<p class="title">ಮುಂಬೈ (ಪಿಟಿಐ): ‘ದೇಶದ ಎಲ್ಲರನ್ನು ಒಳಗೊಳ್ಳುವ ತೀವ್ರ ಬದ್ಧತೆ ಮತ್ತು ಎಲ್ಲ ಜನರ ಮಾನವ ಹಕ್ಕುಗಳ ಕುರಿತು ಗೌರವ ತೋರಿಸಿದರೆ ಮಾತ್ರ ಭಾರತದ ಧ್ವನಿಯು ವಿಶ್ವಮಟ್ಟದಲ್ಲಿ ಅಧಿಕಾರಯುತವಾಗಿಯೂ ವಿಶ್ವಾಸಾರ್ಹವಾಗಿಯೂ ಧ್ವನಿಸುತ್ತದೆ’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಬುಧವಾರ ಅಭಿಪ್ರಾಯಪಟ್ಟರು.</p>.<p class="title">‘ಮಾನವ ಹಕ್ಕುಗಳ ಮಂಡಳಿಯ ಚುನಾಯಿತ ಸದಸ್ಯ ರಾಷ್ಟ್ರವಾಗಿ, ಭಾರತಕ್ಕೆ ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ಜನರ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ಇದೆ’ ಎಂದೂ ಹೇಳಿದರು.</p>.<p>ಮೂರು ದಿನಗಳ ಭಾರತದ ಭೇಟಿಯಲ್ಲಿರುವ ಅವರು, ಬುಧವಾರ ‘ಇಂಡಿಯಾ@72: ಯುಎನ್–ಇಂಡಿಯಾ ಪಾರ್ಟ್ನರ್ಶಿಪ್: ಸ್ಟ್ರೆಂಥನಿಂಗ್ ಸೌತ್–ಸೌತ್ ಕೋ–ಆಪರೇಷನ್’ ಕುರಿತು ಬಾಂಬೆಯ ಐಐಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.</p>.<p>‘ಭಾರತದ ಬಹುತ್ವದ ಮಾದರಿಯು ಸರಳವಾದ ಆದರೆ ಅತ್ಯಂತ ದೃಢವಾದ ಗ್ರಹಿಕೆಯನ್ನು ಆಧರಿಸಿದೆ. ಅತ್ಯಂತ ಶ್ರೀಮಂತವಾದ ವೈವಿಧ್ಯವು ನಿಮ್ಮ ದೇಶವನ್ನು ಗಟ್ಟಿಗೊಳಿಸಿದೆ. ಈ ಗ್ರಹಿಕೆಯು ಪ್ರತಿ ಭಾರತೀಯ ಜನ್ಮಜಾತ ಹಕ್ಕು. ಆದರೆ, ಅದು ಖಾತರಿ ಅಲ್ಲ. ಆದರೆ, ಅದನ್ನು ಪ್ರತಿ ದಿನವೂ ಪೋಷಿಕಬೇಕು, ಬಲಪಡಿಸಬೇಕು ಮತ್ತು ನವೀಕರಿಸಬೇಕು’ ಎಂದರು.</p>.<p>‘ಮಹಾತ್ಮ ಗಾಂಧಿ, ನೆಹರೂ ಅವರ ತತ್ವಗಳಿಂದ ಮಾತ್ರವೇ ಭಾರತದ ಬಹುತ್ವವನ್ನು ರಕ್ಷಿಸುವುದು ಸಾಧ್ಯ. ದ್ವೇಷ ಭಾಷಣವನ್ನು ನಿಸ್ಸಂದೇಹವಾಗಿ ಖಂಡಿಸುವುದರ ಮುಖಾಂತರ ಬಹು–ಸಂಸ್ಕೃತಿ, ಬಹು–ಧರ್ಮ ಮತ್ತು ಬಹು–ಸಮುದಾಯವನ್ನು ಒಳಗೊಳ್ಳುವಂತೆ ಆಗಬೇಕು’ ಎಂದರು.