<p class="title"><strong>ನವದೆಹಲಿ</strong>: ‘ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸುವ ಉದ್ದೇಶದಿಂದ ವೈವಾಹಿಕ ಕಾಯ್ದೆಯ ನಿಯಮಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸುವ ಅರ್ಜಿಗಳು ಪ್ರಮುಖವಾಗುತ್ತವೆ’ ಎಂದು ಸುಪ್ರೀಂ ಕೋರ್ಟ್ನ ತ್ರಿಸದಸ್ಯರ ಪೀಠವು ಅಭಿಪ್ರಾಯಪಟ್ಟಿದೆ.</p>.<p class="title">ಈಗಿನ ನಿಯಮಗಳು ಕೋರ್ಟ್ಗೆ ಪ್ರತ್ಯೇಕಗೊಂಡ ಪತಿ ಅಥವಾ ಪತ್ನಿಗೆ ‘ಸಹಜೀವನ ನಡೆಸಲು’ ಹಾಗೂ ‘ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಲು’ ಆದೇಶಿಸುವ ಅಧಿಕಾರವನ್ನು ಕೋರ್ಟ್ಗೆ ನೀಡುತ್ತವೆ ಎಂದು ಪೀಠ ಹೇಳಿದೆ. 10 ದಿನದಲ್ಲಿ ಪ್ರತಿಕ್ರಿಯೆಯನ್ನು ದಾಖಲಿಸಬೇಕು ಎಂದೂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.</p>.<p class="title">ನ್ಯಾಯಮೂರ್ತಿಗಳಾದ ಆರ್.ಎಫ್.ನರಿಮನ್, ಕೆ.ಎಂ.ಜೋಸೆಫ್ ಮತ್ತು ಬಿ.ಆರ್.ಗವಳಿ ಅವರಿದ್ದ ನ್ಯಾಯಪೀಠವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನಿಗದಿಪಡಿಸಿದ್ದು, ಪೂರಕವಾಗಿ ಸಲ್ಲಿಕೆಯಾಗಿದ್ದ ವಿವಿಧ ಮಧ್ಯಂತರ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿತು.</p>.<p class="title">ಗುರುವಾರ ಅಲ್ಪಕಾಲದ ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, ಈ ಸಂಬಂಧ ಲಿಖಿತವಾಗಿ ಹೇಳಿಕೆಯನ್ನು ದಾಖಲಿಸಲು ತಮಗೆ ಸಮಯಾವಕಾಶ ಬೇಕು ಎಂದು ತಿಳಿಸಿದರು.</p>.<p>ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು, ಹಿಂದೂ ವೈವಾಹಿಕ ಕಾಯ್ದೆಯ ಸೆಕ್ಷನ್ 9 ಮತ್ತು ಪೂರಕ ನಿಯಮಗಳಿಗೆ ಅನ್ವಯಿಸುವಂತೆ ಈ ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ, ಕೋರ್ಟ್ ಕಡಿಮೆ ಕಾಲಾವಧಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.</p>.<p>ಮಧ್ಯಂತರ ಅರ್ಜಿಗಳನ್ನು ಪ್ರತಿನಿಧಿಸಿದ್ದ ವಕೀಲ ಶೋಯೆಬ್ ಅಲಂ ಅವರು, ವೈವಾಹಿಕ ಕಾಯ್ದೆಯಷ್ಟೇ ಅಲ್ಲ, ಐಪಿಸಿ ಮತ್ತು ಇತರೆ ಕಾಯ್ದೆಗಳ ಹಲವು ನಿಯಮಗಳು ಪರಿಶೀಲನೆಗೆ ಒಳಪಡಬೇಕು ಎಂದು ಪ್ರತಿಪಾದಿಸಿದರು. ಈ ಎಲ್ಲ ಅರ್ಜಿಗಳನ್ನು ಮುಖ್ಯ ಅರ್ಜಿ ಜೊತೆಗೆ ಸೇರಿಸಿ ಜುಲೈ 22ರಂದು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿತು.</p>.<p>ಹಿಂದೂ ವೈವಾಹಿಕ ಕಾಯ್ದೆಯ ಸೆಕ್ಷನ್ 9 ಮತ್ತು ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 22 ಮತ್ತು ಸಿಪಿಸಿಯ ಕೆಲ ನಿಯಮಗಳನ್ನು ಪ್ರಶ್ನಿಸಿ, ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಒಜಾಸ್ವಾ ಪಾಠಕ್, ಮಯಂಕ್ ಗುಪ್ತಾ ಸುಪ್ರಿಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.</p>.<p>ಪ್ರತ್ಯೇಕಗೊಂಡ ಪತಿ, ಪತ್ನಿಗೆ ಸಹಜೀವನ ನಡೆಸಲು ಆದೇಶಿಸಲು ಕಾಯ್ದೆ ನಿಯಮಗಳು ಕೋರ್ಟ್ಗೆ ಅಧಿಕಾರ ನೀಡುತ್ತವೆ. ವಿಚಾರಣೆಗೆ ನೆರವಾಗಲು ಅಟಾರ್ನಿ ಜನರಲ್ ಅವರಿಗೆ ಹಿಂದೆ ಸುಪ್ರೀಂ ಕೋರ್ಟ್ ಕೇಳಿತ್ತು. ವಿಚಾರಣೆಯನ್ನು ಕೋರ್ಟ್ ಮಾರ್ಚ್ 5, 2019ರಂದು ತ್ರಿಸದಸ್ಯರ ಪೀಠಕ್ಕೆ ಒಪ್ಪಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ‘ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸುವ ಉದ್ದೇಶದಿಂದ ವೈವಾಹಿಕ ಕಾಯ್ದೆಯ ನಿಯಮಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸುವ ಅರ್ಜಿಗಳು ಪ್ರಮುಖವಾಗುತ್ತವೆ’ ಎಂದು ಸುಪ್ರೀಂ ಕೋರ್ಟ್ನ ತ್ರಿಸದಸ್ಯರ ಪೀಠವು ಅಭಿಪ್ರಾಯಪಟ್ಟಿದೆ.