<p><strong>ಮೌ (ಉತ್ತರ ಪ್ರದೇಶ): </strong>ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್ಬಿಎಸ್ಪಿ) ಬಂಡಾಯ ನಾಯಕರು ಮಂಗಳವಾರ ಇಲ್ಲಿ ಹೊಸ ಪಕ್ಷವನ್ನು ಘೋಷಿಸಿದರು. ಮಹೇಂದ್ರ ರಾಜ್ಭರ್ ಅವರನ್ನು ಪಕ್ಷದ ಮೊದಲ ಅಧ್ಯಕ್ಷರಾಗಿಯೂ ಆಯ್ಕೆ ಮಾಡಲಾಗಿದೆ.</p>.<p>ಘಾಜಿಪುರ ಟ್ರಿಸೆಕ್ಷನ್ನಲ್ಲಿರುವ ಪ್ಲಾಜಾದಲ್ಲಿ 'ಮಹಾಪಂಚಾಯತ್' ಆಯೋಜಿಸಲು ಅನುಮತಿ ನಿರಾಕರಿಸಿದ ನಂತರ ಮಹೇಂದ್ರ ಅವರ ಬೆಂಬಲಿಗರು ಎಸ್ಬಿಎಸ್ಪಿ ಅಧ್ಯಕ್ಷ ಓಂ ಪ್ರಕಾಶ್ ರಾಜ್ಭರ್ ವಿರುದ್ಧ ಘೋಷಣೆ ಕೂಗಿದರು. ಈ ನಡುವೆಯೇ ಮಹೇಂದ್ರ ರಾಜ್ಭರ್ ಅವರು ಜಿಲ್ಲಾಧಿಕಾರಿ ಕಚೇರಿಯ ಹೊರಗೆ 'ಸುಹೇಲ್ದೇವ್ ಸ್ವಾಭಿಮಾನ್ ಪಾರ್ಟಿ' ರಚನೆಯನ್ನು ಘೋಷಿಸಿದರು.</p>.<p>ಮಹೇಂದ್ರ ರಾಜ್ಭರ್ ಅವರ ಬೆಂಬಲಿಗರು ಬೆಳಿಗ್ಗೆ ಮಹಾಪಂಚಾಯತ್ ನಡೆಯುವ ಸ್ಥಳಕ್ಕೆ ತಲುಪಿದಾಗ ಕಟ್ಟಡಕ್ಕೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ನಂತರ ಅವರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದು, ಅಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ. ಈ ಸಂದರ್ಭ ಮಹೇಂದ್ರ ರಾಜ್ಭರ್ ರಸ್ತೆಯಲ್ಲೇ ಹೊಸ ಪಕ್ಷವನ್ನು ಘೋಷಿಸಿದರು.</p>.<p>ಈ ಕುರಿತಂತೆ ಪ್ತತಿಕ್ರಿಯಿಸಿರುವ ಮಹೇಂದ್ರ ರಾಜ್ಭರ್, ಮೌ ಜಿಲ್ಲಾಡಳಿತವು ತಮಗೆ ಮಹಾಪಂಚಾಯತ್ ನಡೆಸಲು ಅವಕಾಶ ನೀಡಲಿಲ್ಲ. ಅದಕ್ಕೆ ಓ ಪಿ ರಾಜ್ಭರ್ ಕಾರಣ ಎಂದು ಆರೋಪಿಸಿದರು.</p>.<p>ಎಸ್ಬಿಎಸ್ಪಿ ಬಂಡಾಯ ನಾಯಕರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಪಿಎಸಿ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಜಿಲ್ಲಾಡಳಿತವು ಕಟ್ಟೆಚ್ಚರ ವಹಿಸಿತ್ತು.</p>.<p>ಓ ಪಿ ರಾಜ್ಭರ್ ಅವರು ಪಕ್ಷದ ಮೂಲ ತತ್ವಗಳಿಂದ ವಿಮುಖರಾಗಿದ್ದಾರೆ ಮತ್ತು ಅವರು ತಮ್ಮ ಇಬ್ಬರು ಪುತ್ರರ ಮಾತನ್ನು ಮಾತ್ರ ಕೇಳುತ್ತಾರೆಯೇ ಹೊರತು ಕಾರ್ಯಕರ್ತರ ಮಾತನ್ನಲ್ಲ ಎಂದು ಬಂಡಾಯ ನಾಯಕರು ಮಂಗಳವಾರ ಆರೋಪಿಸಿದ್ದಾರೆ.</p>.<p>ಓ ಪಿ ರಾಜ್ಭರ್ ಅವರು ಪಕ್ಷದ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬಂಡಾಯ ನಾಯಕರಲ್ಲಿ ಒಬ್ಬರಾದ ಚಂದ್ರಶೇಖರ್ ರಾಜ್ಭರ್ ಆರೋಪಿಸಿದರು. ಈಗ ನಾವು ಮಹೇಂದ್ರ ರಾಜ್ಭರ್ ಅವರ ನೇತೃತ್ವದಲ್ಲಿ 'ಸುಹೇಲ್ದೇವ್ ಸ್ವಾಭಿಮಾನ್ ಪಕ್ಷವನ್ನು ಬಲಪಡಿಸುತ್ತೇವೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೌ (ಉತ್ತರ ಪ್ರದೇಶ): </strong>ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್ಬಿಎಸ್ಪಿ) ಬಂಡಾಯ ನಾಯಕರು ಮಂಗಳವಾರ ಇಲ್ಲಿ ಹೊಸ ಪಕ್ಷವನ್ನು ಘೋಷಿಸಿದರು. ಮಹೇಂದ್ರ ರಾಜ್ಭರ್ ಅವರನ್ನು ಪಕ್ಷದ ಮೊದಲ ಅಧ್ಯಕ್ಷರಾಗಿಯೂ ಆಯ್ಕೆ ಮಾಡಲಾಗಿದೆ.