<p><strong>ನವದೆಹಲಿ:</strong> ತನ್ನ ಮುಖ್ಯ ಆವರಣವನ್ನು ಹೆಚ್ಚಿನ ಭದ್ರತಾ ವಲಯವೆಂದು ಘೋಷಿಸಿರುವ ಸುಪ್ರೀಂ ಕೋರ್ಟ್, ಫೋಟೋ ತೆಗೆಯುವುದು, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವುದನ್ನು ನಿರ್ಬಂಧ ವಿಧಿಸಿ ಕ್ರಮ ಕೈಗೊಂಡಿದೆ. </p><p>ಸೆಪ್ಟೆಂಬರ್ 10ರಂದು ಸುತ್ತೋಲೆ ಹೊರಡಿಸಿದ್ದು, ಮಾಧ್ಯಮ ಪ್ರತಿನಿಧಿಗಳು ಸಂದರ್ಶನ ನಡೆಸಲು ಹಾಗೂ ನೇರ ಪ್ರಸಾರಕ್ಕಾಗಿಯೇ ಕಡಿಮೆ ಭದ್ರತಾ ಪ್ರದೇಶವಾಗಿರುವ ನಿರ್ದಿಷ್ಟ ಪ್ರದೇಶವನ್ನು ಗುರುತಿಸಲಾಗಿದೆ.</p><p>‘ಹೆಚ್ಚು ಭದ್ರತಾ ವಲಯವಾಗಿ ಘೋಷಣೆ ಮಾಡಿದ ಜಾಗಗಳಲ್ಲಿ ಛಾಯಾಚಿತ್ರ, ವಿಡಿಯೊ ತೆಗೆಯಲು ಮೊಬೈಲ್, ಕ್ಯಾಮೆರಾ, ಟ್ರೈಪಾಡ್ ಬಳಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಧಿಕೃತ ಬಳಕೆಗೆ ಹೊರತುಪಡಿಸಿ, ವಿಡಿಯೊಗ್ರಾಫಿ, ರೀಲ್ಸ್ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ’ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p><p>‘ಒಂದೊಮ್ಮೆ ಈ ನಿಯಾಮವಳಿಗಳನ್ನು ಅಡ್ವೊಕೇಟ್, ಅರ್ಜಿದಾರ, ಇಂಟರ್ನ್, ಲಾ ಕರ್ಕ್ ಉಲ್ಲಂಘಿಸುವುದು ಕಂಡುಬಂದರೆ, ಬಾರ್ ಅಸೋಸಿಯೇಷನ್, ರಾಜ್ಯ ಬಾರ್ ಕೌನ್ಸಿಲ್ಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಮಾಧ್ಯಮ ಪ್ರತಿನಿಧಿಗಳು ಉಲ್ಲಂಘಿಸಿದರೆ, ಅಂತಹವರಿಗೆ ಒಂದು ತಿಂಗಳ ಹೆಚ್ಚು ಭದ್ರತಾ ವಲಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗುತ್ತದೆ’ ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ತನ್ನ ಮುಖ್ಯ ಆವರಣವನ್ನು ಹೆಚ್ಚಿನ ಭದ್ರತಾ ವಲಯವೆಂದು ಘೋಷಿಸಿರುವ ಸುಪ್ರೀಂ ಕೋರ್ಟ್, ಫೋಟೋ ತೆಗೆಯುವುದು, ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್ ಮಾಡುವುದನ್ನು ನಿರ್ಬಂಧ ವಿಧಿಸಿ ಕ್ರಮ ಕೈಗೊಂಡಿದೆ. </p><p>ಸೆಪ್ಟೆಂಬರ್ 10ರಂದು ಸುತ್ತೋಲೆ ಹೊರಡಿಸಿದ್ದು, ಮಾಧ್ಯಮ ಪ್ರತಿನಿಧಿಗಳು ಸಂದರ್ಶನ ನಡೆಸಲು ಹಾಗೂ ನೇರ ಪ್ರಸಾರಕ್ಕಾಗಿಯೇ ಕಡಿಮೆ ಭದ್ರತಾ ಪ್ರದೇಶವಾಗಿರುವ ನಿರ್ದಿಷ್ಟ ಪ್ರದೇಶವನ್ನು ಗುರುತಿಸಲಾಗಿದೆ.</p><p>‘ಹೆಚ್ಚು ಭದ್ರತಾ ವಲಯವಾಗಿ ಘೋಷಣೆ ಮಾಡಿದ ಜಾಗಗಳಲ್ಲಿ ಛಾಯಾಚಿತ್ರ, ವಿಡಿಯೊ ತೆಗೆಯಲು ಮೊಬೈಲ್, ಕ್ಯಾಮೆರಾ, ಟ್ರೈಪಾಡ್ ಬಳಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಧಿಕೃತ ಬಳಕೆಗೆ ಹೊರತುಪಡಿಸಿ, ವಿಡಿಯೊಗ್ರಾಫಿ, ರೀಲ್ಸ್ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ’ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p><p>‘ಒಂದೊಮ್ಮೆ ಈ ನಿಯಾಮವಳಿಗಳನ್ನು ಅಡ್ವೊಕೇಟ್, ಅರ್ಜಿದಾರ, ಇಂಟರ್ನ್, ಲಾ ಕರ್ಕ್ ಉಲ್ಲಂಘಿಸುವುದು ಕಂಡುಬಂದರೆ, ಬಾರ್ ಅಸೋಸಿಯೇಷನ್, ರಾಜ್ಯ ಬಾರ್ ಕೌನ್ಸಿಲ್ಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಮಾಧ್ಯಮ ಪ್ರತಿನಿಧಿಗಳು ಉಲ್ಲಂಘಿಸಿದರೆ, ಅಂತಹವರಿಗೆ ಒಂದು ತಿಂಗಳ ಹೆಚ್ಚು ಭದ್ರತಾ ವಲಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗುತ್ತದೆ’ ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>