<p class="title"><strong>ನವದೆಹಲಿ: </strong>ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೇರ್ಪಡೆಯುಕ್ತ ಮತ್ತು ಜಾತ್ಯತೀತ ಚಿಂತನೆಯನ್ನು ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರ ಕುಟುಂಬ ಸದಸ್ಯರು ಪ್ರತಿಪಾದಿಸಿದ್ದಾರೆ.</p>.<p>‘ಎಲ್ಲ ಧರ್ಮಗಳವರು ಶಾಂತಿ, ಸೌಹಾರ್ದದಿಂದ ಬದುಕುವುದು ನಮ್ಮ ತಂದೆ ಕನಸಾಗಿತ್ತು. ಪ್ರತಿಮೆ ಸ್ಥಾಪಿಸುವುದಷ್ಟೇ ಅವರಿಗೆ ಗೌರವಲ್ಲ. ಅವರ ಚಿಂತನೆ, ಮೌಲ್ಯಗಳನ್ನು ಅನುಸರಿಸಬೇಕು‘ ಎಂದು ಅನಿತಾ ಬೋಸ್ ಪ್ರತಿಕ್ರಿಯಿಸಿದರು.</p>.<p>ಬೋಸ್ ಅವರ ಮರಿಸೋದರಳಿಯ ಚಂದ್ರಕುಮಾರ್ ಬೋಸ್ ಅವರು, ದೇಶದಲ್ಲಿ ನೇತಾಜಿ ಅವರ ಚಿಂತನೆಗಳನ್ನು ಜಾರಿಗೊಳಿಸಲು ಒತ್ತು ನೀಡಬೇಕು ಎಂದು ಕೇಂದ್ರವನ್ನು ಒತ್ತಾಯಿಯಿಸಿದ್ದಾರೆ.</p>.<p>ಕೇಂದ್ರ ಸರ್ಕಾರ ಶುಕ್ರವಾರವಷ್ಟೇ, ಆಜಾದ್ ಹಿಂದ್ ಫೌಜ್ನ ಸ್ಥಾಪಕರಾಗಿದ್ದ ನೇರಾಜಿ ಅವರ ಬೃಹತ್ ಪ್ರತಿಮೆಯನ್ನು ರಾಜಧಾನಿಯ ಇಂಡಿಯಾಗೇಟ್ ಬಳಿ ಸ್ಥಾಪಿಸುವ ತೀರ್ಮಾನ ಪ್ರಕಟಿಸಿತ್ತು. ಅಮೃತಶಿಲೆಯ ಪ್ರತಿಮೆ ಸಿದ್ಧವಾಗುವವರೆಗೂ ನೇತಾಜಿ ಅವರ ಹೊಲೊಗ್ರಾಂ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಹೇಳಿದ್ದರು.</p>.<p>ಬೋಸ್ ಅವರು ಸುಮಾರು 70 ವರ್ಷದ ಹಿಂದೆಯೇ ಮೃತಪಟ್ಟಿದ್ದಾರೆ ಎಂಬ ನಂಬಿಕೆ ಇದೆ. ಆದರೆ, ಅವರ ಸಾವು, ಸಮಯ, ವರ್ಷ, ಸ್ಥಳ ಕುರಿತ ವಿವರಗಳು ಇನ್ನೂ ರಹಸ್ಯವಾಗಿಯೇ ಉಳಿದಿವೆ.</p>.<p class="title"><strong>ಸ್ತಬ್ಧಚಿತ್ರ ತಿರಸ್ಕರಿಸಿ ಅವಮಾನ ಕೇಂದ್ರ ವಿರುದ್ಧ ಮಮತಾ ಟೀಕೆ</strong></p>.<p class="title">‘ನೇತಾಜಿ ಅವರ ಪ್ರತಿಮೆ ಸ್ಥಾಪಿಸುವ ಮೂಲಕ, ಗಣರಾಜ್ಯ ಪಥ ಸಂಚಲನಕ್ಕೆ ಅವರನ್ನು ಕುರಿತ ಸ್ತಬ್ಧಚಿತ್ರ ನಿರಾಕರಿಸಿ ಮಾಡಿದ ಅನ್ಯಾಯ ಮರೆಮಾಚಲಾಗದು’ ಎಂದು ಪಶ್ಚಿಮ ಬಂಗಾಳ ಸರ್ಕಾರ ಟೀಕಿಸಿದೆ.</p>.<p class="title">ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಸ್ತಬ್ಧಚಿತ್ರ ನಿರಾಕರಿಸುವ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂದು ಹೇಳಿದರು.</p>.<p class="title">ಗಣರಾಜ್ಯೋತ್ಸವ ಸಮಾರಂಭದಂದು ನಾವು ಆ ಸ್ತಬ್ಧಚಿತ್ರವನ್ನು ಇಲ್ಲಿ ಪ್ರದರ್ಶಿಸಲಿದ್ದೇವೆ. ಅದು ಎಷ್ಟು ಅದ್ಧೂರಿಯಾಗಿದೆ ಎಂಬುದನ್ನು ಜನರೇ ನೋಡಲಿ. ಅದು, ನೇತಾಜಿ ಅವರ ವ್ಯಕ್ತಿತ್ವ ಮತ್ತು 75ನೇ ಸ್ವಾತಂತ್ರ್ಯೋತ್ಸವದ ಉತ್ಸಾಹವನ್ನು ಬಿಂಬಿಸಲಿದೆ. ಇದನ್ನು ನಿರಾಕರಿಸಿ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಅನ್ಯಾಯ ಮಾಡಿದೆ ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ: </strong>ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೇರ್ಪಡೆಯುಕ್ತ ಮತ್ತು ಜಾತ್ಯತೀತ ಚಿಂತನೆಯನ್ನು ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರ ಕುಟುಂಬ ಸದಸ್ಯರು ಪ್ರತಿಪಾದಿಸಿದ್ದಾರೆ.