<p><strong>ಠಾಣೆ</strong> : ಸಾಧುಗಳ ವೇಷ ಧರಿಸಿದ್ದ ಐವರು, ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ. </p>.<p>ಆರೋಪಿಗಳಲ್ಲಿ ಒಬ್ಬ, ಭೀವಂಡಿ ನಿವಾಸಿಯಾಗಿರುವ ದೂರುದಾರರನ್ನು ಅವರ ಅಂಗಡಿಯ ಬಳಿ ಭೇಟಿಯಾಗಿ ನಿಮಗೆ ತೊಂದರೆಗಳಿವೆಯೇ ಎಂದು ಪ್ರಶ್ನಿಸಿದ್ದ. ಬಳಿಕ ಸಹಾಯ ಮಾಡುವುದಾಗಿ ತಿಳಿಸಿ, ಆಗಸ್ಟ್ 2ರಂದು ದೇವಸ್ಥಾನವೊಂದಕ್ಕೆ ಬರುವಂತೆ ಹೇಳಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. </p>.<p>‘ದೂರುದಾರರು ದೇವಸ್ಥಾನಕ್ಕೆ ಹೋದ ವೇಳೆ, ಪೂಜೆ ಮಾಡುವಂತೆ ಹೇಳಿದ್ದರು. ಅವರು ಪೂಜೆಯಲ್ಲಿ ನಿರತರಾಗಿರುವಾಗ ಆರೋಪಿಗಳು ₹50 ಸಾವಿರ ಮೌಲ್ಯದ ಚಿನ್ನದ ಉಂಗುರವನ್ನು ಕಳವು ಮಾಡಿದ್ದಾರೆ. ಇದರೊಂದಿಗೆ ಪೂಜೆಯ ಖರ್ಚು ಎಂದು ₹20 ಸಾವಿರ ಹಣ ಪಡೆದುಕೊಂಡಿದ್ದಾರೆ. ಮರುದಿನ ದೂರುದಾರರಿಗೆ ಕರೆ ಮಾಡಿದ್ದ ಆರೋಪಿಗಳು ಇನ್ನೊಂದು ಪೂಜೆಗಾಗಿ ₹75 ಸಾವಿರ ನೀಡುವಂತೆ ತಿಳಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ವಂಚನೆಯ ಬಗ್ಗೆ ಅರಿವಾಗುತ್ತಿದ್ದಂತೆ ಸಂತ್ರಸ್ತರು ಪೊಲೀಸರ ಮೊರೆಹೋಗಿದ್ದಾರೆ. ಗುಜರಾತ್ ಮೂಲದ ಒಬ್ಬ ವ್ಯಕ್ತಿ ಮತ್ತು ನಾಲ್ವರು ಅಪರಿಚಿತರ ವಿರುದ್ಧ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಠಾಣೆ</strong> : ಸಾಧುಗಳ ವೇಷ ಧರಿಸಿದ್ದ ಐವರು, ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಘಟನೆ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ. </p>.<p>ಆರೋಪಿಗಳಲ್ಲಿ ಒಬ್ಬ, ಭೀವಂಡಿ ನಿವಾಸಿಯಾಗಿರುವ ದೂರುದಾರರನ್ನು ಅವರ ಅಂಗಡಿಯ ಬಳಿ ಭೇಟಿಯಾಗಿ ನಿಮಗೆ ತೊಂದರೆಗಳಿವೆಯೇ ಎಂದು ಪ್ರಶ್ನಿಸಿದ್ದ. ಬಳಿಕ ಸಹಾಯ ಮಾಡುವುದಾಗಿ ತಿಳಿಸಿ, ಆಗಸ್ಟ್ 2ರಂದು ದೇವಸ್ಥಾನವೊಂದಕ್ಕೆ ಬರುವಂತೆ ಹೇಳಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. </p>.<p>‘ದೂರುದಾರರು ದೇವಸ್ಥಾನಕ್ಕೆ ಹೋದ ವೇಳೆ, ಪೂಜೆ ಮಾಡುವಂತೆ ಹೇಳಿದ್ದರು. ಅವರು ಪೂಜೆಯಲ್ಲಿ ನಿರತರಾಗಿರುವಾಗ ಆರೋಪಿಗಳು ₹50 ಸಾವಿರ ಮೌಲ್ಯದ ಚಿನ್ನದ ಉಂಗುರವನ್ನು ಕಳವು ಮಾಡಿದ್ದಾರೆ. ಇದರೊಂದಿಗೆ ಪೂಜೆಯ ಖರ್ಚು ಎಂದು ₹20 ಸಾವಿರ ಹಣ ಪಡೆದುಕೊಂಡಿದ್ದಾರೆ. ಮರುದಿನ ದೂರುದಾರರಿಗೆ ಕರೆ ಮಾಡಿದ್ದ ಆರೋಪಿಗಳು ಇನ್ನೊಂದು ಪೂಜೆಗಾಗಿ ₹75 ಸಾವಿರ ನೀಡುವಂತೆ ತಿಳಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ವಂಚನೆಯ ಬಗ್ಗೆ ಅರಿವಾಗುತ್ತಿದ್ದಂತೆ ಸಂತ್ರಸ್ತರು ಪೊಲೀಸರ ಮೊರೆಹೋಗಿದ್ದಾರೆ. ಗುಜರಾತ್ ಮೂಲದ ಒಬ್ಬ ವ್ಯಕ್ತಿ ಮತ್ತು ನಾಲ್ವರು ಅಪರಿಚಿತರ ವಿರುದ್ಧ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>