<p><strong>ನವದೆಹಲಿ</strong>: ದೇಶದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೇಲುಸ್ತುವಾರಿ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಮಾನವನ ಹಸ್ತಕ್ಷೇಪವಿಲ್ಲದ ಏಕೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸಿ, ಅವುಗಳ ಮೇಲ್ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.</p>.<p>ಠಾಣೆಗಳಲ್ಲಿ ನಿಷ್ಕ್ರಿಯ ಸಿ.ಸಿ.ಟಿವಿ ಕ್ಯಾಮೆರಾಗಳ ಕುರಿತು ಸೆ.26ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಮೂರ್ತಿ ವಿಕ್ರಮ್ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ನ್ಯಾಯಪೀಠವು ತಿಳಿಸಿದೆ.</p>.<p>‘ಕ್ಯಾಮೆರಾಗಳ ಮೇಲುಸ್ತುವಾರಿಯೇ ಮುಖ್ಯ ವಿಷಯವಾಗಿದೆ’ ಎಂದು ಪೀಠವು ಈ ವೇಳೆ ಅಭಿಪ್ರಾಯಪಟ್ಟಿತು.</p>.<p>‘ಮನುಷ್ಯನ ಹಸ್ತಕ್ಷೇಪವಿಲ್ಲದ ನಿಯಂತ್ರಣ ಕೊಠಡಿ ಕುರಿತು ನಾವು ಯೋಜಿಸುತ್ತಿದ್ದೇವೆ. ಎಲ್ಲ ವಿಡಿಯೊಗಳನ್ನು ನಿಯಂತ್ರಣ ಕೊಠಡಿಗೆ ರವಾನಿಸುವಂತಿರಬೇಕು. ಒಂದೊಮ್ಮೆ ಯಾವುದೇ ಕ್ಯಾಮೆರಾ ಸ್ಥಗಿತಗೊಂಡರೆ, ತಕ್ಷಣವೇ ಎಚ್ಚರಿಸಬೇಕು. ಈ ರೀತಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಉಳಿದಂತೆ ಬೇರೆ ದಾರಿಯಿಲ್ಲ’ ಎಂದು ನ್ಯಾಯಮೂರ್ತಿ ಮೆಹ್ತಾ ತಿಳಿಸಿದರು.</p>.<p>2020ರ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಪ್ರತ್ಯೇಕ ವಿಷಯದಲ್ಲಿ ‘ಅಮಿಕಸ್ ಕ್ಯೂರಿ’ ಆಗಿ ನೇಮಕಗೊಂಡಿದ್ದ ಹಿರಿಯ ವಕೀಲ ಸಿದ್ದಾರ್ಥ ದಾವೆ ಅವರ ವಾದವನ್ನು ನ್ಯಾಯಪೀಠವು ಪರಿಗಣಿಸಿತು. </p>.<p>ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ), ಜಾರಿ ನಿರ್ದೇಶನಾಲಯ (ಇ.ಡಿ) ಕೇಂದ್ರಿಯ ತನಿಖಾ ಸಂಸ್ಥೆ (ಎನ್ಐಎ) ಸೇರಿದಂತೆ ಎಲ್ಲ ತನಿಖಾ ಕಚೇರಿಗಳಲ್ಲಿ ಸಿ.ಸಿ.ಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು, ರೆಕಾರ್ಡಿಂಗ್ ಉಪಕರಣಗಳನ್ನು ಅಳವಡಿಸಬೇಕು ಎಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಆದೇಶದಲ್ಲಿ ತಿಳಿಸಿತ್ತು. ನ್ಯಾಯಾಲಯದ ಸೂಚನೆ ಹೊರತಾಗಿಯೂ ಎನ್ಐಎ, ಇ.ಡಿ., ಸಿಬಿಐ ಸೇರಿದಂತೆ ಮೂರರಿಂದ ನಾಲ್ಕು ಸಂಸ್ಥೆಗಳು ತಮ್ಮ ನಿರ್ದೇಶನ ಪಾಲಿಸಿಲ್ಲ ಎಂದು ಸಿದ್ದಾರ್ಥ ದಾವೆ ಅವರು ನ್ಯಾಯಪೀಠದ ಎದುರು ಬೇಸರ ವ್ಯಕ್ತಪಡಿಸಿದರು.</p>.