<p><strong>ನವದೆಹಲಿ</strong>: ಎನ್ಸಿಇ ಆರ್ಟಿಯ 8ನೇ ತರಗತಿ ಹೊಸ ಸಮಾಜವಿಜ್ಞಾನ ಪಠ್ಯಪುಸ್ತಕ ದಲ್ಲಿರುವ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯ ಕುರಿತಂತೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.</p><p>‘ಯಾವುದೇ ವ್ಯಕ್ತಿಯು ನ್ಯಾಯಾಂಗದ ಅವಹೇಳನ ಮಾಡುವು ದಕ್ಕೆ ಹಾಗೂ ಅದರ ಸಮಗ್ರತೆಗೆ ಧಕ್ಕೆ<br>ತರುವುದಕ್ಕೆ ನಾವು ಅವಕಾಶ ನೀಡುವು ದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕಟುವಾಗಿ ಹೇಳಿದ್ದಾರೆ.</p><p>ಈ ಬೆಳವಣಿಗೆ ಕುರಿತಂತೆ ಕೇಂದ್ರ ಸರ್ಕಾರ ಆಕ್ರೋಶಗೊಂಡಿದೆ ಎಂದು ಮೂಲಗಳು ಹೇಳಿವೆ.</p><p>ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ತನ್ನ ವೆಬ್ಸೈಟ್ನಿಂದ ಈ ಪುಸ್ತಕವನ್ನು ತೆಗೆದು ಹಾಕಿದೆ. ಜೊತೆಗೆ, ಈಗಾಗಲೇ ಮುದ್ರಣಗೊಂಡಿರುವ ಪಠ್ಯಪುಸ್ತಕ ಗಳಿಂದಲೂ ಈ ವಿವಾದಾತ್ಮಕ ಭಾಗಗಳನ್ನು ತೆಗೆಯಲು ಪರಿಷತ್ತು ಪರಿಗಣಿಸು ತ್ತಿದೆ ಎಂದು ಮೂಲಗಳು ತಿಳಿಸಿವೆ.</p><p>ಅಧ್ಯಾಯ–ಆಕ್ಷೇಪ: ನ್ಯಾಯಾಂಗ ಕುರಿತು ಎನ್ಸಿಇಆರ್ಟಿ ಪಠ್ಯಪುಸ್ತಕದಲ್ಲಿನ ‘ಆಕ್ಷೇಪಾರ್ಹ’ ಮಾಹಿತಿ ಬಗ್ಗೆ ಹಿರಿಯವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ಪ್ರಸ್ತಾಪಿಸಿದ್ದರು. ಈ ವಿಷಯದ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆಯೂ ಕೋರಿದ್ದರು.</p><p>ಇದನ್ನು ಪರಿಗಣಿಸಿದ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಪಂಚೋಲಿ ಅವರು ಇದ್ದ ನ್ಯಾಯಪೀಠ, ವಿಷಯವನ್ನು ವಿಚಾರಣೆಗೆ ಪರಿಗಣಿಸಿದೆ. </p><p>ವಿಚಾರಣೆ ವೇಳೆ,‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತಂತೆ 8ನೇ ತರಗತಿ ಮಕ್ಕಳಿಗೆ ಬೋಧಿಸಲಾಗುತ್ತದೆ ಎಂಬ ವಿಚಾರ ತಿಳಿದು ನಮ್ಮ ಮನಸ್ಸು ಕದಡಿದೆ. ನಾವು ಕೂಡ ನ್ಯಾಯಾಂಗದ ಭಾಗೀ ದಾರರು. ಆದರೆ, ಈ ಪುಸ್ತಕದಲ್ಲಿನ ಅಂಶ ಗಳು ಮಾನಹಾನಿಕರವಾಗಿವೆ’ ಎಂದು ಕಪಿಲ್ ಸಿಬಲ್, ಪೀಠಕ್ಕೆ ತಿಳಿಸಿದರು.</p><p>‘ಈ ವಿಚಾರ ಕುರಿತು, ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುವ ವಿಶ್ವಾಸ ಇದೆ’ ಎಂದು ಸಿಬಲ್ ಹೇಳಿದರು.