</p>.<p>‘ಇಲ್ಲಿಯವರೆಗೂ ಬಹುತ್ವ ಭಾರತವನ್ನು ಜಗತ್ತು ಗೌರವಿಸುತ್ತಾ ಬಂದಿದೆ. ಎಲ್ಲರನ್ನೂ ಒಳಗೊಳ್ಳುವ, ಬಹುತ್ವದ, ವೈವಿಧ್ಯ ಸಮುದಾಯಗಳನ್ನು ಒಳಗೊಳ್ಳುವ ಕಾರ್ಯಕ್ಕೆ ಕೈಜೋಡಿಸಿ ಎಂದು ಭಾರತದ ಜನರನ್ನು ಆಗ್ರಹಿಸುತ್ತೇನೆ’ ಎಂದರು.</p>.<p class="Subhead">ಕಾರ್ಯಕ್ರಮದಲ್ಲಿ ಭಾಗಿ: ಮುಂಬೈ ಭೇಟಿಯ ಬಳಿಕ ಆ್ಯಂಟೊನಿಯೊ ಗುಟೆರಸ್ ಅವರು ಗುಜರಾತ್ಗೆ ತೆರಳಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗುಟೆರಸ್ ಅವರು ಗುಜರಾತ್ನಲ್ಲಿ ಗುರುವಾರ (ಅ.20) ನಡೆಯಲಿರುವ ‘ಮಿಷನ್ ಲೈಫ್’ (ಲೈಫ್ಸ್ಟೈಲ್ ಫಾರ್ ಎನ್ವಿರಾನ್ಮೆಂಟ್) ಕಾರ್ಯಕ್ರಮಲ್ಲಿ ಭಾಗವಹಿಸಲಿದ್ದಾರೆ.</p>.<p class="Briefhead">26/11 ಸಂತ್ರಸ್ತರಿಗೆ ನಮನ</p>.<p>ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿಗೆ ಆಯ್ಕೆಯಾದ ಬಳಿಕ ಆ್ಯಂಟೊನಿಯೊ ಗುಟೆರಸ್ ಅವರು ಇದೇ ಮೊದಲ ಬಾರಿಗೆ ಭಾರತದ ಪ್ರವಾಸ ಕೈಗೊಂಡಿದ್ದಾರೆ.</p>.<p>ಭಾರತದ ಭೇಟಿಯ ಮೊದಲ ದಿನವಾದ ಬುಧವಾರ ಮುಂಬೈನ ತಾಜ್ ಮಹಾಲ್ ಪ್ಯಾಲೇಸ್ಗೆ ಭೇಟಿ ನೀಡಿದ ಗುಟೆರಸ್, 2008ರಲ್ಲಿ ನಡೆದ 26/11 ಉಗ್ರ ದಾಳಿಯ ಸಂತ್ರಸ್ತರಿಗೆ ನಮನ ಸಲ್ಲಿಸಿದರು. ಈ ವೇಳೆ ಗುಟೆರಸ್ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇದ್ದರು.</p>.<p>‘26/11 ಮುಂಬೈ ದಾಳಿಯು ಭಯೋತ್ಪಾದನೆಯ ಇತಿಹಾಸದಲ್ಲೇ ಅತ್ಯಂತ ಭೀಕರ ಕೃತ್ಯವಾಗಿದೆ. ಈ ದಾಳಿಯ ಸಂತ್ರಸ್ತರು ‘ಜಗತ್ತಿನ ಹಿರೋಗಳಾಗಿದ್ದಾರೆ’. ಸಂತ್ರಸ್ತರ ಕುಟುಂಬಕ್ಕೆ ಸ್ನೇಹಿತರಿಗೆ ಮತ್ತು ಭಾರತದ ಜನರಿಗೆ ನನ್ನ ಮನದಾಳದ ಸಂತಾಪಗಳು’ ಎಂದು ಗುಟೆರಸ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title">ಮುಂಬೈ (ಪಿಟಿಐ): ‘ದೇಶದ ಎಲ್ಲರನ್ನು ಒಳಗೊಳ್ಳುವ ತೀವ್ರ ಬದ್ಧತೆ ಮತ್ತು ಎಲ್ಲ ಜನರ ಮಾನವ ಹಕ್ಕುಗಳ ಕುರಿತು ಗೌರವ ತೋರಿಸಿದರೆ ಮಾತ್ರ ಭಾರತದ ಧ್ವನಿಯು ವಿಶ್ವಮಟ್ಟದಲ್ಲಿ ಅಧಿಕಾರಯುತವಾಗಿಯೂ ವಿಶ್ವಾಸಾರ್ಹವಾಗಿಯೂ ಧ್ವನಿಸುತ್ತದೆ’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಬುಧವಾರ ಅಭಿಪ್ರಾಯಪಟ್ಟರು.</p>.<p class="title">‘ಮಾನವ ಹಕ್ಕುಗಳ ಮಂಡಳಿಯ ಚುನಾಯಿತ ಸದಸ್ಯ ರಾಷ್ಟ್ರವಾಗಿ, ಭಾರತಕ್ಕೆ ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ಜನರ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ಇದೆ’ ಎಂದೂ ಹೇಳಿದರು.</p>.<p>ಮೂರು ದಿನಗಳ ಭಾರತದ ಭೇಟಿಯಲ್ಲಿರುವ ಅವರು, ಬುಧವಾರ ‘ಇಂಡಿಯಾ@72: ಯುಎನ್–ಇಂಡಿಯಾ ಪಾರ್ಟ್ನರ್ಶಿಪ್: ಸ್ಟ್ರೆಂಥನಿಂಗ್ ಸೌತ್–ಸೌತ್ ಕೋ–ಆಪರೇಷನ್’ ಕುರಿತು ಬಾಂಬೆಯ ಐಐಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.</p>.<p>‘ಭಾರತದ ಬಹುತ್ವದ ಮಾದರಿಯು ಸರಳವಾದ ಆದರೆ ಅತ್ಯಂತ ದೃಢವಾದ ಗ್ರಹಿಕೆಯನ್ನು ಆಧರಿಸಿದೆ. ಅತ್ಯಂತ ಶ್ರೀಮಂತವಾದ ವೈವಿಧ್ಯವು ನಿಮ್ಮ ದೇಶವನ್ನು ಗಟ್ಟಿಗೊಳಿಸಿದೆ. ಈ ಗ್ರಹಿಕೆಯು ಪ್ರತಿ ಭಾರತೀಯ ಜನ್ಮಜಾತ ಹಕ್ಕು. ಆದರೆ, ಅದು ಖಾತರಿ ಅಲ್ಲ. ಆದರೆ, ಅದನ್ನು ಪ್ರತಿ ದಿನವೂ ಪೋಷಿಕಬೇಕು, ಬಲಪಡಿಸಬೇಕು ಮತ್ತು ನವೀಕರಿಸಬೇಕು’ ಎಂದರು.</p>.<p>‘ಮಹಾತ್ಮ ಗಾಂಧಿ, ನೆಹರೂ ಅವರ ತತ್ವಗಳಿಂದ ಮಾತ್ರವೇ ಭಾರತದ ಬಹುತ್ವವನ್ನು ರಕ್ಷಿಸುವುದು ಸಾಧ್ಯ. ದ್ವೇಷ ಭಾಷಣವನ್ನು ನಿಸ್ಸಂದೇಹವಾಗಿ ಖಂಡಿಸುವುದರ ಮುಖಾಂತರ ಬಹು–ಸಂಸ್ಕೃತಿ, ಬಹು–ಧರ್ಮ ಮತ್ತು ಬಹು–ಸಮುದಾಯವನ್ನು ಒಳಗೊಳ್ಳುವಂತೆ ಆಗಬೇಕು’ ಎಂದರು.