/04/sabarimala-temple-womens-entry-issue-kerala.html" target="_blank"><strong>ಮನೋರಮಾಆನ್ಲೈನ್</strong></a> ಸುದ್ದಿತಾಣದಲ್ಲಿ ವರದಿಯಾಗಿದೆ.</p>.<p>ಪತಿ ಮತ್ತು ಮಗುವಿನೊಂದಿಗೆ ಗುರುವಾರ ರಾತ್ರಿ ಪಂಪಾಗೆ ಬಂದ ಮಹಿಳೆಗೆ ಆರಂಭದಲ್ಲಿ ಪೊಲೀಸರು ಭದ್ರತೆ ಒದಗಿಸಿದರು. ಆದರೆ, ದೇಗುಲದ ಬಳಿ ತಲುಪಿದ ನಂತರ ಮುಂದುವರಿಯಲಾಗಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.</p>.<p>‘ನಾವು ಮಫ್ತಿಯಲ್ಲಿರುವ ಪೊಲೀಸರ ಭದ್ರತೆಯೊಂದಿಗೆ ದೇಗುಲದವರೆಗೆ ತೆರಳಿದೆವು. ಆದರೆ ಶಬರಿಪೀಠದಲ್ಲಿರುವ ಮಾಧ್ಯಮದವರನ್ನು ನೋಡಿದ ನಂತರ ಪೊಲೀಸರು ಹಿಂದೆಯೇ ಉಳಿದುಬಿಟ್ಟರು. ಹೀಗಾಗಿ ನಮಗೆ ಮುಂದುವರಿಯಲಾಗಲಿಲ್ಲ’ ಎಂಬ ಶಶಿಕಲಾ ಪತಿ ಸರವಣಮಾರನ್ ಹೇಳಿಕೆಯನ್ನು<strong>ಮನೋರಮಾಆನ್ಲೈನ್ </strong>ವರದಿ ಉಲ್ಲೇಖಿಸಿದೆ.</p>.<p>ಸರವಣಮಾರನ್ ಅವರನ್ನು ನಂತರ ಪಂಪಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಶಶಿಕಲಾ ಅವರನ್ನು ಬಿಗಿ ಭದ್ರತೆಯೊಂದಿಗೆ ವಾಪಸ್ ಕರೆದೊಯ್ಯಲಾಗಿದೆ. ಶಶಿಕಲಾ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ, ‘ಪ್ರಾರ್ಥನೆ ಸಲ್ಲಿಸಲು ಪೊಲೀಸರು ಅವಕಾಶ ನೀಡಲಿಲ್ಲ’ ಎಂದು ದೂರಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>