</p><p>‘ಬೇರೆ ಯಾವ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ಇಲ್ಲ ಎಂದು ಎನ್ಸಿಇಆರ್ಟಿ ಭಾವಿಸಿದಂತಿದೆ. ಅಧಿಕಾರಶಾಹಿ, ರಾಜಕೀಯ, ಸಾರ್ವಜನಿಕ ಜೀವನ ಹಾಗೂ ಇತರ ಸಂಸ್ಥೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಒಂದೇ ಒಂದು ಶಬ್ದ ಕೂಡ ಈ ಅಧ್ಯಾಯದಲ್ಲಿ ಇಲ್ಲ’ ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದರು.</p><p>ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯ ಕಾಂತ್,‘ಈ ವಿಚಾರದ ಸಂಪೂರ್ಣ ಅರಿವು ನಮಗಿದೆ. ಹಲವು ಹೈಕೋರ್ಟ್ಗಳ ನ್ಯಾಯಮೂರ್ತಿಗಳು ಕೂಡ ವಿಚಲಿತರಾಗಿದ್ದಾರೆ. ಹಲವರು ನಮಗೆ ಕರೆ ಮಾಡಿದ್ದಾರೆ, ಸಂದೇಶ ಗಳನ್ನೂ ಕಳುಹಿಸಿದ್ದಾರೆ’ ಎಂದರು.</p><p>‘ಈ ಕುರಿತು ಈಗಾಗಲೇ ನಾನು ಆದೇಶ ಹೊರಡಿಸಿರುವೆ. ಈ ವಿಚಾರ ವನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ಗೊತ್ತು. ಯಾವುದೇ ಕಾರಣಕ್ಕೂ ನ್ಯಾಯಾಂಗದ ಅವಹೇಳನಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.</p>.<div><blockquote>ಇದು ಬಹಳ ಲೆಕ್ಕಾಚಾರ ಹಾಗೂ ದೀರ್ಘ ಆಲೋಚನೆಯಿಂದ ಕೈಗೊಂಡ ಕ್ರಮದಂತೆ ಕಂಡುಬರುತ್ತಿದೆ. ಈ ಕುರಿತು ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ </blockquote><span class="attribution">ಸೂರ್ಯ ಕಾಂತ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ</span></div>.<h2>ಅಧ್ಯಾಯದಲ್ಲಿ ಏನಿದೆ?</h2><p>‘ಭ್ರಷ್ಟಾಚಾರ, ಬಾಕಿ ಇರುವ ಪ್ರಕರಣಗಳು ಹಾಗೂ ಅಗತ್ಯ ಸಂಖ್ಯೆಯಷ್ಟು ನ್ಯಾಯಾಧೀಶರು/ನ್ಯಾಯಮೂರ್ತಿಗಳು ಇಲ್ಲ. ಇವು ದೇಶದ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು’ ಎಂದು ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯದಲ್ಲಿ ವಿವರಿಸಲಾಗಿದೆ.</p><p>‘ನ್ಯಾಯಾಧೀಶರು/ನ್ಯಾಯಮೂರ್ತಿಗಳು ನೀತಿ ಸಂಹಿತೆಯಂತೆಯೇ ನಡೆದುಕೊಳ್ಳಬೇಕು. ಅವರು, ನ್ಯಾಯಾಲಯದ ಒಳಗೆ ಮಾತ್ರವಲ್ಲ, ಹೊರಗಡೆಯೂ ಹೇಗೆ ವರ್ತಿಸಬೇಕು ಎಂಬುದನ್ನು ಈ ಸಂಹಿತೆ ವಿವರಿಸುತ್ತದೆ’ ಎಂದು ಹೇಳಲಾಗಿದೆ.</p><p>‘ಸುಪ್ರೀಂ ಕೋರ್ಟ್ನಲ್ಲಿ 81 ಸಾವಿರ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಹೈಕೋರ್ಟ್ಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 62.40 ಲಕ್ಷ, ಜಿಲ್ಲಾ ಮತ್ತು ಅಧೀನ ಕೋರ್ಟ್ಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 4.70 ಕೋಟಿ’ ಎಂದು ವಿವರಿಸಲಾಗಿದೆ.</p><p>ನ್ಯಾಯಾಂಗದಲ್ಲಿನ ಆಂತರಿಕ ಉತ್ತರದಾಯಿತ್ವದ ಬಗ್ಗೆ ಅಧ್ಯಾಯದಲ್ಲಿ ವಿವರಿಸಲಾಗಿದ್ದು, ಕೇಂದ್ರೀಕೃತ ಸಾರ್ವಜನಿಕ ವ್ಯಾಜ್ಯಗಳ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ(ಸಿಪಿಜಿಆರ್ಎಎಂಎಸ್) ಮೂಲಕ ದೂರುಗಳನ್ನು ಸ್ವೀಕರಿಸಲಾಗುತ್ತದೆ.</p><p>ಈ ವ್ಯವಸ್ಥೆ ಮೂಲಕ, 2017 ಮತ್ತು 2021ರ ಮಧ್ಯೆ 1,600 ದೂರುಗಳನ್ನು ಸಲ್ಲಿಸಲಾಗಿದೆ ಎಂದು ವಿವರಿಸಲಾಗಿದೆ.</p><p>‘ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರ ಮತ್ತು ಅಶಿಸ್ತಿನ ನಡವಳಿಕೆಯ ಘಟನೆಗಳು ಈ ವ್ಯವಸ್ಥೆ ಕುರಿತು ಸಾರ್ವಜನಿಕರು ಹೊಂದಿರುವ ನಂಬಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ’ ಎಂದು ಮಾಜಿ ಸಿಜೆಐ ಬಿ.ಆರ್.ಗವಾಯಿ ಅವರು 2025ರ ಜುಲೈನಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅವರ ಈ ಹೇಳಿಕೆಯನ್ನು ಕೂಡ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ.</p>.<h2>ಸಭೆ ಕರೆದು ಚರ್ಚೆ: ಎನ್ಸಿಇಆರ್ಟಿ</h2><p>ಈ ಬೆಳವಣಿಗೆ ಬೆನ್ನಲ್ಲೇ, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಎನ್ಸಿಇಆರ್ಟಿ ಹೇಳಿದೆ.</p><p>‘ಈ ಅಧ್ಯಾಯ ಸಿದ್ಧಪಡಿಸುವ ವೇಳೆ, ಶಿಫಾರಸುಗಳನ್ನು ಮಾಡಿರುವ ವಿಷಯತಜ್ಞರು ಹಾಗೂ ಅವುಗಳನ್ನು ಅನುಮೋದಿಸಿರುವ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮರುಪರಿಶೀಲನೆ ನಡೆಸಲಾಗುವುದು’ ಎಂದು ಪರಿಷತ್ತು ಹೇಳಿದೆ.</p><p>‘ಈ ವಿಚಾರವಾಗಿ ಎನ್ಸಿಇಆರ್ಟಿ ಅಧ್ಯಕ್ಷ ದಿನೇಶ್ ಪ್ರಸಾದ್ ಸಕ್ಲಾನಿ ಅವರು ಕರೆ ಸ್ವೀಕರಿಸಲಿಲ್ಲ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ’ ಎಂದು ಪಿಟಿಐ ವರದಿ ಮಾಡಿದೆ.</p><p>‘ಈ ವಿಚಾರ ಸದ್ಯ ನ್ಯಾಯಾಲಯದಲ್ಲಿ ಇದೆ. ನ್ಯಾಯಾಂಗ ನಿಂದನೆಯಾಗುವ<br>ಕಾರಣ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಎನ್ಸಿಇಆರ್ಟಿಯ ಉನ್ನತ ಅಧಿಕಾರಿಯೊಬ್ಬರು<br>ಹೇಳಿದ್ದಾರೆ.</p>.<h2>‘ಎನ್ಸಿಇಆರ್ಟಿ ಸ್ವಾಯತ್ತ ಸಂಸ್ಥೆ’</h2><p>‘ಎನ್ಸಿಇಆರ್ಟಿ ಒಂದು ಸ್ವಾಯತ್ತ ಸಂಸ್ಥೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅದರ ಅಧಿಕಾರಿಗಳು ತಮ್ಮ ವಿವೇಚನೆ ಬಳಸಿಯೇ ಈ ಅಧ್ಯಾಯಗಳನ್ನು ಸೇರ್ಪಡೆ ಮಾಡಿರುತ್ತಾರೆ’ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.