</p>.<p>‘ಇಲ್ಲಿಯವರೆಗೂ ಬಹುತ್ವ ಭಾರತವನ್ನು ಜಗತ್ತು ಗೌರವಿಸುತ್ತಾ ಬಂದಿದೆ. ಎಲ್ಲರನ್ನೂ ಒಳಗೊಳ್ಳುವ, ಬಹುತ್ವದ, ವೈವಿಧ್ಯ ಸಮುದಾಯಗಳನ್ನು ಒಳಗೊಳ್ಳುವ ಕಾರ್ಯಕ್ಕೆ ಕೈಜೋಡಿಸಿ ಎಂದು ಭಾರತದ ಜನರನ್ನು ಆಗ್ರಹಿಸುತ್ತೇನೆ’ ಎಂದರು.</p>.<p class="Subhead">ಕಾರ್ಯಕ್ರಮದಲ್ಲಿ ಭಾಗಿ: ಮುಂಬೈ ಭೇಟಿಯ ಬಳಿಕ ಆ್ಯಂಟೊನಿಯೊ ಗುಟೆರಸ್ ಅವರು ಗುಜರಾತ್ಗೆ ತೆರಳಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗುಟೆರಸ್ ಅವರು ಗುಜರಾತ್ನಲ್ಲಿ ಗುರುವಾರ (ಅ.20) ನಡೆಯಲಿರುವ ‘ಮಿಷನ್ ಲೈಫ್’ (ಲೈಫ್ಸ್ಟೈಲ್ ಫಾರ್ ಎನ್ವಿರಾನ್ಮೆಂಟ್) ಕಾರ್ಯಕ್ರಮಲ್ಲಿ ಭಾಗವಹಿಸಲಿದ್ದಾರೆ.</p>.<p class="Briefhead">26/11 ಸಂತ್ರಸ್ತರಿಗೆ ನಮನ</p>.<p>ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿಗೆ ಆಯ್ಕೆಯಾದ ಬಳಿಕ ಆ್ಯಂಟೊನಿಯೊ ಗುಟೆರಸ್ ಅವರು ಇದೇ ಮೊದಲ ಬಾರಿಗೆ ಭಾರತದ ಪ್ರವಾಸ ಕೈಗೊಂಡಿದ್ದಾರೆ.</p>.<p>ಭಾರತದ ಭೇಟಿಯ ಮೊದಲ ದಿನವಾದ ಬುಧವಾರ ಮುಂಬೈನ ತಾಜ್ ಮಹಾಲ್ ಪ್ಯಾಲೇಸ್ಗೆ ಭೇಟಿ ನೀಡಿದ ಗುಟೆರಸ್, 2008ರಲ್ಲಿ ನಡೆದ 26/11 ಉಗ್ರ ದಾಳಿಯ ಸಂತ್ರಸ್ತರಿಗೆ ನಮನ ಸಲ್ಲಿಸಿದರು. ಈ ವೇಳೆ ಗುಟೆರಸ್ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇದ್ದರು.</p>.<p>‘26/11 ಮುಂಬೈ ದಾಳಿಯು ಭಯೋತ್ಪಾದನೆಯ ಇತಿಹಾಸದಲ್ಲೇ ಅತ್ಯಂತ ಭೀಕರ ಕೃತ್ಯವಾಗಿದೆ. ಈ ದಾಳಿಯ ಸಂತ್ರಸ್ತರು ‘ಜಗತ್ತಿನ ಹಿರೋಗಳಾಗಿದ್ದಾರೆ’. ಸಂತ್ರಸ್ತರ ಕುಟುಂಬಕ್ಕೆ ಸ್ನೇಹಿತರಿಗೆ ಮತ್ತು ಭಾರತದ ಜನರಿಗೆ ನನ್ನ ಮನದಾಳದ ಸಂತಾಪಗಳು’ ಎಂದು ಗುಟೆರಸ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>