<p><strong>ನವದೆಹಲಿ:</strong> ‘2025ರ ವೇಳೆಗೆ ಭಾರತದಿಂದ ಕ್ಷಯರೋಗ (ಟಿ.ಬಿ) ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಗಳು ಸಾಗಿದ್ದು, ಈ ನಿಟ್ಟಿನಲ್ಲಿ ಪ್ರಕರಣಗಳ ಸಂಖ್ಯೆಗಳು ಕಡಿಮೆಯಾಗುತ್ತಿವೆ’ ಎಂದು ಪ್ರಧಾನಿ ಮೋದಿ ಹೇಳಿದರು. </p>.<p>‘ಅಂತೆಯೇ ದೇಶದಾದ್ಯಂತ 'ಕಾಲಾ ಅಜರ್", ಕುಷ್ಠರೋಗ ಮತ್ತು ಮಲೇರಿಯಾದ ಪ್ರಕರಣಗಳಲ್ಲೂ ಗಮನಾರ್ಹವಾಗಿ ಇಳಿಕೆಯಾಗಿದೆ. 2013ರಲ್ಲಿ ದೇಶದಲ್ಲಿ ಕಾಲಾ ಅಜರ್ನ 11 ಸಾವಿರ ಪ್ರಕರಣಗಳಿದ್ದವು. ಈಗ ಈ ಸಂಖ್ಯೆ ಸಾವಿರಕ್ಕಿಂತಲೂ ಕಡಿಮೆಯಾಗಿದೆ. 2013ರಲ್ಲಿ 10 ಲಕ್ಷ ಮಲೇರಿಯಾ ಪ್ರಕರಣಗಳಿದ್ದವು, 2022ರ ವೇಳೆಗೆ ಈ ಪ್ರಕರಣ ಸಂಖ್ಯೆ 2 ಲಕ್ಷಕ್ಕೆ ಇಳಿದಿದೆ. ಕುಷ್ಠರೋಗಿಗಳ ಸಂಖ್ಯೆಯೂ 1.25 ಲಕ್ಷದಿಂದ 70ರಿಂದ 75 ಸಾವಿರಕ್ಕೆ ಇಳಿದಿದೆ’ ಎಂದು ಮಾಹಿತಿ ನೀಡಿದರು. </p>.<p>‘ಶನಿವಾರ 1 ಕೋಟಿ ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಗಿದೆ. ಈ ಕಾರ್ಡ್ಗಳು ಆಸ್ಪತ್ರೆಗಳಲ್ಲಿ ಬಡವರಿಗೆ ₹ 5 ಲಕ್ಷದ ತನಕ ಚಿಕಿತ್ಸೆ ಪಡೆಯಲು ಎಟಿಎಂ ಕಾರ್ಡ್ಗಳಂತೆ ಕಾರ್ಯನಿರ್ವಹಿಸಲಿವೆ’ ಎಂದೂ ಮೋದಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘2025ರ ವೇಳೆಗೆ ಭಾರತದಿಂದ ಕ್ಷಯರೋಗ (ಟಿ.ಬಿ) ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಗಳು ಸಾಗಿದ್ದು, ಈ ನಿಟ್ಟಿನಲ್ಲಿ ಪ್ರಕರಣಗಳ ಸಂಖ್ಯೆಗಳು ಕಡಿಮೆಯಾಗುತ್ತಿವೆ’ ಎಂದು ಪ್ರಧಾನಿ ಮೋದಿ ಹೇಳಿದರು. </p>.<p>‘ಅಂತೆಯೇ ದೇಶದಾದ್ಯಂತ 'ಕಾಲಾ ಅಜರ್", ಕುಷ್ಠರೋಗ ಮತ್ತು ಮಲೇರಿಯಾದ ಪ್ರಕರಣಗಳಲ್ಲೂ ಗಮನಾರ್ಹವಾಗಿ ಇಳಿಕೆಯಾಗಿದೆ. 2013ರಲ್ಲಿ ದೇಶದಲ್ಲಿ ಕಾಲಾ ಅಜರ್ನ 11 ಸಾವಿರ ಪ್ರಕರಣಗಳಿದ್ದವು. ಈಗ ಈ ಸಂಖ್ಯೆ ಸಾವಿರಕ್ಕಿಂತಲೂ ಕಡಿಮೆಯಾಗಿದೆ. 2013ರಲ್ಲಿ 10 ಲಕ್ಷ ಮಲೇರಿಯಾ ಪ್ರಕರಣಗಳಿದ್ದವು, 2022ರ ವೇಳೆಗೆ ಈ ಪ್ರಕರಣ ಸಂಖ್ಯೆ 2 ಲಕ್ಷಕ್ಕೆ ಇಳಿದಿದೆ. ಕುಷ್ಠರೋಗಿಗಳ ಸಂಖ್ಯೆಯೂ 1.25 ಲಕ್ಷದಿಂದ 70ರಿಂದ 75 ಸಾವಿರಕ್ಕೆ ಇಳಿದಿದೆ’ ಎಂದು ಮಾಹಿತಿ ನೀಡಿದರು. </p>.<p>‘ಶನಿವಾರ 1 ಕೋಟಿ ಜನರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಗಿದೆ. ಈ ಕಾರ್ಡ್ಗಳು ಆಸ್ಪತ್ರೆಗಳಲ್ಲಿ ಬಡವರಿಗೆ ₹ 5 ಲಕ್ಷದ ತನಕ ಚಿಕಿತ್ಸೆ ಪಡೆಯಲು ಎಟಿಎಂ ಕಾರ್ಡ್ಗಳಂತೆ ಕಾರ್ಯನಿರ್ವಹಿಸಲಿವೆ’ ಎಂದೂ ಮೋದಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>