<p>ರಾಜಸ್ಥಾನದಲ್ಲಿ ಕಳೆದ ಎಂಟು ತಿಂಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 7 ಪ್ರಕರಣಗಳು ಉದಯಪುರದಲ್ಲಿಯೇ ವರದಿಯಾಗಿದೆ ಎಂದು ಮಾಧ್ಯಮಗಳ ವರದಿ ಆಧರಿಸಿ, ಸೆ.4ರಂದು ಸುಪ್ರೀಂಕೋರ್ಟ್, ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡು ಈ ಸೂಚನೆ ನೀಡಿದೆ.</p>.<ul><li><p>ಐಐಟಿಗಳ ನೆರವು ಪಡೆಯಲು ಸಲಹೆ</p></li><li><p>ಸ್ವತಂತ್ರ ಸಂಸ್ಥೆಯಿಂದ ಪ್ರತಿ ಪೊಲೀಸ್ ಠಾಣೆಯಲ್ಲೂ ತಪಾಸಣೆ ನಡೆಸುವಂತಿರಬೇಕು ಎಂದು ತಿಳಿಸಿರುವ ನ್ಯಾಯಪೀಠ, ಈ ಸಮಸ್ಯೆ ಪರಿಹಾರ ಹುಡುಕಲು ಕೆಲವು ಭಾರತೀಯ ತಂತ್ರಜ್ಞಾನ ಸಂಸ್ಥೆಗಳನ್ನು (ಐಐಟಿ) ಒಳಗೊಳ್ಳಲು ನಾವು ಯೋಚಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. </p></li><li><p>ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎ.ಐ) ಆಧರಿಸಿ ನಿರ್ದಿಷ್ಟ ಪ್ರದೇಶದ ಸಿ.ಸಿ.ಟಿವಿ ಕ್ಯಾಮೆರಾಗಳ ವಿಡಿಯೊಗಳ ಮೇಲುಸ್ತುವಾರಿ ವಹಿಸಬಹುದು. ಈ ಮೂಲಕ, ಮನುಷ್ಯರ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳಬಹುದು. </p></li><li><p>ಒಂದೊಮ್ಮೆ ಕ್ಯಾಮೆರಾಗಳು ತಕ್ಷಣವೇ ಸ್ಥಗಿತಗೊಂಡರೆ, ಸಂಬಂಧಿಸಿದ ಕಾನೂನು ಸೇವಾ ಪ್ರಾಧಿಕಾರ ಅಥವಾ ಮೇಲುಸ್ತುವಾರಿ ಸಂಸ್ಥೆಗೆ ಮಾಹಿತಿ ಕಳುಹಿಸುವಂತಿರಬೇಕು‘ ಎಂದು ಹೇಳಿದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ದೇಶದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೇಲುಸ್ತುವಾರಿ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಮಾನವನ ಹಸ್ತಕ್ಷೇಪವಿಲ್ಲದ ಏಕೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸಿ, ಅವುಗಳ ಮೇಲ್ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.</p>.<p>ಠಾಣೆಗಳಲ್ಲಿ ನಿಷ್ಕ್ರಿಯ ಸಿ.ಸಿ.ಟಿವಿ ಕ್ಯಾಮೆರಾಗಳ ಕುರಿತು ಸೆ.26ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಮೂರ್ತಿ ವಿಕ್ರಮ್ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ನ್ಯಾಯಪೀಠವು ತಿಳಿಸಿದೆ.</p>.<p>‘ಕ್ಯಾಮೆರಾಗಳ ಮೇಲುಸ್ತುವಾರಿಯೇ ಮುಖ್ಯ ವಿಷಯವಾಗಿದೆ’ ಎಂದು ಪೀಠವು ಈ ವೇಳೆ ಅಭಿಪ್ರಾಯಪಟ್ಟಿತು.</p>.<p>‘ಮನುಷ್ಯನ ಹಸ್ತಕ್ಷೇಪವಿಲ್ಲದ ನಿಯಂತ್ರಣ ಕೊಠಡಿ ಕುರಿತು ನಾವು ಯೋಜಿಸುತ್ತಿದ್ದೇವೆ. ಎಲ್ಲ ವಿಡಿಯೊಗಳನ್ನು ನಿಯಂತ್ರಣ ಕೊಠಡಿಗೆ ರವಾನಿಸುವಂತಿರಬೇಕು. ಒಂದೊಮ್ಮೆ ಯಾವುದೇ ಕ್ಯಾಮೆರಾ ಸ್ಥಗಿತಗೊಂಡರೆ, ತಕ್ಷಣವೇ ಎಚ್ಚರಿಸಬೇಕು. ಈ ರೀತಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಉಳಿದಂತೆ ಬೇರೆ ದಾರಿಯಿಲ್ಲ’ ಎಂದು ನ್ಯಾಯಮೂರ್ತಿ ಮೆಹ್ತಾ ತಿಳಿಸಿದರು.</p>.<p>2020ರ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಪ್ರತ್ಯೇಕ ವಿಷಯದಲ್ಲಿ ‘ಅಮಿಕಸ್ ಕ್ಯೂರಿ’ ಆಗಿ ನೇಮಕಗೊಂಡಿದ್ದ ಹಿರಿಯ ವಕೀಲ ಸಿದ್ದಾರ್ಥ ದಾವೆ ಅವರ ವಾದವನ್ನು ನ್ಯಾಯಪೀಠವು ಪರಿಗಣಿಸಿತು. </p>.<p>ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ), ಜಾರಿ ನಿರ್ದೇಶನಾಲಯ (ಇ.ಡಿ) ಕೇಂದ್ರಿಯ ತನಿಖಾ ಸಂಸ್ಥೆ (ಎನ್ಐಎ) ಸೇರಿದಂತೆ ಎಲ್ಲ ತನಿಖಾ ಕಚೇರಿಗಳಲ್ಲಿ ಸಿ.ಸಿ.ಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು, ರೆಕಾರ್ಡಿಂಗ್ ಉಪಕರಣಗಳನ್ನು ಅಳವಡಿಸಬೇಕು ಎಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಆದೇಶದಲ್ಲಿ ತಿಳಿಸಿತ್ತು. ನ್ಯಾಯಾಲಯದ ಸೂಚನೆ ಹೊರತಾಗಿಯೂ ಎನ್ಐಎ, ಇ.ಡಿ., ಸಿಬಿಐ ಸೇರಿದಂತೆ ಮೂರರಿಂದ ನಾಲ್ಕು ಸಂಸ್ಥೆಗಳು ತಮ್ಮ ನಿರ್ದೇಶನ ಪಾಲಿಸಿಲ್ಲ ಎಂದು ಸಿದ್ದಾರ್ಥ ದಾವೆ ಅವರು ನ್ಯಾಯಪೀಠದ ಎದುರು ಬೇಸರ ವ್ಯಕ್ತಪಡಿಸಿದರು.</p>.<p>ರಾಜಸ್ಥಾನದಲ್ಲಿ ಕಳೆದ ಎಂಟು ತಿಂಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 7 ಪ್ರಕರಣಗಳು ಉದಯಪುರದಲ್ಲಿಯೇ ವರದಿಯಾಗಿದೆ ಎಂದು ಮಾಧ್ಯಮಗಳ ವರದಿ ಆಧರಿಸಿ, ಸೆ.4ರಂದು ಸುಪ್ರೀಂಕೋರ್ಟ್, ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡು ಈ ಸೂಚನೆ ನೀಡಿದೆ.</p>.<ul><li><p>ಐಐಟಿಗಳ ನೆರವು ಪಡೆಯಲು ಸಲಹೆ</p></li><li><p>ಸ್ವತಂತ್ರ ಸಂಸ್ಥೆಯಿಂದ ಪ್ರತಿ ಪೊಲೀಸ್ ಠಾಣೆಯಲ್ಲೂ ತಪಾಸಣೆ ನಡೆಸುವಂತಿರಬೇಕು ಎಂದು ತಿಳಿಸಿರುವ ನ್ಯಾಯಪೀಠ, ಈ ಸಮಸ್ಯೆ ಪರಿಹಾರ ಹುಡುಕಲು ಕೆಲವು ಭಾರತೀಯ ತಂತ್ರಜ್ಞಾನ ಸಂಸ್ಥೆಗಳನ್ನು (ಐಐಟಿ) ಒಳಗೊಳ್ಳಲು ನಾವು ಯೋಚಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. </p></li><li><p>ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎ.ಐ) ಆಧರಿಸಿ ನಿರ್ದಿಷ್ಟ ಪ್ರದೇಶದ ಸಿ.ಸಿ.ಟಿವಿ ಕ್ಯಾಮೆರಾಗಳ ವಿಡಿಯೊಗಳ ಮೇಲುಸ್ತುವಾರಿ ವಹಿಸಬಹುದು. ಈ ಮೂಲಕ, ಮನುಷ್ಯರ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳಬಹುದು. </p></li><li><p>ಒಂದೊಮ್ಮೆ ಕ್ಯಾಮೆರಾಗಳು ತಕ್ಷಣವೇ ಸ್ಥಗಿತಗೊಂಡರೆ, ಸಂಬಂಧಿಸಿದ ಕಾನೂನು ಸೇವಾ ಪ್ರಾಧಿಕಾರ ಅಥವಾ ಮೇಲುಸ್ತುವಾರಿ ಸಂಸ್ಥೆಗೆ ಮಾಹಿತಿ ಕಳುಹಿಸುವಂತಿರಬೇಕು‘ ಎಂದು ಹೇಳಿದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>