ಇಲ್ಲಿನ ನ್ಯಾಯಬೆಲೆ ಅಂಗಡಿಯೊಂದರಲ್ಲಿ ಉಡುಗೊರೆಗಳನ್ನು ವಿತರಿಸಿದ ಸ್ಟಾಲಿನ್, ಫಲಾನುಭವಿಗಳಿಗೆ ಉಚಿತವಾಗಿ ಧೋತಿ ಹಾಗೂ ಸೀರೆಯನ್ನೂ ನೀಡಿದರು.
2.19 ಕೋಟಿ ಪಡಿತರ ಕಾರ್ಡುದಾರರಿಗೆ ಹಾಗೂ ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ಈ ಉಡುಗೊರೆ ವಿತರಿಸಲಾಗುತ್ತಿದೆ. ಸುಮಾರು ₹ 2,436.19 ಕೋಟಿ ವೆಚ್ಚದ ಕಾರ್ಯಕ್ರಮ ಇದಾಗಿದೆ.
ಇದೇ ವೇಳೆ ಬಡ ಹಾಗೂ ಸಾಮಾನ್ಯ ವರ್ಗದ ಜನರಿಗೆ 1.77 ಕೋಟಿ ಧೋತಿ ಹಾಗೂ ಅಷ್ಟೇ ಸಂಖ್ಯೆ ಸೀರೆಗಳನ್ನು ವಿತರಿಸಲಾಗಿದೆ. ಇದರಿಂದ ಕೈಮಗ್ಗ ಹಾಗೂ ಪವರ್ಲೂಮ್ ವಲಯಕ್ಕೆ ಉದ್ಯೋಗ ಸೃಷ್ಟಿಯೂ ಆಗಿದೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.