</p>.<p>ಘಾಜಿಪುರ ಟ್ರಿಸೆಕ್ಷನ್ನಲ್ಲಿರುವ ಪ್ಲಾಜಾದಲ್ಲಿ 'ಮಹಾಪಂಚಾಯತ್' ಆಯೋಜಿಸಲು ಅನುಮತಿ ನಿರಾಕರಿಸಿದ ನಂತರ ಮಹೇಂದ್ರ ಅವರ ಬೆಂಬಲಿಗರು ಎಸ್ಬಿಎಸ್ಪಿ ಅಧ್ಯಕ್ಷ ಓಂ ಪ್ರಕಾಶ್ ರಾಜ್ಭರ್ ವಿರುದ್ಧ ಘೋಷಣೆ ಕೂಗಿದರು. ಈ ನಡುವೆಯೇ ಮಹೇಂದ್ರ ರಾಜ್ಭರ್ ಅವರು ಜಿಲ್ಲಾಧಿಕಾರಿ ಕಚೇರಿಯ ಹೊರಗೆ 'ಸುಹೇಲ್ದೇವ್ ಸ್ವಾಭಿಮಾನ್ ಪಾರ್ಟಿ' ರಚನೆಯನ್ನು ಘೋಷಿಸಿದರು.</p>.<p>ಮಹೇಂದ್ರ ರಾಜ್ಭರ್ ಅವರ ಬೆಂಬಲಿಗರು ಬೆಳಿಗ್ಗೆ ಮಹಾಪಂಚಾಯತ್ ನಡೆಯುವ ಸ್ಥಳಕ್ಕೆ ತಲುಪಿದಾಗ ಕಟ್ಟಡಕ್ಕೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ನಂತರ ಅವರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದು, ಅಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ. ಈ ಸಂದರ್ಭ ಮಹೇಂದ್ರ ರಾಜ್ಭರ್ ರಸ್ತೆಯಲ್ಲೇ ಹೊಸ ಪಕ್ಷವನ್ನು ಘೋಷಿಸಿದರು.</p>.<p>ಈ ಕುರಿತಂತೆ ಪ್ತತಿಕ್ರಿಯಿಸಿರುವ ಮಹೇಂದ್ರ ರಾಜ್ಭರ್, ಮೌ ಜಿಲ್ಲಾಡಳಿತವು ತಮಗೆ ಮಹಾಪಂಚಾಯತ್ ನಡೆಸಲು ಅವಕಾಶ ನೀಡಲಿಲ್ಲ. ಅದಕ್ಕೆ ಓ ಪಿ ರಾಜ್ಭರ್ ಕಾರಣ ಎಂದು ಆರೋಪಿಸಿದರು.</p>.<p>ಎಸ್ಬಿಎಸ್ಪಿ ಬಂಡಾಯ ನಾಯಕರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಪಿಎಸಿ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಜಿಲ್ಲಾಡಳಿತವು ಕಟ್ಟೆಚ್ಚರ ವಹಿಸಿತ್ತು.</p>.<p>ಓ ಪಿ ರಾಜ್ಭರ್ ಅವರು ಪಕ್ಷದ ಮೂಲ ತತ್ವಗಳಿಂದ ವಿಮುಖರಾಗಿದ್ದಾರೆ ಮತ್ತು ಅವರು ತಮ್ಮ ಇಬ್ಬರು ಪುತ್ರರ ಮಾತನ್ನು ಮಾತ್ರ ಕೇಳುತ್ತಾರೆಯೇ ಹೊರತು ಕಾರ್ಯಕರ್ತರ ಮಾತನ್ನಲ್ಲ ಎಂದು ಬಂಡಾಯ ನಾಯಕರು ಮಂಗಳವಾರ ಆರೋಪಿಸಿದ್ದಾರೆ.</p>.<p>ಓ ಪಿ ರಾಜ್ಭರ್ ಅವರು ಪಕ್ಷದ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬಂಡಾಯ ನಾಯಕರಲ್ಲಿ ಒಬ್ಬರಾದ ಚಂದ್ರಶೇಖರ್ ರಾಜ್ಭರ್ ಆರೋಪಿಸಿದರು. ಈಗ ನಾವು ಮಹೇಂದ್ರ ರಾಜ್ಭರ್ ಅವರ ನೇತೃತ್ವದಲ್ಲಿ 'ಸುಹೇಲ್ದೇವ್ ಸ್ವಾಭಿಮಾನ್ ಪಕ್ಷವನ್ನು ಬಲಪಡಿಸುತ್ತೇವೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>