</p><p>‘ಭ್ರಷ್ಟಾಚಾರ ಕುರಿತ ವಿಚಾರವನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಮಾಡಬೇಕು ಎಂದಾದಲ್ಲಿ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಅದು ಒಳಗೊಂಡಿರಬೇಕಿತ್ತು’ ಎಂದೂ ಹೇಳಿವೆ.</p><p>‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮಾಹಿತಿಯು ಸಂಸತ್ನ ದಾಖಲೆಗಳು ಹಾಗೂ ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ನಲ್ಲಿ ಲಭ್ಯ ಇದೆ. ಪಠ್ಯಪುಸ್ತಕದಲ್ಲಿ ಈ ಅಧ್ಯಾಯ ಸೇರ್ಪಡೆ ಮಾಡುವ ವೇಳೆ, ಕೇಂದ್ರ ಕಾನೂನು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿಯನ್ನು ದೃಢೀಕರಿಸಿಕೊಂಡಿಲ್ಲ’ ಎಂದು ಇವೇ ಮೂಲಗಳು ಹೇಳಿವೆ. ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಕುರಿತಂತೆ ಮಾಜಿ ಸಿಜೆಐ ಬಿ.ಅರ್.ಗವಾಯಿ ಅವರು ಬೇರೆ ಸಂದರ್ಭದಲ್ಲಿ ಹೇಳಿದ್ದ ಮಾತನ್ನು ಈಗ ಪಠ್ಯದಲ್ಲಿ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಗವಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಎನ್ಸಿಇ ಆರ್ಟಿಯ 8ನೇ ತರಗತಿ ಹೊಸ ಸಮಾಜವಿಜ್ಞಾನ ಪಠ್ಯಪುಸ್ತಕ ದಲ್ಲಿರುವ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯ ಕುರಿತಂತೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.</p><p>‘ಯಾವುದೇ ವ್ಯಕ್ತಿಯು ನ್ಯಾಯಾಂಗದ ಅವಹೇಳನ ಮಾಡುವು ದಕ್ಕೆ ಹಾಗೂ ಅದರ ಸಮಗ್ರತೆಗೆ ಧಕ್ಕೆ<br>ತರುವುದಕ್ಕೆ ನಾವು ಅವಕಾಶ ನೀಡುವು ದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕಟುವಾಗಿ ಹೇಳಿದ್ದಾರೆ.</p><p>ಈ ಬೆಳವಣಿಗೆ ಕುರಿತಂತೆ ಕೇಂದ್ರ ಸರ್ಕಾರ ಆಕ್ರೋಶಗೊಂಡಿದೆ ಎಂದು ಮೂಲಗಳು ಹೇಳಿವೆ.</p><p>ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ತನ್ನ ವೆಬ್ಸೈಟ್ನಿಂದ ಈ ಪುಸ್ತಕವನ್ನು ತೆಗೆದು ಹಾಕಿದೆ. ಜೊತೆಗೆ, ಈಗಾಗಲೇ ಮುದ್ರಣಗೊಂಡಿರುವ ಪಠ್ಯಪುಸ್ತಕ ಗಳಿಂದಲೂ ಈ ವಿವಾದಾತ್ಮಕ ಭಾಗಗಳನ್ನು ತೆಗೆಯಲು ಪರಿಷತ್ತು ಪರಿಗಣಿಸು ತ್ತಿದೆ ಎಂದು ಮೂಲಗಳು ತಿಳಿಸಿವೆ.