<p><strong>ಹೈದರಾಬಾದ್:</strong> ಕರ್ನೂಲು ಬಸ್ ದುರಂತದ ನಂತರ ಎಚ್ಚೆತ್ತಿರುವ ತೆಲಂಗಾಣ ಸಾರಿಗೆ ಅಧಿಕಾರಿಗಳು ಟ್ರಾಫಿಕ್ ನಿಯಮ ಉಲ್ಲಂಘಿಸಿರುವ ಖಾಸಗಿ ಬಸ್ಗಳ ಮೇಲೆ ಶನಿವಾರ ಕ್ರಮ ಕೈಗೊಂಡಿದ್ದಾರೆ. </p><p>ಆಂಧ್ರಪ್ರದೇಶದ ಕರ್ನೂಲು ಬಳಿ ಸಂಭವಿಸಿದ ಖಾಸಗಿ ಬಸ್ ಬೆಂಕಿಗೆ ತುತ್ತಾಗಿತ್ತು. ದುರಂತದಲ್ಲಿ 20 ಜನರು ಮೃತಪಟ್ಟಿದ್ದರು. </p><p>ಶನಿವಾರ ಬೆಳಿಗ್ಗೆ ಹೈದರಾಬಾದ್ಗೆ ಆಗಮಿಸುವ ಖಾಸಗಿ ಬಸ್ಗಳನ್ನು 54 ಚೆಕ್ ಪೋಸ್ಟ್ಗಳ ಮೂಲಕ ತಪಾಸಣೆ ನಡೆಸಲಾಗಿದೆ. ಪ್ರತಿದಿನ 500ಕ್ಕೂ ಅಧಿಕ ಅಂತರರಾಜ್ಯ ಖಾಸಗಿ ಬಸ್ಗಳು ನಗರದ ಮೂಲಕ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಸಾರಿಗೆ ನಿಯಮಗಳ ಉಲ್ಲಂಘನೆ, ತೆರಿಗೆ ಪಾವತಿ, ಅಗ್ನಿಶಾಮಕ ವ್ಯವಸ್ಥೆಯಿಲ್ಲದ ಖಾಸಗಿ ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.</p><p>ಖಾಸಗಿ ಬಸ್ಗಳು ಸಂಚಾರ ಯೋಗ್ಯ ಸ್ಥಿತಿಯಲ್ಲಿ ಇರದಿದ್ದರೆ, ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ, ಅತಿವೇಗವಾಗಿ ಸಂಚರಿಸಿದರೆ ಅದರ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೆಲಂಗಾಣ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಕರ್ನೂಲು ಬಸ್ ದುರಂತದ ನಂತರ ಎಚ್ಚೆತ್ತಿರುವ ತೆಲಂಗಾಣ ಸಾರಿಗೆ ಅಧಿಕಾರಿಗಳು ಟ್ರಾಫಿಕ್ ನಿಯಮ ಉಲ್ಲಂಘಿಸಿರುವ ಖಾಸಗಿ ಬಸ್ಗಳ ಮೇಲೆ ಶನಿವಾರ ಕ್ರಮ ಕೈಗೊಂಡಿದ್ದಾರೆ. </p><p>ಆಂಧ್ರಪ್ರದೇಶದ ಕರ್ನೂಲು ಬಳಿ ಸಂಭವಿಸಿದ ಖಾಸಗಿ ಬಸ್ ಬೆಂಕಿಗೆ ತುತ್ತಾಗಿತ್ತು. ದುರಂತದಲ್ಲಿ 20 ಜನರು ಮೃತಪಟ್ಟಿದ್ದರು. </p><p>ಶನಿವಾರ ಬೆಳಿಗ್ಗೆ ಹೈದರಾಬಾದ್ಗೆ ಆಗಮಿಸುವ ಖಾಸಗಿ ಬಸ್ಗಳನ್ನು 54 ಚೆಕ್ ಪೋಸ್ಟ್ಗಳ ಮೂಲಕ ತಪಾಸಣೆ ನಡೆಸಲಾಗಿದೆ. ಪ್ರತಿದಿನ 500ಕ್ಕೂ ಅಧಿಕ ಅಂತರರಾಜ್ಯ ಖಾಸಗಿ ಬಸ್ಗಳು ನಗರದ ಮೂಲಕ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಸಾರಿಗೆ ನಿಯಮಗಳ ಉಲ್ಲಂಘನೆ, ತೆರಿಗೆ ಪಾವತಿ, ಅಗ್ನಿಶಾಮಕ ವ್ಯವಸ್ಥೆಯಿಲ್ಲದ ಖಾಸಗಿ ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.</p><p>ಖಾಸಗಿ ಬಸ್ಗಳು ಸಂಚಾರ ಯೋಗ್ಯ ಸ್ಥಿತಿಯಲ್ಲಿ ಇರದಿದ್ದರೆ, ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ, ಅತಿವೇಗವಾಗಿ ಸಂಚರಿಸಿದರೆ ಅದರ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೆಲಂಗಾಣ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>