<p><strong>ತಿರುವನಂತಪುರ:</strong> ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯು ತಿರುವನಂತಪುರ ಪಾಲಿಕೆಯನ್ನು ಗೆದ್ದುಕೊಂಡಿತ್ತು. ‘ಇದೊಂದು ಅಭೂತಪೂರ್ವ ಗೆಲುವು’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೇಯರ್ ವಿ.ವಿ. ರಾಜೇಶ್ ಅವರಿಗೆ ಡಿ.30ರಂದು ಪತ್ರ ಬರೆದಿದ್ದಾರೆ.</p>.<p>ರಾಜೇಶ್ ಮತ್ತು ಪಕ್ಷದ ಕಾರ್ಯಕರ್ತರ, ಮುಖಂಡರ ಶ್ರಮವನ್ನು ಕೊಂಡಾಡಿರುವ ಪ್ರಧಾನಿ ಮೋದಿ, ‘ಯುವಕರು ಮತ್ತು ಮಹಿಳೆಯರು ಹೊಸ ಬೆಳಗನ್ನು ನೋಡಲು ಸಿದ್ಧರಾಗಿದ್ದಾರೆ ಎನ್ನುವುದಕ್ಕೆ ಈ ಗೆಲುವೇ ಸಾಕ್ಷಿ’ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.</p>.<p>‘ದೆಹಲಿಯಲ್ಲಿ ಸ್ನೇಹಿತರು;ಕೇರಳದಲ್ಲಿ ವಿರೋಧಿಗಳು ಎಂಬ ಎಲ್ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ‘ಮ್ಯಾಚ್ಫಿಕ್ಸಿಂಗ್’ ಅಂತ್ಯವಾಗಲಿದೆ. ಈ ಪಕ್ಷಗಳ ಟೊಳ್ಳು ಭರವಸೆಗಳಿಂದ ಹೊರಬರಲು ಕೇರಳ ಬಯಸುತ್ತಿದೆ. ಇವರು ಭ್ರಷ್ಟಾಚಾರ, ಅತೀವ ಹಿಂಸೆಯ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಇದು ಕೇರಳದ ನೈತಿಕತೆಗೆ ವಿರುದ್ಧವಾದುದು. ಈ ಎಲ್ಲದರ ಮಧ್ಯೆಯೂ ನಮ್ಮ ಕಾರ್ಯಕರ್ತರು ದೃಢವಾಗಿ ನಿಂತುಕೊಂಡರು’ ಎಂದಿದ್ದಾರೆ.</p>.<p>‘ತಿರುವನಂತಪುರವು ಶ್ರೀ ಪದ್ಮನಾಭಸ್ವಾಮಿಯ ಸಾನಿಧ್ಯವನ್ನು ಹೊಂದಿದೆ. ಈ ನಗರವು ಹಲವು ರಾಜಕೀಯ ನಾಯಕರನ್ನು, ಸಾಮಾಜ ಸುಧಾರಕರನ್ನು, ಕಲಾವಿದರನ್ನು, ಸಂಗೀತಗಾರರನ್ನು, ಕವಿಗಳನ್ನು, ಸಂತರನ್ನು ಪೋಷಿಸಿಕೊಂಡು ಬಂದಿದೆ. ಇಂಥ ನಗರವೊಂದು ನಮ್ಮ ಪಕ್ಷವನ್ನು ಆಶೀರ್ವದಿಸಿದೆ. ಇದು ನಮ್ಮನ್ನು ವಿನೀತರನ್ನಾಗಿಸಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯು ತಿರುವನಂತಪುರ ಪಾಲಿಕೆಯನ್ನು ಗೆದ್ದುಕೊಂಡಿತ್ತು. ‘ಇದೊಂದು ಅಭೂತಪೂರ್ವ ಗೆಲುವು’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೇಯರ್ ವಿ.ವಿ. ರಾಜೇಶ್ ಅವರಿಗೆ ಡಿ.30ರಂದು ಪತ್ರ ಬರೆದಿದ್ದಾರೆ.</p>.<p>ರಾಜೇಶ್ ಮತ್ತು ಪಕ್ಷದ ಕಾರ್ಯಕರ್ತರ, ಮುಖಂಡರ ಶ್ರಮವನ್ನು ಕೊಂಡಾಡಿರುವ ಪ್ರಧಾನಿ ಮೋದಿ, ‘ಯುವಕರು ಮತ್ತು ಮಹಿಳೆಯರು ಹೊಸ ಬೆಳಗನ್ನು ನೋಡಲು ಸಿದ್ಧರಾಗಿದ್ದಾರೆ ಎನ್ನುವುದಕ್ಕೆ ಈ ಗೆಲುವೇ ಸಾಕ್ಷಿ’ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.</p>.<p>‘ದೆಹಲಿಯಲ್ಲಿ ಸ್ನೇಹಿತರು;ಕೇರಳದಲ್ಲಿ ವಿರೋಧಿಗಳು ಎಂಬ ಎಲ್ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ‘ಮ್ಯಾಚ್ಫಿಕ್ಸಿಂಗ್’ ಅಂತ್ಯವಾಗಲಿದೆ. ಈ ಪಕ್ಷಗಳ ಟೊಳ್ಳು ಭರವಸೆಗಳಿಂದ ಹೊರಬರಲು ಕೇರಳ ಬಯಸುತ್ತಿದೆ. ಇವರು ಭ್ರಷ್ಟಾಚಾರ, ಅತೀವ ಹಿಂಸೆಯ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಇದು ಕೇರಳದ ನೈತಿಕತೆಗೆ ವಿರುದ್ಧವಾದುದು. ಈ ಎಲ್ಲದರ ಮಧ್ಯೆಯೂ ನಮ್ಮ ಕಾರ್ಯಕರ್ತರು ದೃಢವಾಗಿ ನಿಂತುಕೊಂಡರು’ ಎಂದಿದ್ದಾರೆ.</p>.<p>‘ತಿರುವನಂತಪುರವು ಶ್ರೀ ಪದ್ಮನಾಭಸ್ವಾಮಿಯ ಸಾನಿಧ್ಯವನ್ನು ಹೊಂದಿದೆ. ಈ ನಗರವು ಹಲವು ರಾಜಕೀಯ ನಾಯಕರನ್ನು, ಸಾಮಾಜ ಸುಧಾರಕರನ್ನು, ಕಲಾವಿದರನ್ನು, ಸಂಗೀತಗಾರರನ್ನು, ಕವಿಗಳನ್ನು, ಸಂತರನ್ನು ಪೋಷಿಸಿಕೊಂಡು ಬಂದಿದೆ. ಇಂಥ ನಗರವೊಂದು ನಮ್ಮ ಪಕ್ಷವನ್ನು ಆಶೀರ್ವದಿಸಿದೆ. ಇದು ನಮ್ಮನ್ನು ವಿನೀತರನ್ನಾಗಿಸಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>