<p><strong>ಮೀರಠ್:</strong> ಇಲ್ಲಿನ ದೆಹಲಿ ರಸ್ತೆಯಲ್ಲಿ ಇದ್ದ ದಶಕಗಳಷ್ಟು ಹಳೆಯ ಮಸೀದಿಯನ್ನು ಪ್ರಾದೇಶಿಕ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ (ಆರ್ಆರ್ಟಿಎಸ್) ಕಾರಿಡಾರ್ ನಿರ್ಮಾಣಕ್ಕಾಗಿ ಕೆಡವಲಾಯಿತು. </p>.<p>ಈ ಮಾರ್ಗದಲ್ಲಿ ಸಾಗಲಿರುವ ರ್ಯಾಪಿಡ್ ರೈಲು ಯೋಜನೆಗೆ ಮಸೀದಿ ಅಡೆತಡೆಯಾಗಿತ್ತು. ಹೀಗಾಗಿ ತೆರವಿಗೆ ಕ್ರಮ ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ಹೇಳಿದರು.</p>.<p>‘ಮಸೀದಿ ಆಡಳಿತ ಮಂಡಳಿ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದವರ ಸಮ್ಮತಿ ಮೇರೆಗೆ ಮಸೀದಿ ತೆರವು ಕಾರ್ಯಕೈಗೊಳ್ಳಲಾಯಿತು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬ್ರಿಜೇಶ್ ಕುಮಾರ್ ಸಿಂಗ್ ತಿಳಿಸಿದರು.</p>.<p>‘ಮುಸ್ಲಿಂ ಸಮುದಾಯದ ಸದಸ್ಯರು ಗುರುವಾರ ಸುತ್ತಿಗೆಯಿಂದ ಮಸೀದಿ ಕೆಲ ಭಾಗಗಳನ್ನು ಕೆಡವಿದರು. ನಂತರ ಅದರ ರಚನೆಯನ್ನು ಕೆಡವಲಾಯಿತು. ಬಳಿಕ ಬುಲ್ಡೋಜರ್ ನೆರವಿನಿಂದ ಇಡೀ ಮಸೀದಿಯನ್ನು ಪೂರ್ಣವಾಗಿ ಕೆಡವಿ, ಅವಶೇಷಗಳನ್ನು ತೆರವುಗೊಳಿಸಲಾಯಿತು’ ಎಂದು ಅವರು ಮಾಹಿತಿ ನೀಡಿದರು.</p>.<p>‘ಪರಸ್ಪರ ಒಪ್ಪಂದದೊಂದಿಗೆ ಈ ಕಾರ್ಯ ನಡೆದಿದೆ. ಬೇರೆಡೆ ಮಸೀದಿ ನಿರ್ಮಾಣಕ್ಕೆ ಪರ್ಯಾಯ ಜಾಗವನ್ನು ಒದಗಿಸಿಲ್ಲ. ಈ ಕುರಿತು ಮುಸ್ಲಿಂ ಸಮುದಾಯದಿಂದ ಯಾವುದೇ ಪ್ರಸ್ತಾವವೂ ಬಂದಿಲ್ಲ’ ಎಂದು ಅವರು ಹೇಳಿದರು. </p>.<p>‘ಮಸೀದಿ ಎಷ್ಟು ವರ್ಷಗಳಷ್ಟು ಹಳೆಯದು ಎಂಬುದರ ಕುರಿತು ಸ್ಥಳೀಯರಲ್ಲಿ ಸ್ಪಷ್ಟತೆಯಿಲ್ಲ. ಕೆಲವರು 80 ವರ್ಷಗಳಷ್ಟು ಹಳೆಯದು ಎಂದರೆ, ಮತ್ತೆ ಕೆಲವರು 168 ವರ್ಷಗಳಷ್ಟು ಹಳೆಯದು ಎನ್ನುತ್ತಾರೆ’ ಎಂದು ಅವರು ತಿಳಿಸಿದರು.</p>.<p>‘ನಾವೇ ಮಸೀದಿಯನ್ನು ತೆರವುಗೊಳಿಸಿದ್ದೇವೆ. ಆದರೆ ಮಸೀದಿಯ ಐತಿಹಾಸಿಕತೆಯನ್ನು ಸಾಬೀತುಪಡಿಸುವ 1857ರ ದಾಖಲೆಗಳು ನಮ್ಮ ಬಳಿಯಿವೆ’ ಎಂದು ಮಸೀದಿಯ ಪ್ರತಿನಿಧಿ ಹಾಜಿ ಸ್ವಾಲೆ ಹೀನ್ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೀರಠ್:</strong> ಇಲ್ಲಿನ ದೆಹಲಿ ರಸ್ತೆಯಲ್ಲಿ ಇದ್ದ ದಶಕಗಳಷ್ಟು ಹಳೆಯ ಮಸೀದಿಯನ್ನು ಪ್ರಾದೇಶಿಕ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ (ಆರ್ಆರ್ಟಿಎಸ್) ಕಾರಿಡಾರ್ ನಿರ್ಮಾಣಕ್ಕಾಗಿ ಕೆಡವಲಾಯಿತು. </p>.