‘ಅವರು ರಾಷ್ಟ್ರಧ್ವಜವನ್ನು ಅಲಂಕಾರಿಕವಾಗಿ ಬಳಸಿದಂತೆ ಕಾಣಿಸುತ್ತದೆ. ಧ್ವಜದ ಮಧ್ಯದಲ್ಲಿರುವ ಬಿಳಿಯ ಭಾಗವು ಕಡಿಮೆಯಾಗಿದ್ದು, ಹಸಿರು ಬಣ್ಣದ ಭಾಗವನ್ನು ಹೆಚ್ಚಿಸಲಾಗಿದೆ. ಗೃಹಸಚಿವಾಲಯವು ನಿರ್ದಿಷ್ಟ ಪಡಿಸಿದ ಭಾರತದ ರಾಷ್ಟ್ರಧ್ವಜ ಸಂಹಿತೆಯ ನಿಬಂಧನೆಗಳಿಗೆ ಇದು ಅನುಗುಣವಾಗಿಲ್ಲ. ದೆಹಲಿ ಮುಖ್ಯಮಂತ್ರಿಯವರು ತಿಳಿದೋ ಅಥವಾ ತಿಳಿಯದೆಯೇ ಇಂಥ ಕೆಲಸ ಮಾಡುತ್ತಾರೆ ಎನ್ನುವುದನ್ನು ನಾನು ನಿರೀಕ್ಷಿಸಿರಲಿಲ್ಲ’ ಎಂದೂ ಪಟೇಲ್ ಪತ್ರದಲ್ಲಿ ಬರೆದಿದ್ದಾರೆ.