<p><strong>ಹೈದರಾಬಾದ್: </strong>‘ಕಾಂಗ್ರೆಸ್ನಲ್ಲಿ ಜಿ-23 ಎಂಬ ಗುಂಪು ಇಲ್ಲ. ಇದು ಮಾಧ್ಯಮಗಳ ಕಲ್ಪನೆಯಷ್ಟೇ’ ಎಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಶಶಿ ತರೂರ್ ಸೋಮವಾರ ಹೇಳಿದ್ದಾರೆ.</p>.<p>ಹೈದರಾಬಾದ್ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ತರೂರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. </p>.<p>‘ಒಂದೆರಡು ಹಿರಿಯ ನಾಯಕರು ಪತ್ರ ಬರೆದಿದ್ದರು. ಹೆಚ್ಚಿನವರಿಂದ ಅವರು ಬೆಂಬಲ ಕೇಳಿದ್ದರು. 2020 ರಲ್ಲಿ ಕೋವಿಡ್ ಕಾರಣದಿಂದ ಲಾಕ್ಡೌನ್ ಆನ್ ಆಗಿತ್ತು. ಆ ಸಮಯದಲ್ಲಿ ಪತ್ರಕ್ಕೆ ಸಹಿ ಹಾಕಲು ದೆಹಲಿಯಲ್ಲಿ ಕೇವಲ 23 ನಾಯಕರು ಮಾತ್ರವೇ ಇದ್ದರು’ ಎಂದು ಅವರು ಹೇಳಿದ್ದಾರೆ.</p>.<p>ಪಕ್ಷದಲ್ಲಿ ವ್ಯಾಪಕ ಸುಧಾರಣೆ ಬಯಸಿದ್ದ ಜಿ -23 ನಾಯಕರು ಸೋನಿಯಾ ಗಾಂಧಿ ಅವರಿಗೆ 2020ರ ಆಗಸ್ಟ್ನಲ್ಲಿ ಪತ್ರ ಬರೆದಿದ್ದರು. ಈ ಗುಂಪಿನಲ್ಲಿ ಶಶಿ ತರೂರ್ ಅವರೂ ಇದ್ದರು.</p>.<p>ಇದೇ ವಿಚಾರವಾಗಿ ಭಾನುವಾರ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ‘ಈಗ ಜಿ 23 ಬಣವಿಲ್ಲ. ಎಲ್ಲಾ ನಾಯಕರು (ಜಿ 23) ಬಿಜೆಪಿ-ಆರ್ಎಸ್ಎಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಒಟ್ಟಾಗಿ ಕೆಲಸ ಮಾಡಲು ಬಯಸುತ್ತಾರೆ. ಇದೇ ಕಾರಣಕ್ಕೆ ನನ್ನನ್ನು ಬೆಂಬಲಿಸುತ್ತಿದ್ದಾರೆ’ ಎಂದು ಹೇಳಿದ್ದರು.</p>.<p><strong>ಇವುಗಳನ್ನೂ ಓದಿ</strong></p>.<p><a href="https://www.prajavani.net/india-news/aicc-president-election-congress-politics-mallikarjun-kharge-shashi-tharoor-rahul-gandhi-sonia-977033.html" itemprop="url">ಮಲ್ಲಿಕಾರ್ಜುನ ಖರ್ಗೆ ಅವರಿಂದ ಬದಲಾವಣೆ ತರಲು ಸಾಧ್ಯವಿಲ್ಲ: ಶಶಿ ತರೂರ್ </a></p>.<p><a href="https://www.prajavani.net/india-news/congress-president-election-mallikarjun-kharge-may-elect-976700.html" itemprop="url">ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ಗೆಲುವು ಖಚಿತ? </a></p>.<p><a href="https://www.prajavani.net/india-news/rajasthan-chief-minister-ashok-gehlot-to-not-contest-congress-presidential-poll-976170.html" itemprop="url">ಸೋನಿಯಾ ಬಳಿ ಕ್ಷಮೆ ಕೋರಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಿಂದ ಹೊರನಡೆದ ಗೆಹಲೋತ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>‘ಕಾಂಗ್ರೆಸ್ನಲ್ಲಿ ಜಿ-23 ಎಂಬ ಗುಂಪು ಇಲ್ಲ. ಇದು ಮಾಧ್ಯಮಗಳ ಕಲ್ಪನೆಯಷ್ಟೇ’ ಎಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಶಶಿ ತರೂರ್ ಸೋಮವಾರ ಹೇಳಿದ್ದಾರೆ.