‘ಎಲ್ಲ ಉದ್ಯೋಗಿಗಳಿಗೂ ಸುರಕ್ಷಿತ, ಕೆಲಸಕ್ಕೆ ಅನುಕೂಲಕರವಾದಮತ್ತು ಲೈಂಗಿಕ ಕಿರುಕುಳ ಮುಕ್ತ ವಾತಾವರಣ ನೀಡಲು ಟೈಮ್ಸ್ ಆಫ್ ಇಂಡಿಯಾ ಬದ್ಧವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆ.ಆರ್. ಶ್ರೀನಿವಾಸ್ ವಿಚಾರವನ್ನು ಬಿಸಿಸಿಎಲ್ನ ಆಂತರಿಕ ದೂರುಗಳ ಸಮಿತಿ ತನಿಖೆ ನಡೆಸಲಿದೆ. ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿಶ್ರೀನಿವಾಸ್ ಅವರಿಗೆ ಆಡಳಿತಾತ್ಮಕ ರಜೆ ನೀಡಲಾಗಿದೆ. ಸಮಿತಿಯು ಅದರ ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ಸ್ವತಂತ್ರವಾಗಿದೆ’ ಎಂದು ಎಲ್ಲ ಉದ್ಯೋಗಿಗಳಿಗೆ ಇ–ಮೇಲ್ ಸಂದೇಶ ಕಳುಹಿಸಲಾಗಿದೆ ಎಂದೂಪ್ರಕಟಣೆಯಲ್ಲಿ ಹೇಳಲಾಗಿದೆ.