<p><strong>ಲಖನೌ: ಪ್ರ</strong>ಯಾಗರಾಜ್ ಕಡೆ ಸಾಗುವ ರಸ್ತೆಗಳನ್ನು ಅಧಿಕಾರಿಗಳು ಕಾಲ್ತುಳಿತದ ನಂತರ ಬಂದ್ ಮಾಡಿದ ಕಾರಣದಿಂದಾಗಿ, ಸಹಸ್ರಾರು ಮಂದಿ ಭಕ್ತರು ಮುಂದಕ್ಕೆ ಹೋಗಲೂ ಆಗದ, ಮರಳಲೂ ಆಗದ ಸ್ಥಿತಿಗೆ ಸಿಲುಕಿದ್ದಾರೆ.</p>.<p>ಲಖನೌ–ಪ್ರಯಾಗರಾಜ್ ಹೆದ್ದಾರಿ, ಬುಂದೇಲ್ಖಂಡ ಎಕ್ಸ್ಪ್ರೆಸ್ ಹೆದ್ದಾರಿ ಮತ್ತು ಇತರ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ. ಕೆಲವರನ್ನು ವಾಪಸ್ ಕಳುಹಿಸಲಾಗುತ್ತಿದೆ ಎನ್ನಲಾಗಿದೆ.</p>.<p>‘ನಾವು ಇನ್ನೂ ಎಷ್ಟು ಹೊತ್ತು ಇಲ್ಲಿರಬೇಕು ಎಂಬುದು ಗೊತ್ತಾಗಿಲ್ಲ... ಮಹಾಕುಂಭದ ಸ್ಥಳದಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ, ಅಲ್ಲಿ ಜನರ ಸಂಖ್ಯೆ ಕಡಿಮೆ ಆದ ನಂತರವೇ ನಮ್ಮನ್ನು ಮುಂದಕ್ಕೆ ಬಿಡಲಾಗುತ್ತದೆ ಎಂದು ಹೇಳಲಾಗಿದೆ’ ಎಂದು ರಾಯ್ಬರೇಲಿಯಲ್ಲಿ ನಿಂತಿರುವ ಭಕ್ತರೊಬ್ಬರು ತಿಳಿಸಿದ್ದಾರೆ.</p>.<p><span lang="en-in" style="font-size:12pt;" xml:lang="en-in">ಕೆಲವು ಭಕ್ತರು ವಾಹನಗಳಿಂದ ಇಳಿದು ಕಾಲ್ನಡಿಗೆಯಲ್ಲೇ ಸಾಗುತ್ತಿದ್ದಾರೆ. ಇನ್ನು ಕೆಲವರು ಮಹಾಕುಂಭ ನಡೆಯುತ್ತಿರುವ ಸ್ಥಳಕ್ಕೆ ತೆರಳುವ ಬದಲು ವಿಶ್ವನಾಥನ ದರ್ಶನಕ್ಕೆ ಕಾಶಿಗೆ ತೆರಳುತ್ತಿದ್ದಾರೆ.</span></p>.<p><span lang="en-in" style="font-size:12pt;" xml:lang="en-in">ಮಹಾಕುಂಭಕ್ಕೆ ತೆರಳುವ ಕೆಲವು ವಿಶೇಷ ರೈಲುಗಳ ಸಂಚಾರವನ್ನು ಮಧ್ಯದಲ್ಲಿಯೇ ತಡೆಯಲಾಗಿದೆ ಎಂದು ವರದಿಗಳು ಹೇಳುತ್ತಿವೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ: ಪ್ರ</strong>ಯಾಗರಾಜ್ ಕಡೆ ಸಾಗುವ ರಸ್ತೆಗಳನ್ನು ಅಧಿಕಾರಿಗಳು ಕಾಲ್ತುಳಿತದ ನಂತರ ಬಂದ್ ಮಾಡಿದ ಕಾರಣದಿಂದಾಗಿ, ಸಹಸ್ರಾರು ಮಂದಿ ಭಕ್ತರು ಮುಂದಕ್ಕೆ ಹೋಗಲೂ ಆಗದ, ಮರಳಲೂ ಆಗದ ಸ್ಥಿತಿಗೆ ಸಿಲುಕಿದ್ದಾರೆ.</p>.<p>ಲಖನೌ–ಪ್ರಯಾಗರಾಜ್ ಹೆದ್ದಾರಿ, ಬುಂದೇಲ್ಖಂಡ ಎಕ್ಸ್ಪ್ರೆಸ್ ಹೆದ್ದಾರಿ ಮತ್ತು ಇತರ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ. ಕೆಲವರನ್ನು ವಾಪಸ್ ಕಳುಹಿಸಲಾಗುತ್ತಿದೆ ಎನ್ನಲಾಗಿದೆ.</p>.<p>‘ನಾವು ಇನ್ನೂ ಎಷ್ಟು ಹೊತ್ತು ಇಲ್ಲಿರಬೇಕು ಎಂಬುದು ಗೊತ್ತಾಗಿಲ್ಲ... ಮಹಾಕುಂಭದ ಸ್ಥಳದಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ, ಅಲ್ಲಿ ಜನರ ಸಂಖ್ಯೆ ಕಡಿಮೆ ಆದ ನಂತರವೇ ನಮ್ಮನ್ನು ಮುಂದಕ್ಕೆ ಬಿಡಲಾಗುತ್ತದೆ ಎಂದು ಹೇಳಲಾಗಿದೆ’ ಎಂದು ರಾಯ್ಬರೇಲಿಯಲ್ಲಿ ನಿಂತಿರುವ ಭಕ್ತರೊಬ್ಬರು ತಿಳಿಸಿದ್ದಾರೆ.</p>.<p><span lang="en-in" style="font-size:12pt;" xml:lang="en-in">ಕೆಲವು ಭಕ್ತರು ವಾಹನಗಳಿಂದ ಇಳಿದು ಕಾಲ್ನಡಿಗೆಯಲ್ಲೇ ಸಾಗುತ್ತಿದ್ದಾರೆ. ಇನ್ನು ಕೆಲವರು ಮಹಾಕುಂಭ ನಡೆಯುತ್ತಿರುವ ಸ್ಥಳಕ್ಕೆ ತೆರಳುವ ಬದಲು ವಿಶ್ವನಾಥನ ದರ್ಶನಕ್ಕೆ ಕಾಶಿಗೆ ತೆರಳುತ್ತಿದ್ದಾರೆ.</span></p>.<p><span lang="en-in" style="font-size:12pt;" xml:lang="en-in">ಮಹಾಕುಂಭಕ್ಕೆ ತೆರಳುವ ಕೆಲವು ವಿಶೇಷ ರೈಲುಗಳ ಸಂಚಾರವನ್ನು ಮಧ್ಯದಲ್ಲಿಯೇ ತಡೆಯಲಾಗಿದೆ ಎಂದು ವರದಿಗಳು ಹೇಳುತ್ತಿವೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>