</p>.<p>ಹೈದರಾಬಾದ್ನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ತರೂರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. </p>.<p>‘ಒಂದೆರಡು ಹಿರಿಯ ನಾಯಕರು ಪತ್ರ ಬರೆದಿದ್ದರು. ಹೆಚ್ಚಿನವರಿಂದ ಅವರು ಬೆಂಬಲ ಕೇಳಿದ್ದರು. 2020 ರಲ್ಲಿ ಕೋವಿಡ್ ಕಾರಣದಿಂದ ಲಾಕ್ಡೌನ್ ಆನ್ ಆಗಿತ್ತು. ಆ ಸಮಯದಲ್ಲಿ ಪತ್ರಕ್ಕೆ ಸಹಿ ಹಾಕಲು ದೆಹಲಿಯಲ್ಲಿ ಕೇವಲ 23 ನಾಯಕರು ಮಾತ್ರವೇ ಇದ್ದರು’ ಎಂದು ಅವರು ಹೇಳಿದ್ದಾರೆ.</p>.<p>ಪಕ್ಷದಲ್ಲಿ ವ್ಯಾಪಕ ಸುಧಾರಣೆ ಬಯಸಿದ್ದ ಜಿ -23 ನಾಯಕರು ಸೋನಿಯಾ ಗಾಂಧಿ ಅವರಿಗೆ 2020ರ ಆಗಸ್ಟ್ನಲ್ಲಿ ಪತ್ರ ಬರೆದಿದ್ದರು. ಈ ಗುಂಪಿನಲ್ಲಿ ಶಶಿ ತರೂರ್ ಅವರೂ ಇದ್ದರು.</p>.<p>ಇದೇ ವಿಚಾರವಾಗಿ ಭಾನುವಾರ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ‘ಈಗ ಜಿ 23 ಬಣವಿಲ್ಲ. ಎಲ್ಲಾ ನಾಯಕರು (ಜಿ 23) ಬಿಜೆಪಿ-ಆರ್ಎಸ್ಎಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಒಟ್ಟಾಗಿ ಕೆಲಸ ಮಾಡಲು ಬಯಸುತ್ತಾರೆ. ಇದೇ ಕಾರಣಕ್ಕೆ ನನ್ನನ್ನು ಬೆಂಬಲಿಸುತ್ತಿದ್ದಾರೆ’ ಎಂದು ಹೇಳಿದ್ದರು.</p>.<p><strong>ಇವುಗಳನ್ನೂ ಓದಿ</strong></p>.<p><a href="https://www.prajavani.net/india-news/aicc-president-election-congress-politics-mallikarjun-kharge-shashi-tharoor-rahul-gandhi-sonia-977033.html" itemprop="url">ಮಲ್ಲಿಕಾರ್ಜುನ ಖರ್ಗೆ ಅವರಿಂದ ಬದಲಾವಣೆ ತರಲು ಸಾಧ್ಯವಿಲ್ಲ: ಶಶಿ ತರೂರ್ </a></p>.<p><a href="https://www.prajavani.net/india-news/congress-president-election-mallikarjun-kharge-may-elect-976700.html" itemprop="url">ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ಗೆಲುವು ಖಚಿತ? </a></p>.<p><a href="https://www.prajavani.net/india-news/rajasthan-chief-minister-ashok-gehlot-to-not-contest-congress-presidential-poll-976170.html" itemprop="url">ಸೋನಿಯಾ ಬಳಿ ಕ್ಷಮೆ ಕೋರಿ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಿಂದ ಹೊರನಡೆದ ಗೆಹಲೋತ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>