ಜಂಪೂಯಿಜಲದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬುಡಕಟ್ಟು ಕಲ್ಯಾಣ ಸಚಿವ ರಾಂಪದ ಜಮಾತಿಯಾ ಹಾಗೂ ಬಿಜೆಪಿ ಸಂಸದ ರೇಬತಿ ತ್ರಿಪುರಾ ಅವರ ಜತೆ ಪತಲ್ ಕನ್ಯಾ ಜಮಾತಿಯಾ ತೆರಳುತ್ತಿದ್ದರು. ಈ ಸಂದರ್ಭದಲ್ಲಿ, ಗುಂಪೊಂದು ಬೆಂಗಾವಲು ಪಡೆ ವಾಹನಗಳನ್ನು ತಡೆಯಲು ಮುಂದಾಗಿದೆ. ಇದೇ ವೇಳೆ ಪತಲ್ ಕನ್ಯಾ ಮೇಲೆ ಹಲ್ಲೆ ನಡೆದಿದೆ ಎಂದು ಇನ್ಸ್ಪೆಕ್ಟರ್ ಜನರಲ್ (ಕಾನೂನು ಸುವ್ಯವಸ್ಥೆ) ಅರಿಂದಮ್ ನಾಥ್ ತಿಳಿಸಿದ್ದಾರೆ.