ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ: ಶಂಕಿತರನ್ನು ಹಿಂಬಾಲಿಸುತ್ತಿದ್ದ ಕಾನ್‌ಸ್ಟೆಬಲ್‌ ಹತ್ಯೆ

Published 10 ಮೇ 2023, 11:51 IST
Last Updated 10 ಮೇ 2023, 11:51 IST
ಅಕ್ಷರ ಗಾತ್ರ

ಜಾಲೌನ್‌ (ಉತ್ತರ ಪ್ರದೇಶ) (ಪಿಟಿಐ): ‘ಶಂಕಿತ ವ್ಯಕ್ತಿಗಳನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ಕಾನ್‌ಸ್ಟೆಬಲ್‌ವೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಒರೈ ಪ್ರದೇಶದಲ್ಲಿ ನಡೆದಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಹೈವೇ ಪೊಲೀಸ್‌ ಔಟ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭೇಡ್‌ಜೀತ್‌ ಸಿಂಗ್‌ ಅವರು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಶಂಕಿತ ವ್ಯಕ್ತಿಗಳನ್ನು ನಿಲ್ಲಿಸಲು ಮುಂದಾಗಿದ್ದರು. ಆದರೆ ಅವರು ಬೈಕ್‌ ನಿಲ್ಲಿಸಿಲ್ಲ. ಈ ವೇಳೆ ಭೇಡ್‌ಜೀತ್‌ ಶಂಕಿತರ ಬೈಕ್‌  ಬಾಲಿಸಿದ್ದಾರೆ. ಆಗ ಶಂಕಿತರು ಭೇಡ್‌ಜೀತ್‌ಗೆ ಗುಂಡು ಹಾರಿಸಿದ್ದಾರೆ’ ಎಂದು ಎಸ್ಪಿ ಇರಾಜ್‌ ರಾಜ ಅವರು ತಿಳಿಸಿದ್ದಾರೆ.

‘ಕೊಲೆಗಾರರಿಗಾಗಿ ಶೋಧ ನಡೆಯುತ್ತಿದೆ‘ ಎಂದೂ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT