ಮಹೇಂದ್ರ ರಾಜ್ಭರ್ ಅವರ ಬೆಂಬಲಿಗರು ಬೆಳಿಗ್ಗೆ ಮಹಾಪಂಚಾಯತ್ ನಡೆಯುವ ಸ್ಥಳಕ್ಕೆ ತಲುಪಿದಾಗ ಕಟ್ಟಡಕ್ಕೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ. ನಂತರ ಅವರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದು, ಅಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ. ಈ ಸಂದರ್ಭ ಮಹೇಂದ್ರ ರಾಜ್ಭರ್ ರಸ್ತೆಯಲ್ಲೇ ಹೊಸ ಪಕ್ಷವನ್ನು ಘೋಷಿಸಿದರು.