<p>ಈ ಮಾರ್ಗದಲ್ಲಿ ಸಾಗಲಿರುವ ರ್ಯಾಪಿಡ್ ರೈಲು ಯೋಜನೆಗೆ ಮಸೀದಿ ಅಡೆತಡೆಯಾಗಿತ್ತು. ಹೀಗಾಗಿ ತೆರವಿಗೆ ಕ್ರಮ ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ಹೇಳಿದರು.</p>.<p>‘ಮಸೀದಿ ಆಡಳಿತ ಮಂಡಳಿ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯದವರ ಸಮ್ಮತಿ ಮೇರೆಗೆ ಮಸೀದಿ ತೆರವು ಕಾರ್ಯಕೈಗೊಳ್ಳಲಾಯಿತು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬ್ರಿಜೇಶ್ ಕುಮಾರ್ ಸಿಂಗ್ ತಿಳಿಸಿದರು.</p>.<p>‘ಮುಸ್ಲಿಂ ಸಮುದಾಯದ ಸದಸ್ಯರು ಗುರುವಾರ ಸುತ್ತಿಗೆಯಿಂದ ಮಸೀದಿ ಕೆಲ ಭಾಗಗಳನ್ನು ಕೆಡವಿದರು. ನಂತರ ಅದರ ರಚನೆಯನ್ನು ಕೆಡವಲಾಯಿತು. ಬಳಿಕ ಬುಲ್ಡೋಜರ್ ನೆರವಿನಿಂದ ಇಡೀ ಮಸೀದಿಯನ್ನು ಪೂರ್ಣವಾಗಿ ಕೆಡವಿ, ಅವಶೇಷಗಳನ್ನು ತೆರವುಗೊಳಿಸಲಾಯಿತು’ ಎಂದು ಅವರು ಮಾಹಿತಿ ನೀಡಿದರು.</p>.<p>‘ಪರಸ್ಪರ ಒಪ್ಪಂದದೊಂದಿಗೆ ಈ ಕಾರ್ಯ ನಡೆದಿದೆ. ಬೇರೆಡೆ ಮಸೀದಿ ನಿರ್ಮಾಣಕ್ಕೆ ಪರ್ಯಾಯ ಜಾಗವನ್ನು ಒದಗಿಸಿಲ್ಲ. ಈ ಕುರಿತು ಮುಸ್ಲಿಂ ಸಮುದಾಯದಿಂದ ಯಾವುದೇ ಪ್ರಸ್ತಾವವೂ ಬಂದಿಲ್ಲ’ ಎಂದು ಅವರು ಹೇಳಿದರು. </p>.<p>‘ಮಸೀದಿ ಎಷ್ಟು ವರ್ಷಗಳಷ್ಟು ಹಳೆಯದು ಎಂಬುದರ ಕುರಿತು ಸ್ಥಳೀಯರಲ್ಲಿ ಸ್ಪಷ್ಟತೆಯಿಲ್ಲ. ಕೆಲವರು 80 ವರ್ಷಗಳಷ್ಟು ಹಳೆಯದು ಎಂದರೆ, ಮತ್ತೆ ಕೆಲವರು 168 ವರ್ಷಗಳಷ್ಟು ಹಳೆಯದು ಎನ್ನುತ್ತಾರೆ’ ಎಂದು ಅವರು ತಿಳಿಸಿದರು.</p>.<p>‘ನಾವೇ ಮಸೀದಿಯನ್ನು ತೆರವುಗೊಳಿಸಿದ್ದೇವೆ. ಆದರೆ ಮಸೀದಿಯ ಐತಿಹಾಸಿಕತೆಯನ್ನು ಸಾಬೀತುಪಡಿಸುವ 1857ರ ದಾಖಲೆಗಳು ನಮ್ಮ ಬಳಿಯಿವೆ’ ಎಂದು ಮಸೀದಿಯ ಪ್ರತಿನಿಧಿ ಹಾಜಿ ಸ್ವಾಲೆ ಹೀನ್ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>