<p><strong>ಮುಂಬೈ:</strong> ಆತ್ಮನಿರ್ಭರ ನೀತಿಯಡಿ ನಿರ್ಮಾಣಗೊಂಡ ‘ಅರ್ಣಾಲಾ’ ಜಲಾಂತರ್ಗಾಮಿಯು ಭಾರತೀಯ ನೌಕಾಪಡೆಗೆ ಬುಧವಾರ ಸೇರ್ಪಡೆಗೊಂಡಿತು.</p>.<p>ಶತ್ರುಗಳ ದಾಳಿಯನ್ನು ತಡೆಗಟ್ಟಬಹುದಾದ ಸಾಮರ್ಥ್ಯ ಹೊಂದಿರುವ ಭಾರತೀಯ ನೌಕಾಪಡೆಯ ಮೊದಲ ಜಲಾಂತರ್ಗಾಮಿ ಇದು. ಶತ್ರು ದೇಶಗಳ ಜಲಾಂತರ್ಗಾಮಿಗಳ ಚಲನವಲನವನ್ನು ಪತ್ತೆ ಹಚ್ಚುವ ಜೊತೆಗೆ ಅವನ್ನು ತಟಸ್ಥಗೊಳಿಸುವ ದಕ್ಷತೆಯನ್ನು ಹೊಂದಿದೆ.</p>.<p>ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಐತಿಹಾಸಿಕ ಕೋಟೆಯ ಹೆಸರನ್ನು ಹೊಂದಿರುವ ಈ ಅತ್ಯಾಧುನಿಕ ಜಲಾಂತರ್ಗಾಮಿಯನ್ನು ಕೋಲ್ಕತ್ತ ಮೂಲದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ ಲಿಮಿಟೆಡ್ (ಜಿಆರ್ಎಸ್ಇ) ನಿರ್ಮಿಸಿದೆ.</p>.<p>ಶತ್ರುಗಳ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಿಗಾಗಿಯೇ ಡೀಸೆಲ್ ಎಂಜಿನ್ ಹಾಗೂ ವಾಟರ್ ಜೆಟ್ನ ಸಂಯೋಜನೆಯೊಂದಿಗೆ ವಿನ್ಯಾಸಗೊಳಿಸಲಾಗಿರುವ ಈ ಯುದ್ಧನೌಕೆಯನ್ನು ವಿಶಾಖಪಟ್ಟಣಂನ ನೌಕಾನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಸಮ್ಮುಖ ನೌಕಾಪಡೆಗೆ ನಿಯೋಜಿಸಲಾಯಿತು.</p>.<p>ಸುಲ್ತಾನ್ ಮಹಮೂದ್ ಬೆಗಡಾ ಅವರು ಮಹಾರಾಷ್ಟ್ರದ ಕರಾವಳಿಯ ಕೊಂಕಣ ತೀರದಲ್ಲಿರುವ ವಸಯೀ– ವಿರಾರ್ ದ್ವೀಪದಲ್ಲಿ 1516ರಲ್ಲಿ ಕಟ್ಟಿಸಿದ ಕೋಟೆಯಲ್ಲಿ ಮೊಘಲರು, ಮರಾಠರು, ಪೋರ್ಚುಗೀಸರು, ಪೇಶ್ವೆಗಳು ಸೇರಿದಂತೆ ಇತರರು ಆಳ್ವಿಕೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಆತ್ಮನಿರ್ಭರ ನೀತಿಯಡಿ ನಿರ್ಮಾಣಗೊಂಡ ‘ಅರ್ಣಾಲಾ’ ಜಲಾಂತರ್ಗಾಮಿಯು ಭಾರತೀಯ ನೌಕಾಪಡೆಗೆ ಬುಧವಾರ ಸೇರ್ಪಡೆಗೊಂಡಿತು.</p>.<p>ಶತ್ರುಗಳ ದಾಳಿಯನ್ನು ತಡೆಗಟ್ಟಬಹುದಾದ ಸಾಮರ್ಥ್ಯ ಹೊಂದಿರುವ ಭಾರತೀಯ ನೌಕಾಪಡೆಯ ಮೊದಲ ಜಲಾಂತರ್ಗಾಮಿ ಇದು. ಶತ್ರು ದೇಶಗಳ ಜಲಾಂತರ್ಗಾಮಿಗಳ ಚಲನವಲನವನ್ನು ಪತ್ತೆ ಹಚ್ಚುವ ಜೊತೆಗೆ ಅವನ್ನು ತಟಸ್ಥಗೊಳಿಸುವ ದಕ್ಷತೆಯನ್ನು ಹೊಂದಿದೆ.</p>.<p>ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಐತಿಹಾಸಿಕ ಕೋಟೆಯ ಹೆಸರನ್ನು ಹೊಂದಿರುವ ಈ ಅತ್ಯಾಧುನಿಕ ಜಲಾಂತರ್ಗಾಮಿಯನ್ನು ಕೋಲ್ಕತ್ತ ಮೂಲದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ ಲಿಮಿಟೆಡ್ (ಜಿಆರ್ಎಸ್ಇ) ನಿರ್ಮಿಸಿದೆ.</p>.<p>ಶತ್ರುಗಳ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಿಗಾಗಿಯೇ ಡೀಸೆಲ್ ಎಂಜಿನ್ ಹಾಗೂ ವಾಟರ್ ಜೆಟ್ನ ಸಂಯೋಜನೆಯೊಂದಿಗೆ ವಿನ್ಯಾಸಗೊಳಿಸಲಾಗಿರುವ ಈ ಯುದ್ಧನೌಕೆಯನ್ನು ವಿಶಾಖಪಟ್ಟಣಂನ ನೌಕಾನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಸಮ್ಮುಖ ನೌಕಾಪಡೆಗೆ ನಿಯೋಜಿಸಲಾಯಿತು.</p>.<p>ಸುಲ್ತಾನ್ ಮಹಮೂದ್ ಬೆಗಡಾ ಅವರು ಮಹಾರಾಷ್ಟ್ರದ ಕರಾವಳಿಯ ಕೊಂಕಣ ತೀರದಲ್ಲಿರುವ ವಸಯೀ– ವಿರಾರ್ ದ್ವೀಪದಲ್ಲಿ 1516ರಲ್ಲಿ ಕಟ್ಟಿಸಿದ ಕೋಟೆಯಲ್ಲಿ ಮೊಘಲರು, ಮರಾಠರು, ಪೋರ್ಚುಗೀಸರು, ಪೇಶ್ವೆಗಳು ಸೇರಿದಂತೆ ಇತರರು ಆಳ್ವಿಕೆ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>