</p><p>ಅಧ್ಯಾಯ–ಆಕ್ಷೇಪ: ನ್ಯಾಯಾಂಗ ಕುರಿತು ಎನ್ಸಿಇಆರ್ಟಿ ಪಠ್ಯಪುಸ್ತಕದಲ್ಲಿನ ‘ಆಕ್ಷೇಪಾರ್ಹ’ ಮಾಹಿತಿ ಬಗ್ಗೆ ಹಿರಿಯವಕೀಲರಾದ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನು ಸಿಂಘ್ವಿ ಪ್ರಸ್ತಾಪಿಸಿದ್ದರು. ಈ ವಿಷಯದ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆಯೂ ಕೋರಿದ್ದರು.</p><p>ಇದನ್ನು ಪರಿಗಣಿಸಿದ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿಪುಲ್ ಪಂಚೋಲಿ ಅವರು ಇದ್ದ ನ್ಯಾಯಪೀಠ, ವಿಷಯವನ್ನು ವಿಚಾರಣೆಗೆ ಪರಿಗಣಿಸಿದೆ. </p><p>ವಿಚಾರಣೆ ವೇಳೆ,‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತಂತೆ 8ನೇ ತರಗತಿ ಮಕ್ಕಳಿಗೆ ಬೋಧಿಸಲಾಗುತ್ತದೆ ಎಂಬ ವಿಚಾರ ತಿಳಿದು ನಮ್ಮ ಮನಸ್ಸು ಕದಡಿದೆ. ನಾವು ಕೂಡ ನ್ಯಾಯಾಂಗದ ಭಾಗೀ ದಾರರು. ಆದರೆ, ಈ ಪುಸ್ತಕದಲ್ಲಿನ ಅಂಶ ಗಳು ಮಾನಹಾನಿಕರವಾಗಿವೆ’ ಎಂದು ಕಪಿಲ್ ಸಿಬಲ್, ಪೀಠಕ್ಕೆ ತಿಳಿಸಿದರು.</p><p>‘ಈ ವಿಚಾರ ಕುರಿತು, ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುವ ವಿಶ್ವಾಸ ಇದೆ’ ಎಂದು ಸಿಬಲ್ ಹೇಳಿದರು.</p><p>‘ಬೇರೆ ಯಾವ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ಇಲ್ಲ ಎಂದು ಎನ್ಸಿಇಆರ್ಟಿ ಭಾವಿಸಿದಂತಿದೆ. ಅಧಿಕಾರಶಾಹಿ, ರಾಜಕೀಯ, ಸಾರ್ವಜನಿಕ ಜೀವನ ಹಾಗೂ ಇತರ ಸಂಸ್ಥೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಒಂದೇ ಒಂದು ಶಬ್ದ ಕೂಡ ಈ ಅಧ್ಯಾಯದಲ್ಲಿ ಇಲ್ಲ’ ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದರು.</p><p>ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯ ಕಾಂತ್,‘ಈ ವಿಚಾರದ ಸಂಪೂರ್ಣ ಅರಿವು ನಮಗಿದೆ. ಹಲವು ಹೈಕೋರ್ಟ್ಗಳ ನ್ಯಾಯಮೂರ್ತಿಗಳು ಕೂಡ ವಿಚಲಿತರಾಗಿದ್ದಾರೆ. ಹಲವರು ನಮಗೆ ಕರೆ ಮಾಡಿದ್ದಾರೆ, ಸಂದೇಶ ಗಳನ್ನೂ ಕಳುಹಿಸಿದ್ದಾರೆ’ ಎಂದರು.</p><p>‘ಈ ಕುರಿತು ಈಗಾಗಲೇ ನಾನು ಆದೇಶ ಹೊರಡಿಸಿರುವೆ. ಈ ವಿಚಾರ ವನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ಗೊತ್ತು. ಯಾವುದೇ ಕಾರಣಕ್ಕೂ ನ್ಯಾಯಾಂಗದ ಅವಹೇಳನಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.</p>.<div><blockquote>ಇದು ಬಹಳ ಲೆಕ್ಕಾಚಾರ ಹಾಗೂ ದೀರ್ಘ ಆಲೋಚನೆಯಿಂದ ಕೈಗೊಂಡ ಕ್ರಮದಂತೆ ಕಂಡುಬರುತ್ತಿದೆ. ಈ ಕುರಿತು ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ </blockquote><span class="attribution">ಸೂರ್ಯ ಕಾಂತ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ</span></div>.