<p><strong>ಹೈದರಾಬಾದ್ (ಪಿಟಿಐ):</strong> ‘ಸನಾತನ ಹಿಂದೂ ಧರ್ಮದ ಅಭಿಯಾನವನ್ನು ಟಿಟಿಡಿ ಮಾತ್ರ ಮುನ್ನಡೆಸಬಹುದು ಮತ್ತು ಭವಿಷ್ಯದ ಪೀಳಿಗೆಗೆ ಅದರ ಪಾವಿತ್ರ್ಯವನ್ನು ಉಳಿಸಬಹುದು’ ಎಂದು ವಿವಿಧ ಮಠಾಧೀಶರು ಸರ್ವಾನುಮತದಿಂದ ಇಲ್ಲಿ ಪ್ರತಿಪಾದಿಸಿದರು.</p>.<p>ತಿರುಮಲದ ಆಸ್ಥಾನ ಮಂಟಪದಲ್ಲಿ ಟಿಟಿಡಿಯು ಹಿಂದೂ ಧರ್ಮ ಪ್ರಚಾರ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಮೂರು ದಿನದ ಧಾರ್ಮಿಕ ಸಮಾವೇಶದ ಮೊದಲ ದಿನವಾದ ಶನಿವಾರ ವಿವಿಧ ಮಠಾಧೀಶರಿಂದ ಈ ಅಭಿಪ್ರಾಯ ವ್ಯಕ್ತವಾಯಿತು.</p>.<p>ಮೊದಲ ದಿನದ ಸಮಾವೇಶದಲ್ಲಿ 25 ಮಠಾಧೀಶರು ಭಾಗಿಯಾಗಿದ್ದರು. ದೇಶದ ವಿವಿಧ ಭಾಗಗಳಿಂದ ಈ ಸಮಾವೇಶಕ್ಕಾಗಿ ಬಂದಿರುವ ಮಠಾಧೀಶರು, ಧಾರ್ಮಿಕ ಕಾರ್ಯಕ್ರಮಗಳ ಸರಣಿಯ ಮೂಲಕ ಸನಾತನ ಹಿಂದೂ ಧರ್ಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಮುನ್ನಡೆಸುವ ಬಗ್ಗೆ ಚರ್ಚಿಸಲಿದ್ದಾರೆ.</p>.<p>‘ಮಠಾಧಿಪತಿಗಳು ಹಾಗೂ ಹಿಂದೂ ಧಾರ್ಮಿಕ ಮುಖ್ಯಸ್ಥರ ಸಲಹೆಯಂತೆ ಮಂಡಳಿಯು ಹಲವು ದಶಕಗಳಿಂದಲೂ ಧಾರ್ಮಿಕ ಚಟುವಟಿಕೆ ನಡೆಸುತ್ತಿದೆ. ಹಿಂದೂ ಧರ್ಮದ ವೈಭವವನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ನಿರತವಾಗಿದೆ’ ಎಂದು ಟಿಟಿಡಿ ಅಧ್ಯಕ್ಷ ಭುಮನಾ ಕರುಣಾಕರರೆಡ್ಡಿ ಹೇಳಿದರು.</p>.<p>ವಿಶಾಖಾ ಶಾರದಾ ಪೀಠದ ಸ್ವಾಮಿ ಸ್ವಾತ್ಮಾನಂದೇಂದ್ರ ಸರಸ್ವತಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್ (ಪಿಟಿಐ):</strong> ‘ಸನಾತನ ಹಿಂದೂ ಧರ್ಮದ ಅಭಿಯಾನವನ್ನು ಟಿಟಿಡಿ ಮಾತ್ರ ಮುನ್ನಡೆಸಬಹುದು ಮತ್ತು ಭವಿಷ್ಯದ ಪೀಳಿಗೆಗೆ ಅದರ ಪಾವಿತ್ರ್ಯವನ್ನು ಉಳಿಸಬಹುದು’ ಎಂದು ವಿವಿಧ ಮಠಾಧೀಶರು ಸರ್ವಾನುಮತದಿಂದ ಇಲ್ಲಿ ಪ್ರತಿಪಾದಿಸಿದರು.</p>.<p>ತಿರುಮಲದ ಆಸ್ಥಾನ ಮಂಟಪದಲ್ಲಿ ಟಿಟಿಡಿಯು ಹಿಂದೂ ಧರ್ಮ ಪ್ರಚಾರ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ಮೂರು ದಿನದ ಧಾರ್ಮಿಕ ಸಮಾವೇಶದ ಮೊದಲ ದಿನವಾದ ಶನಿವಾರ ವಿವಿಧ ಮಠಾಧೀಶರಿಂದ ಈ ಅಭಿಪ್ರಾಯ ವ್ಯಕ್ತವಾಯಿತು.</p>.<p>ಮೊದಲ ದಿನದ ಸಮಾವೇಶದಲ್ಲಿ 25 ಮಠಾಧೀಶರು ಭಾಗಿಯಾಗಿದ್ದರು. ದೇಶದ ವಿವಿಧ ಭಾಗಗಳಿಂದ ಈ ಸಮಾವೇಶಕ್ಕಾಗಿ ಬಂದಿರುವ ಮಠಾಧೀಶರು, ಧಾರ್ಮಿಕ ಕಾರ್ಯಕ್ರಮಗಳ ಸರಣಿಯ ಮೂಲಕ ಸನಾತನ ಹಿಂದೂ ಧರ್ಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಮುನ್ನಡೆಸುವ ಬಗ್ಗೆ ಚರ್ಚಿಸಲಿದ್ದಾರೆ.</p>.<p>‘ಮಠಾಧಿಪತಿಗಳು ಹಾಗೂ ಹಿಂದೂ ಧಾರ್ಮಿಕ ಮುಖ್ಯಸ್ಥರ ಸಲಹೆಯಂತೆ ಮಂಡಳಿಯು ಹಲವು ದಶಕಗಳಿಂದಲೂ ಧಾರ್ಮಿಕ ಚಟುವಟಿಕೆ ನಡೆಸುತ್ತಿದೆ. ಹಿಂದೂ ಧರ್ಮದ ವೈಭವವನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ನಿರತವಾಗಿದೆ’ ಎಂದು ಟಿಟಿಡಿ ಅಧ್ಯಕ್ಷ ಭುಮನಾ ಕರುಣಾಕರರೆಡ್ಡಿ ಹೇಳಿದರು.</p>.<p>ವಿಶಾಖಾ ಶಾರದಾ ಪೀಠದ ಸ್ವಾಮಿ ಸ್ವಾತ್ಮಾನಂದೇಂದ್ರ ಸರಸ್ವತಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>