</p>.<p>‘ಎಲ್ಲ ಧರ್ಮಗಳವರು ಶಾಂತಿ, ಸೌಹಾರ್ದದಿಂದ ಬದುಕುವುದು ನಮ್ಮ ತಂದೆ ಕನಸಾಗಿತ್ತು. ಪ್ರತಿಮೆ ಸ್ಥಾಪಿಸುವುದಷ್ಟೇ ಅವರಿಗೆ ಗೌರವಲ್ಲ. ಅವರ ಚಿಂತನೆ, ಮೌಲ್ಯಗಳನ್ನು ಅನುಸರಿಸಬೇಕು‘ ಎಂದು ಅನಿತಾ ಬೋಸ್ ಪ್ರತಿಕ್ರಿಯಿಸಿದರು.</p>.<p>ಬೋಸ್ ಅವರ ಮರಿಸೋದರಳಿಯ ಚಂದ್ರಕುಮಾರ್ ಬೋಸ್ ಅವರು, ದೇಶದಲ್ಲಿ ನೇತಾಜಿ ಅವರ ಚಿಂತನೆಗಳನ್ನು ಜಾರಿಗೊಳಿಸಲು ಒತ್ತು ನೀಡಬೇಕು ಎಂದು ಕೇಂದ್ರವನ್ನು ಒತ್ತಾಯಿಯಿಸಿದ್ದಾರೆ.</p>.<p>ಕೇಂದ್ರ ಸರ್ಕಾರ ಶುಕ್ರವಾರವಷ್ಟೇ, ಆಜಾದ್ ಹಿಂದ್ ಫೌಜ್ನ ಸ್ಥಾಪಕರಾಗಿದ್ದ ನೇರಾಜಿ ಅವರ ಬೃಹತ್ ಪ್ರತಿಮೆಯನ್ನು ರಾಜಧಾನಿಯ ಇಂಡಿಯಾಗೇಟ್ ಬಳಿ ಸ್ಥಾಪಿಸುವ ತೀರ್ಮಾನ ಪ್ರಕಟಿಸಿತ್ತು. ಅಮೃತಶಿಲೆಯ ಪ್ರತಿಮೆ ಸಿದ್ಧವಾಗುವವರೆಗೂ ನೇತಾಜಿ ಅವರ ಹೊಲೊಗ್ರಾಂ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಪ್ರಧಾನಿ ಹೇಳಿದ್ದರು.</p>.<p>ಬೋಸ್ ಅವರು ಸುಮಾರು 70 ವರ್ಷದ ಹಿಂದೆಯೇ ಮೃತಪಟ್ಟಿದ್ದಾರೆ ಎಂಬ ನಂಬಿಕೆ ಇದೆ. ಆದರೆ, ಅವರ ಸಾವು, ಸಮಯ, ವರ್ಷ, ಸ್ಥಳ ಕುರಿತ ವಿವರಗಳು ಇನ್ನೂ ರಹಸ್ಯವಾಗಿಯೇ ಉಳಿದಿವೆ.</p>.<p class="title"><strong>ಸ್ತಬ್ಧಚಿತ್ರ ತಿರಸ್ಕರಿಸಿ ಅವಮಾನ ಕೇಂದ್ರ ವಿರುದ್ಧ ಮಮತಾ ಟೀಕೆ</strong></p>.<p class="title">‘ನೇತಾಜಿ ಅವರ ಪ್ರತಿಮೆ ಸ್ಥಾಪಿಸುವ ಮೂಲಕ, ಗಣರಾಜ್ಯ ಪಥ ಸಂಚಲನಕ್ಕೆ ಅವರನ್ನು ಕುರಿತ ಸ್ತಬ್ಧಚಿತ್ರ ನಿರಾಕರಿಸಿ ಮಾಡಿದ ಅನ್ಯಾಯ ಮರೆಮಾಚಲಾಗದು’ ಎಂದು ಪಶ್ಚಿಮ ಬಂಗಾಳ ಸರ್ಕಾರ ಟೀಕಿಸಿದೆ.</p>.<p class="title">ಪ್ರಧಾನಿ ನರೇಂದ್ರಮೋದಿ ಅವರ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಸ್ತಬ್ಧಚಿತ್ರ ನಿರಾಕರಿಸುವ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂದು ಹೇಳಿದರು.</p>.<p class="title">ಗಣರಾಜ್ಯೋತ್ಸವ ಸಮಾರಂಭದಂದು ನಾವು ಆ ಸ್ತಬ್ಧಚಿತ್ರವನ್ನು ಇಲ್ಲಿ ಪ್ರದರ್ಶಿಸಲಿದ್ದೇವೆ. ಅದು ಎಷ್ಟು ಅದ್ಧೂರಿಯಾಗಿದೆ ಎಂಬುದನ್ನು ಜನರೇ ನೋಡಲಿ. ಅದು, ನೇತಾಜಿ ಅವರ ವ್ಯಕ್ತಿತ್ವ ಮತ್ತು 75ನೇ ಸ್ವಾತಂತ್ರ್ಯೋತ್ಸವದ ಉತ್ಸಾಹವನ್ನು ಬಿಂಬಿಸಲಿದೆ. ಇದನ್ನು ನಿರಾಕರಿಸಿ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಅನ್ಯಾಯ ಮಾಡಿದೆ ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>