ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರು ಮತ್ತು ಠಾಕೂರರ ನಡುವೆ ದಶಕದಿಂದಲೂ ಇರುವ ಪೈಪೋಟಿ, ಬ್ರಾಹ್ಮಣ ಸಮುದಾಯದ ವಿನಯ್ ಶಂಕರ್ ಮಿಶ್ರಾ ಅವರು ಸಮಾಜವಾದಿ ಪಕ್ಷ ಸೇರುವುದರೊಂದಿಗೆ ಮತ್ತಷ್ಟು ತೀವ್ರಗೊಂಡಿದೆ. ಠಾಕೂರ್ ಸಮುದಾಯಕ್ಕೆ ಸೇರಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತವರಿನಲ್ಲಿಯೇ ಬ್ರಾಹ್ಮಣರ ಪೈಪೋಟಿಯನ್ನು ಎದುರಿಸಬೇಕಾಗಿದೆ.