<h2>ಅಧ್ಯಾಯದಲ್ಲಿ ಏನಿದೆ?</h2><p>‘ಭ್ರಷ್ಟಾಚಾರ, ಬಾಕಿ ಇರುವ ಪ್ರಕರಣಗಳು ಹಾಗೂ ಅಗತ್ಯ ಸಂಖ್ಯೆಯಷ್ಟು ನ್ಯಾಯಾಧೀಶರು/ನ್ಯಾಯಮೂರ್ತಿಗಳು ಇಲ್ಲ. ಇವು ದೇಶದ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು’ ಎಂದು ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯದಲ್ಲಿ ವಿವರಿಸಲಾಗಿದೆ.</p><p>‘ನ್ಯಾಯಾಧೀಶರು/ನ್ಯಾಯಮೂರ್ತಿಗಳು ನೀತಿ ಸಂಹಿತೆಯಂತೆಯೇ ನಡೆದುಕೊಳ್ಳಬೇಕು. ಅವರು, ನ್ಯಾಯಾಲಯದ ಒಳಗೆ ಮಾತ್ರವಲ್ಲ, ಹೊರಗಡೆಯೂ ಹೇಗೆ ವರ್ತಿಸಬೇಕು ಎಂಬುದನ್ನು ಈ ಸಂಹಿತೆ ವಿವರಿಸುತ್ತದೆ’ ಎಂದು ಹೇಳಲಾಗಿದೆ.</p><p>‘ಸುಪ್ರೀಂ ಕೋರ್ಟ್ನಲ್ಲಿ 81 ಸಾವಿರ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಹೈಕೋರ್ಟ್ಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ 62.40 ಲಕ್ಷ, ಜಿಲ್ಲಾ ಮತ್ತು ಅಧೀನ ಕೋರ್ಟ್ಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 4.70 ಕೋಟಿ’ ಎಂದು ವಿವರಿಸಲಾಗಿದೆ.</p><p>ನ್ಯಾಯಾಂಗದಲ್ಲಿನ ಆಂತರಿಕ ಉತ್ತರದಾಯಿತ್ವದ ಬಗ್ಗೆ ಅಧ್ಯಾಯದಲ್ಲಿ ವಿವರಿಸಲಾಗಿದ್ದು, ಕೇಂದ್ರೀಕೃತ ಸಾರ್ವಜನಿಕ ವ್ಯಾಜ್ಯಗಳ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ(ಸಿಪಿಜಿಆರ್ಎಎಂಎಸ್) ಮೂಲಕ ದೂರುಗಳನ್ನು ಸ್ವೀಕರಿಸಲಾಗುತ್ತದೆ.</p><p>ಈ ವ್ಯವಸ್ಥೆ ಮೂಲಕ, 2017 ಮತ್ತು 2021ರ ಮಧ್ಯೆ 1,600 ದೂರುಗಳನ್ನು ಸಲ್ಲಿಸಲಾಗಿದೆ ಎಂದು ವಿವರಿಸಲಾಗಿದೆ.</p><p>‘ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರ ಮತ್ತು ಅಶಿಸ್ತಿನ ನಡವಳಿಕೆಯ ಘಟನೆಗಳು ಈ ವ್ಯವಸ್ಥೆ ಕುರಿತು ಸಾರ್ವಜನಿಕರು ಹೊಂದಿರುವ ನಂಬಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ’ ಎಂದು ಮಾಜಿ ಸಿಜೆಐ ಬಿ.ಆರ್.ಗವಾಯಿ ಅವರು 2025ರ ಜುಲೈನಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅವರ ಈ ಹೇಳಿಕೆಯನ್ನು ಕೂಡ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ.</p>.<h2>ಸಭೆ ಕರೆದು ಚರ್ಚೆ: ಎನ್ಸಿಇಆರ್ಟಿ</h2><p>ಈ ಬೆಳವಣಿಗೆ ಬೆನ್ನಲ್ಲೇ, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಎನ್ಸಿಇಆರ್ಟಿ ಹೇಳಿದೆ.