</p>.<p class="title">ಈಗಿನ ನಿಯಮಗಳು ಕೋರ್ಟ್ಗೆ ಪ್ರತ್ಯೇಕಗೊಂಡ ಪತಿ ಅಥವಾ ಪತ್ನಿಗೆ ‘ಸಹಜೀವನ ನಡೆಸಲು’ ಹಾಗೂ ‘ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಲು’ ಆದೇಶಿಸುವ ಅಧಿಕಾರವನ್ನು ಕೋರ್ಟ್ಗೆ ನೀಡುತ್ತವೆ ಎಂದು ಪೀಠ ಹೇಳಿದೆ. 10 ದಿನದಲ್ಲಿ ಪ್ರತಿಕ್ರಿಯೆಯನ್ನು ದಾಖಲಿಸಬೇಕು ಎಂದೂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.</p>.<p class="title">ನ್ಯಾಯಮೂರ್ತಿಗಳಾದ ಆರ್.ಎಫ್.ನರಿಮನ್, ಕೆ.ಎಂ.ಜೋಸೆಫ್ ಮತ್ತು ಬಿ.ಆರ್.ಗವಳಿ ಅವರಿದ್ದ ನ್ಯಾಯಪೀಠವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ನಿಗದಿಪಡಿಸಿದ್ದು, ಪೂರಕವಾಗಿ ಸಲ್ಲಿಕೆಯಾಗಿದ್ದ ವಿವಿಧ ಮಧ್ಯಂತರ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿತು.</p>.<p class="title">ಗುರುವಾರ ಅಲ್ಪಕಾಲದ ವಿಚಾರಣೆಯ ಸಂದರ್ಭದಲ್ಲಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, ಈ ಸಂಬಂಧ ಲಿಖಿತವಾಗಿ ಹೇಳಿಕೆಯನ್ನು ದಾಖಲಿಸಲು ತಮಗೆ ಸಮಯಾವಕಾಶ ಬೇಕು ಎಂದು ತಿಳಿಸಿದರು.</p>.<p>ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು, ಹಿಂದೂ ವೈವಾಹಿಕ ಕಾಯ್ದೆಯ ಸೆಕ್ಷನ್ 9 ಮತ್ತು ಪೂರಕ ನಿಯಮಗಳಿಗೆ ಅನ್ವಯಿಸುವಂತೆ ಈ ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ, ಕೋರ್ಟ್ ಕಡಿಮೆ ಕಾಲಾವಧಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.</p>.<p>ಮಧ್ಯಂತರ ಅರ್ಜಿಗಳನ್ನು ಪ್ರತಿನಿಧಿಸಿದ್ದ ವಕೀಲ ಶೋಯೆಬ್ ಅಲಂ ಅವರು, ವೈವಾಹಿಕ ಕಾಯ್ದೆಯಷ್ಟೇ ಅಲ್ಲ, ಐಪಿಸಿ ಮತ್ತು ಇತರೆ ಕಾಯ್ದೆಗಳ ಹಲವು ನಿಯಮಗಳು ಪರಿಶೀಲನೆಗೆ ಒಳಪಡಬೇಕು ಎಂದು ಪ್ರತಿಪಾದಿಸಿದರು. ಈ ಎಲ್ಲ ಅರ್ಜಿಗಳನ್ನು ಮುಖ್ಯ ಅರ್ಜಿ ಜೊತೆಗೆ ಸೇರಿಸಿ ಜುಲೈ 22ರಂದು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿತು.</p>.<p>ಹಿಂದೂ ವೈವಾಹಿಕ ಕಾಯ್ದೆಯ ಸೆಕ್ಷನ್ 9 ಮತ್ತು ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 22 ಮತ್ತು ಸಿಪಿಸಿಯ ಕೆಲ ನಿಯಮಗಳನ್ನು ಪ್ರಶ್ನಿಸಿ, ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಒಜಾಸ್ವಾ ಪಾಠಕ್, ಮಯಂಕ್ ಗುಪ್ತಾ ಸುಪ್ರಿಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.</p>.<p>ಪ್ರತ್ಯೇಕಗೊಂಡ ಪತಿ, ಪತ್ನಿಗೆ ಸಹಜೀವನ ನಡೆಸಲು ಆದೇಶಿಸಲು ಕಾಯ್ದೆ ನಿಯಮಗಳು ಕೋರ್ಟ್ಗೆ ಅಧಿಕಾರ ನೀಡುತ್ತವೆ. ವಿಚಾರಣೆಗೆ ನೆರವಾಗಲು ಅಟಾರ್ನಿ ಜನರಲ್ ಅವರಿಗೆ ಹಿಂದೆ ಸುಪ್ರೀಂ ಕೋರ್ಟ್ ಕೇಳಿತ್ತು. ವಿಚಾರಣೆಯನ್ನು ಕೋರ್ಟ್ ಮಾರ್ಚ್ 5, 2019ರಂದು ತ್ರಿಸದಸ್ಯರ ಪೀಠಕ್ಕೆ ಒಪ್ಪಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>