</p><p>‘ಈ ಅಧ್ಯಾಯ ಸಿದ್ಧಪಡಿಸುವ ವೇಳೆ, ಶಿಫಾರಸುಗಳನ್ನು ಮಾಡಿರುವ ವಿಷಯತಜ್ಞರು ಹಾಗೂ ಅವುಗಳನ್ನು ಅನುಮೋದಿಸಿರುವ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮರುಪರಿಶೀಲನೆ ನಡೆಸಲಾಗುವುದು’ ಎಂದು ಪರಿಷತ್ತು ಹೇಳಿದೆ.</p><p>‘ಈ ವಿಚಾರವಾಗಿ ಎನ್ಸಿಇಆರ್ಟಿ ಅಧ್ಯಕ್ಷ ದಿನೇಶ್ ಪ್ರಸಾದ್ ಸಕ್ಲಾನಿ ಅವರು ಕರೆ ಸ್ವೀಕರಿಸಲಿಲ್ಲ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲಿಲ್ಲ’ ಎಂದು ಪಿಟಿಐ ವರದಿ ಮಾಡಿದೆ.</p><p>‘ಈ ವಿಚಾರ ಸದ್ಯ ನ್ಯಾಯಾಲಯದಲ್ಲಿ ಇದೆ. ನ್ಯಾಯಾಂಗ ನಿಂದನೆಯಾಗುವ<br>ಕಾರಣ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಎನ್ಸಿಇಆರ್ಟಿಯ ಉನ್ನತ ಅಧಿಕಾರಿಯೊಬ್ಬರು<br>ಹೇಳಿದ್ದಾರೆ.</p>.<h2>‘ಎನ್ಸಿಇಆರ್ಟಿ ಸ್ವಾಯತ್ತ ಸಂಸ್ಥೆ’</h2><p>‘ಎನ್ಸಿಇಆರ್ಟಿ ಒಂದು ಸ್ವಾಯತ್ತ ಸಂಸ್ಥೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅದರ ಅಧಿಕಾರಿಗಳು ತಮ್ಮ ವಿವೇಚನೆ ಬಳಸಿಯೇ ಈ ಅಧ್ಯಾಯಗಳನ್ನು ಸೇರ್ಪಡೆ ಮಾಡಿರುತ್ತಾರೆ’ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.</p><p>‘ಭ್ರಷ್ಟಾಚಾರ ಕುರಿತ ವಿಚಾರವನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆ ಮಾಡಬೇಕು ಎಂದಾದಲ್ಲಿ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಅದು ಒಳಗೊಂಡಿರಬೇಕಿತ್ತು’ ಎಂದೂ ಹೇಳಿವೆ.</p><p>‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮಾಹಿತಿಯು ಸಂಸತ್ನ ದಾಖಲೆಗಳು ಹಾಗೂ ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ನಲ್ಲಿ ಲಭ್ಯ ಇದೆ. ಪಠ್ಯಪುಸ್ತಕದಲ್ಲಿ ಈ ಅಧ್ಯಾಯ ಸೇರ್ಪಡೆ ಮಾಡುವ ವೇಳೆ, ಕೇಂದ್ರ ಕಾನೂನು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿಯನ್ನು ದೃಢೀಕರಿಸಿಕೊಂಡಿಲ್ಲ’ ಎಂದು ಇವೇ ಮೂಲಗಳು ಹೇಳಿವೆ. ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಕುರಿತಂತೆ ಮಾಜಿ ಸಿಜೆಐ ಬಿ.ಅರ್.ಗವಾಯಿ ಅವರು ಬೇರೆ ಸಂದರ್ಭದಲ್ಲಿ ಹೇಳಿದ್ದ ಮಾತನ್ನು ಈಗ ಪಠ್ಯದಲ್ಲಿ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಗವಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>